20.9 C
Gadag
Monday, October 2, 2023

ಜೀವ ಹಿಂಡುತ್ತಿರುವ ಗಾಳಿಪಟ ದಾರ; ನಿನ್ನೆ ಒಂದೇ ದಿನ ಪೊಲೀಸ್ ಸೇರಿ ಮೂವರಿಗೆ ಗಾಯ-ಯುವಕನ ಸ್ಥಿತಿ ಗಂಭೀರ

Spread the love

ನಿಷೇಧಿತ ಮಾಂಜಾ ದಾರದಿಂದ ಆಸ್ಪತ್ರೆ ಸೇರಿದ ಅಮಾಯಕರು….

ವಿಜಯಸಾಕ್ಷಿ ಸುದ್ದಿ, ಗದಗ

ಗಾಳಿಪಟ ಹಾರಿಸಲು ಉಪಯೋಗಿಸುವ ಮಾಂಜಾ ದಾರವನ್ನು ಮಾರಾಟ ಮಾಡದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ನಗರಸಭೆ ಸಿಬ್ಬಂದಿಗಳು ಮಾಂಜಾ ದಾರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಆದರೂ ಮಾಂಜಾ ದಾರ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದು, ಅಮಾಯಕ ಜನರ ಜೀವ ಹಿಂಡುತ್ತಿದೆ.

ನಿನ್ನೆ ಭಾನುವಾರ ಕಾರ ಹುಣ್ಣಿಮೆಯಂದು ಅವಳಿ ನಗರದ ವಿವಿಧೆಡೆ ಗಾಳಿಪಟ ದಾರಕ್ಕೆ ಸಿಲುಕಿ ಮೂರು ಜನರು ಗಾಯಗೊಂಡಿದ್ದಾರೆ.

ಡಂಬಳ ನಾಕಾದ ಬಳಿ, ವೀರನಾರಾಯಣ ದೇವಸ್ಥಾನ ದ ಸಮೀಪ ಸೇರಿದಂತೆ ಮೂರು ಕಡೆ ಗಾಳಿಪಟದ ದಾರದಿಂದ ಬೈಕ್ ಸವಾರರು, ಪಾದಚಾರಿಗಳಿಗೆ ಗಾಯವಾಗಿದೆ.

ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಬೈಕ್ ನಲ್ಲಿ ಹೋಗುವಾಗ ಮಾಂಜಾ ದಾರ ಬಡಿದು ರೈಲ್ವೆ ಪೊಲೀಸ್ ಸಿಬ್ಬಂದಿಯ ಮೂಗು, ಯುವಕನೊಬ್ಬನ ಕತ್ತಿಗೆ ದಾರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೊಬ್ಬನ ಪಾದಕ್ಕೆ ದಾರ ತಾಗಿದ್ದು ಆಸ್ಪತ್ರೆ ಸೇರುವಂತಾಗಿದೆ.

ಯುವಕನೊಬ್ಬನ ಕತ್ತಿಗೆ ಬಿದ್ದ ಮಾಂಜಾ ದಾರ ಜೀವಕ್ಕೆ ಅಪಾಯ ತಂದಿದ್ದು, ತೀವ್ರ ರಕ್ತಸ್ರಾವ ಆಗಿದೆ.

ನಿನ್ನೆಯ ದಿನ ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡವರ ವಿಡಿಯೋ ವೈರಲ್ ಆಗಿದ್ದು, ಇದರಿಂದಾಗಿ ಬೆಳಕಿಗೆ ಬಂದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 [email protected]

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!