ಬನ್ನಿಕೊಪ್ಪ ಗ್ರಾಮದಲ್ಲಿ ಮಹಾವೀರ ಜಯಂತಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗುರುವಾರ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಶ್ರೀ ಮಹಾವೀರ ಜನ್ಮ ಕಲ್ಯಾಣೋತ್ಸವವನ್ನು ಭಾವಚಿತ್ರ ಮೆರವಣಿಗೆಯ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಅನಿಲ ಬಡಿಗೇರ, ಜೈನ ಧರ್ಮ ಶಾಂತಿ ಸಾರುವ ಧರ್ಮವಾಗಿದೆ. ಭಗವಾನ್ ಮಹಾವೀರರು ರತ್ನತ್ರಯಗಳ ಮೂಲಕ ಜೈನ ಧರ್ಮದ ತತ್ವಗಳನ್ನು ಸಾರಿದ್ದಾರೆ. ಇವರ ಆದರ್ಶ ಸದಾಕಾಲ ಚಿರಸ್ಥಾಯಿಯಾಗಿರಲಿವೆ ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಸಮಾಜದ ಅಧ್ಯಕ್ಷ ಪದ್ಮಪ್ಪ ಹೋಳಗಿ, ಮಹಾವೀರ ಮಂಟಗಣಿ, ಸಕ್ರಪ್ಪ ಹೊಸೂರು, ವೀರಭದ್ರಪ್ಪ ಹೌಂಶಿ, ಪದ್ಮರಾಜಹೊಸೂರ, ಮಹಾವೀರ ಹೌಂಶಿ, ಶಿವನಗೌಡ ಪಾಟೀಲ, ಗುಡದೀರಪ್ಪ ಹೌಂಶಿ, ವಿಜಯಕುಮಾರ ಅಣ್ಣಿಗೇರಿ, ಸುನೀಲ ಹಿರೇಗೌಡರ, ಮಹಾವೀರ ಹೊಸೂರ, ಸುರೇಶ ಹೇಸಿ, ಕಿರಣ್ ಪಿಡ್ಡಿ, ರವಿ ಅಂಬೋಜಿ, ಗ್ರಾಮ ಪಂಚಾಯತ ಅಧ್ಯಕ್ಷ/ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಸಮಸ್ತ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here