ಗದಗ: ಭಾರತ ಸೈನಿಕರ ಆಪರೇಷನ್ ಸಿಂಧೂರ ವಿಚಾರಕ್ಕೆ ಸಂಬಂಧಪಟ್ಟಂತೆ ಗದಗನಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ಧಿಗೋಷ್ಠಿ ನಡೆಸಿದ್ದಾರೆ. ಫಹಲ್ಗಾಮ್ನಲ್ಲಿ ಉಗ್ರಗಾಮಿಗಳು ಪಾಕಿಸ್ತಾನ ಕುತಂತ್ರದಿಂದ ಭಾರತೀಯರ ಮೇಲೆ ನಡೆದ ದಾಳಿ ಮಾಡಿದ್ರು.
ಅದಕ್ಕೆ ತಕ್ಕ ಶಾಸ್ತಿಯಾಗಿ ಉಗ್ರಗಾಮಿಗಳ ತಾಣಗಳನ್ನು ಭಾರತ ಸೈನ್ಯ ಧ್ವಂಸ ಮಾಡಿದೆ. ಭಾರತವನ್ನ ಕೆಣಕಿದ್ರೆ ತಕ್ಕ ಶಾಸ್ತಿ ಆಗುತ್ತೆ ಅನ್ನೊದು ಅವರಿಗೆ ತಿಳಿದಿರುತ್ತೆ. ಆದ್ದರಿಂದ ಭಾರತೀಯ ಸೈನ್ಯದ ದಾಳಿ ಸಮಾಧಾನ ತಂದಿದೆ ಎಂದು ಹೇಳಿದರು.
ಸುಮಾರು ಒಂಬತ್ತು ಕಡೆಗಳಲ್ಲಿ ಕಾರ್ಯಾಚರಣೆ ನಡೆದಿತ್ತು. ಸೂಕ್ತವಾದ ಪ್ರತಿಫಲ ಸಿಕ್ಕಿದೆ. ದೇಶದ ಜನ ಏನು ನಿರ್ಣಯ ಮಾಡಿ, ಒಕ್ಕಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಸಮರ್ಥ ಬಲ ಮೂಡುವ ಹಾಗೆ ಸೂಕ್ತ ಕಾರ್ಯಾಚರಣೆ ಆಗಿದ್ದು, ಇದು ಯುದ್ಧ ಕಾಲ ಎಲ್ಲರೂ ಸನ್ನದ್ಧರಾಗಿ ಇರಬೇಕು ಎಂದರು.
ಇನ್ನೂ ಯುದ್ಧ ಸನ್ನಿವೇಶ ಹಿನ್ನೆಲೆ ನಾಳೆ ಗದಗ ಜಿಲ್ಲಾಡಳಿತದಿಂದ ಸಭೆ ಆಯೋಜಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿ ಜೊತೆಗೆ ಮಾಜಿ ಸೈನಿಕರ ಜೊತೆಗೂ ಮಾತನಾಡಿದ್ದೇನೆ. ನಾಳೆ ಪೊಲೀಸ್ ಇಲಾಖೆ, ಮಾಜಿ ಸೈನಿಕರ ಜೊತೆ 10-30ಕ್ಕೆ ಗದಗ ಜಿಲ್ಲಾಡಳಿತ ಭವನದಲ್ಲಿ ನಡೆಸಲಿದ್ದೇವೆ. ಜನರನ್ನು ಜಾಗೃತರನ್ನಾಗಿ ಮಾಡಲು ಏನೇನೂ ಕ್ರಮ ಕೈಗೊಳ್ಳಬೇಕು ಅನ್ನೋ ಬಗ್ಗೆ ಸಮಾಲೋಚನೆ ಮಾಡ್ತೀವಿ ಎಂದು ಹೇಳಿದರು.