ಹಾಸನ: ಹಾಸನದ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಚನ್ನಕೇಶವಗೌಡ್ರು ಬೀದಿಯ ನಿವಾಸಿ ಗಿರೀಶ್ (28) ಕೊಲೆಯಾದ ಯುವಕನಾಗಿದ್ದು, ಕೊಲೆಗೈದ ಆರೋಪಿ ಸುರಪುರ ಗ್ರಾಮದ ಶ್ರೀನಿವಾಸ್ ಅಲಿಯಾಸ್ ಸೀನ, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಭಾನುವಾರ ರಾತ್ರಿ ಗಿರೀಶ್ ಮತ್ತು ಸೀನನ ನಡುವೆ ಯುವತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವಿಚಾರದಿಂದ ಕೋಪಗೊಂಡ ಸೀನ, ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಸಾರಿಗೆ ಬಸ್ ನಿಲ್ದಾಣದ ಬಳಿ ಗಿರೀಶ್ ಶೌಚಾಲಯದಿಂದ ಹೊರಬಂದ ಕ್ಷಣದಲ್ಲಿ, ಕಾದು ನಿಂತಿದ್ದ ಸೀನ ಮಚ್ಚಿನಿಂದ ನಿರಂತರವಾಗಿ ಕೊಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾನೆ.
ತೀವ್ರ ಗಾಯಗೊಂಡ ಗಿರೀಶ್ನನ್ನು ಅಂಬ್ಯುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯ ನಂತರ ಬೇಲೂರು ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.


