ಬೆಟಗೇರಿಯ ಗೌರಿ ಗಣೇಶ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿಯ ಸದಸ್ಯ ಶಿವರಾಜಕುಮಾರ ಗೊಂಡಬಾಳ ಮತ್ತು ಮುಖ್ಯ ಅತಿಥಿಗಳಾಗಿ ಬಸವರಾಜ ಕುಂದಗೋಳ, ಮಂಜುಳಾ ರಜಪೂತ ಪಾಲ್ಗೊಂಡಿದ್ದರು. ಜಿ.ಎಮ್. ನೀಲವಾನಿ ನಿರೂಪಿಸಿದರು. ಎಸ್.ಎಸ್. ಗುಗ್ಗರಿ ವಂದಿಸಿದರು. ಕೆ.ಬಿ. ಮಾರನಬಸರಿ, ಎಸ್.ಎಮ್. ದೇವದರ, ಯು.ಕೆ. ಕೊಂಗಾರಿ, ಎಮ್.ಎಲ್. ಕೊಪ್ಪಳ ಎಮ್.ಜಿ. ಬಡ್ನಿ ಉಪಸ್ಥಿತರಿದ್ದರು.