ರೈತ ಮಹಿಳೆಗೆ ಸಾಲ ಕಟ್ಟುವಂತೆ ಒತ್ತಾಯಿಸುತ್ತಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ಮೈಲಾರಲಿಂಗೇಶ್ವರ ಬಡಾವಣೆಯ ನಿವಾಸಿಗಳು ಸಾಲದ 20 ಕಂತು ಕಟ್ಟಿದರೂ ಒಂದೇ ವಾರದಲ್ಲಿ ಕಂತು ಮರುಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ರೈತ ಮಹಿಳೆ ಲತಾ ಈಶಪ್ಪ ಮಠದ ಎನ್ನುವವರ ಮನೆಗೆ ಐಡಿಎಫ್‌ಸಿ ಫಸ್ಟ್ ಭಾರತ್ ಫೈನಾನ್ಸ್ನ ಮೂವರು ಸಿಬ್ಬಂದಿಗಳು ಬಂದು ಮನಸೋ ಇಚ್ಛೆ ಮಾತನಾಡಿದ ಘಟನೆ ವರದಿಯಾಗಿದೆ.

Advertisement

ಗ್ರಾಮದ ಲತಾ ಈಶಪ್ಪ ಮಠದ ಸೇರಿದಂತೆ ಗ್ರಾಮದ ಹಲವರು ಸದರಿ ಐಡಿಎಫ್‌ಸಿ ಫಸ್ಟ್ ಭಾರತ್ ಫೈನಾನ್ಸ್ನಲ್ಲಿ 35 ಸಾವಿರ ರೂ ಸಾಲ ಪಡೆದುಕೊಂಡು ಈಗಾಗಲೇ 20 ಕಂತಗಳಲ್ಲಿ 37800 ರೂ ಮರುಪಾವತಿ ಮಾಡಿದ್ದಾರೆ. ಕಟ್ಟಿದ್ದು. ಶೇ.14.74ರಂತೆ ಬಡ್ಡಿ ಹಣದೊಂದಿಗೆ ಇನ್ನು 4 ಕಂತು ಕಟ್ಟುವುದು ಬಾಕಿಯಿತ್ತು.

ಆದರೆ, ಈ ವಾರದ ಕಂತನ್ನು ಕಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆಯವರೆಗೆ ಬಂದು ನಮಗೆ ಭಯ ಹುಟ್ಟಿಸುವ ರೀತಿ ಮಾತನಾಡಿ ನೀವು ಕಂತು ಕಟ್ಟಲೇಬೇಕು. ಅಲ್ಲಿಯವರೆಗೆ ಮನೆ ಬಿಟ್ಟು ಕದಲುವುದಿಲ್ಲ, ಮನೆಗೆ ಬೀಗ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ನಮಗೆ ಸಮಯ ಕೊಡಿ, ಬೆಳೆ ಬಂದ ಕೂಡಲೇ ಸಾಲ ಕಟ್ಟುತ್ತೇವೆ ಎಂದರೂ ಕೇಳುತ್ತಿಲ್ಲ ಎಂದು ರೈತ ಮಹಿಳೆ ಲತಾ ಈಶಪ್ಪ ಮಠದ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಡಂಬಳ ಹೋಬಳಿಯಾದ್ಯಂತ ಮೈಕ್ರೋ ಫೈನಾನ್ಸ್ಗಳು 10 ಸಾವಿರದಿಂದ 50 ಸಾವಿರದವರೆಗೆ ಸಾಲವನ್ನು ನೀಡಿ ರಿಸರ್ವ್ ಬ್ಯಾಂಕಿನ ನಿಯಮಗಳನ್ನು ಗಾಳಿಗೆ ತೂರಿ ರೈತರ, ಕಾರ್ಮಿಕರ ಮತ್ತು ಜನಸಾಮನ್ಯರ ಮೇಲೆ ಅತಿ ಹೆಚ್ಚು ಬಡ್ಡಿಯನ್ನು ಹೇರಿ, ಸಾಲ ಪಡೆದವರ ಮೇಲೆ ಒಂದು ಸಣ್ಣ ನೋಟಿಸ್ ಕೂಡ ನೀಡದೆ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರು ಈ ಮೈಕ್ರೋ ಫೈನಾನ್ಸ್ನವರ ಸಭೆಯನ್ನು ಕರೆದು ತಿಳಿವಳಿಕೆ ನೀಡಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

“ಮೈಕ್ರೋ ಫೈನಾನ್ಸ್ಗಳು, ಅಲ್ಲಿನ ಸಿಬ್ಬಂದಿಗಳು ಸಾಲ ಮರುಪಾವತಿಯ ಬಗ್ಗೆ ಕಾನೂನು ಉಲ್ಲಂಘಿಸಿ ತೊಂದರೆ ನೀಡಿದರೆ ತಕ್ಷಣ ಜಿಲ್ಲಾ ಕಚೇರಿಗೆ ಬಂದು ಅರ್ಜಿಯನ್ನು ಸಲ್ಲಿಸಿದರೆ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ”

– ಸಿ.ಎನ್. ಶ್ರೀಧರ್.

ಗದಗ ಜಿಲ್ಲಾಧಿಕಾರಿ.


Spread the love

LEAVE A REPLY

Please enter your comment!
Please enter your name here