ಕೊತ್ತನೂರು ಮಂಜುನಾಥ್ ಸೇನೆಯ ಬಗ್ಗೆ ಮಾತಾಡಿಲಾರರು, ಅವರೊಬ್ಬ ದೇಶಪ್ರೇಮಿ: ರಾಮಲಿಂಗಾರೆಡ್ಡಿ

0
Spread the love

ರಾಮನಗರ: ಕೊತ್ತನೂರು ಮಂಜುನಾಥ್ ಸೇನೆಯ ಬಗ್ಗೆ ಮಾತಾಡಿಲಾರರು, ಅವರೊಬ್ಬ ದೇಶಪ್ರೇಮಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ರಾಮನಗರದಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್ ಪಕ್ಕಾ ದೇಶಾಭಿಮಾನಿ. ಸೈನ್ಯದ ಬಗ್ಗೆ ಅವರು ತಪ್ಪು ಮಾತನಾಡಿಲ್ಲ. ಸೈನಿಕರ ಬಗ್ಗೆ ಕಾಂಗ್ರೆಸ್ ಯಾವತ್ತೂ ಅಪಮಾನ ಮಾಡಲ್ಲ.

Advertisement

ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಹೋರಾಟ ಮಾಡಿದ ಪಕ್ಷ. ಬಿಜೆಪಿಯವರು ಬೇಕಾದರೆ ಸೈನಿಕರಿಗೆ ಅಪಮಾನ ಮಾಡಬಹುದು ಆದರೆ ಕಾಂಗ್ರೆಸ್ ಮಾಡಲ್ಲ. ಸೇನಾ ಮುಖ್ಯಸ್ಥರು ಹೇಳಿರೋದನ್ನ ನಾವು ನಂಬುತ್ತೇವೆ ಹೊರತು ಬಿಜೆಪಿಗರ ಮಾತು ನಂಬಲ್ಲ ಎಂದು ಕೊತ್ತೂರು ಮಂಜುನಾಥ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನೂ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಇಂದು ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ಎಲ್ಲಾ ಸ್ಥಾನಕ್ಕೂ ಅರ್ಹವಾಗಿದ್ದಾರೆ.

ಲೋಕಸಭಾ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಬಯಸಿದರೆ ಯಾವ ಸ್ಥಾನ ಬೇಕಾದರೂ ಅವರಿಗೆ ಸಿಗುತ್ತಿತ್ತು. ಆದರೆ ಅವರು ಯಾವ ಸ್ಥಾನವನ್ನೂ ಕೇಳಿರಲಿಲ್ಲ. ಈಗ ಬಮೂಲ್‌ಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here