ಕಾಂತಾರ ಚಾಪ್ಟರ್ 1 ಚಿತ್ರತಂಡಕ್ಕೆ ತಪ್ಪದ ಸಂಕಷ್ಟ: ಸಾಲು ಸಾಲು ಸಾವಿನ ಸುಳಿವು ಕೊಟ್ಟ ದೈವ!

0
Spread the love

2022ರಲ್ಲಿ ತೆರೆಕಂಡ ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾ ದೇಶ, ವಿದೇಶದ ಮಂದಿಯನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿತ್ತು. ತುಳು ನಾಡ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದ ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್‌ ೧ ಚಿತ್ರೀಕರಣದ ಬ್ಯುಸಿಯಾಗಿದ್ದಾರೆ. ಆದ್ರೆ ಚಿತ್ರತಂಡಕ್ಕೆ ಮಾತ್ರ ಒಂದರ ಹಿಂದೊದರಂತೆ ಸಾವಿನ ಹೊಡೆತಗಳು ಬೀಳುತ್ತಿದ್ದು ಇದರಿಂದ ಚಿತ್ರತಂಡ ಕಂಗಾಲಾಗಿದೆ.

Advertisement

ʼಕಾಂತಾರ ಚಾಪ್ಟರ್ 1 ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಲೇ ಇದೆ. ಇದೇ ವಿಚಾರಕ್ಕೆ ರಿಷಬ್ ಶೆಟ್ಟಿ ದೈವದ ಮೊರೆ ಹೋಗಿದ್ದು ಇದೆ. ಆ ವೇಳೆ ರಿಷಬ್ ಶೆಟ್ಟಿಗೆ ದೈವವೇ ಸಾಲು ಸಾಲು ಸಾವಿನ ಸುಳಿವು ನೀಡಿತ್ತಾ ಎನ್ನುವ ಪ್ರಶ್ನೆ ಮೂಡಿದೆ.

ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋ ಕಲಾವಿದ, ಪ್ರತಿಭಾನ್ವಿತ ನಟ ರಾಕೇಶ್ ಪೂಜಾರ್ ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಕಾಂತಾರ ಚಾಪ್ಟರ್​ 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ರಾಕೇಶ್​ ಪೂಜಾರಿ ಅವರಿಗೆ ಸಿಕ್ಕಿತ್ತು. ಇದೇ ಖುಷಿಯಲ್ಲಿ ರಾಕೇಶ್ ಸಿನಿಮಾ ಶೂಟಿಂಗ್​ನಲ್ಲೂ ಭಾಗಿಯಾಗಿದ್ರು. ಬೆಳಗ್ಗೆ ಶೂಟಿಂಗ್ ಮುಗಿಸಿ ಬಂದ ರಾಕೇಶ್​ ಪೂಜಾರಿ ಅವರಿಗೆ ರಾತ್ರಿ ಹೃದಯಾಘಾತ ಸಂಭವಿಸಿದ್ದು, ರಾಕೇಶ್ ಸಾವು ಇಡೀ ಚಿತ್ರತಂಡವನ್ನೇ ಬೆಚ್ಚಿಬೀಳಿಸಿದೆ.

ಕಾಂತಾರ ಸಿನಿಮಾಗಾಗಿಯೇ ರಾಕೇಶ್ ಪೂಜಾರಿ ತನ್ನ ಗೆಟಪ್ ಬದಲಿಸಿದ್ದರಂತೆ. ಗಡ್ಡ ಬೆಳಸಿಕೊಂಡು, ವರ್ಕೌಟ್ ಮಾಡಿ ಲುಕ್ ಬದಲಿಸಿಕೊಂಡಿದ್ರು ಎಂದು ರಾಕೇಶ್​ ಆಪ್ತರು ಹೇಳಿಕೊಂಡಿದ್ದಾರೆ. ಕಾಂತಾರದಂತಹ ದೊಡ್ಡ ಸಿನಿಮಾದಲ್ಲಿ ನಟಿಸುತ್ತಿದ್ದ ಖುಷಿ ರಾಕೇಶ್ ಅವರಲ್ಲಿ ಇತ್ತು. ಆದರೆ ಅದಕ್ಕೂ ಮುನ್ನವೇ ರಾಕೇಶ್‌ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಪ್ರತಿಯೊಬ್ಬರಿಗೂ ಶಾಕ್‌ ಆಗಿದೆ.

ರಾಕೇಶ್ ನಿಧನದ ಬಗ್ಗೆ ಮಾತಾಡಿದ ಅವರ ಆಪ್ತ ಲೋಕೇಶ್​, ಕಾಂತಾರ ಸಿನಿಮಾ ಸಂಕಷ್ಟದ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸುತ್ತಿದ್ದ ಮೂವರು

ಆರ್ಟಿಸ್ಟ್ ಗಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರಿಗೆ ದೈವ ಹೇಳಿತ್ತಂತೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಚಿತ್ರದ ಬಗ್ಗೆ ಏನು ಹೇಳಲು ಆಗೋದಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.

ಮುಂಜಾಗ್ರತೆಯನ್ನ ಚಿತ್ರತಂಡ ತೆಗೆದುಕೊಳ್ಳಬೇಕಿದೆ. ಚಿತ್ರತಂಡವೇ ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಬೇಕಿದೆ. ರಾಕೇಶ್ ಮನೆಯ ಆಧಾರಸ್ತಂಭವಾಗಿದ್ದ. ಅವನಿಗೆ ಅಮ್ಮ , ತಂಗಿ ಇಬ್ರೇ ಇರೋದು. ಮನೆ ಮಗನನ್ನು ಕಳೆದುಕೊಂಡು ಅವರು ಹೇಗಿರ್ತಾರೋ ಎಂದು ಲೋಕೇಶ್​ ಕಣ್ಣೀರು ಹಾಕಿದ್ದಾರೆ.

ಇತ್ತೀಚಿಗಷ್ಟೇ ಕಾಂತಾರ ಚಾಪ್ಟರ್ 1 ಸೆಟ್​​ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್​ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ರು. ಈಗ ರಾಕೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿಂದೆ ಆರ್ಟಿಸ್ಟ್​ಗಳಿದ್ದ ಬಸ್​ ಅಪಘಾತವಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು. ಕಲಾವಿದರಿಗೆ ಸಂಬಳ ನೀಡದ ಆರೋಪದ ಜೊತೆಗೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕೂಡ ಕಾಂತಾರ ಚಿತ್ರತಂಡದ ವಿರುದ್ಧ ಕೇಳಿ ಬಂದಿತ್ತು.


Spread the love

LEAVE A REPLY

Please enter your comment!
Please enter your name here