ಕೊಪ್ಪಳ: ಭೀಕರ ಅಪಘಾತಕ್ಕೆ ಯುವಕನ ಎಡಗಾಲಿನ ಹೆಬ್ಬೆಟ್ಟು ಕಟ್ ಆಗಿರುವ ಘಟನೆ ಕೊಪ್ಪಳ ಸಮೀಪದ ದದೇಗಲ್ ಬಳಿ ಜರುಗಿದೆ. ಬೈಕ್ ಒವರ್ ಸ್ಪೀಡ್ ನಿಂದ ಈ ಅವಘಡ ಸಂಭವಿಸಿದೆ.
Advertisement
ಕೊಪ್ಪಳ ಸಮೀಪದ ದದೇಗಲ್ ಬಳಿ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಎಡಗಾಲಿನ ಹೆಬ್ಬೆಟ್ಟು ಕಳೆದುಕೊಂಡು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಇಟಗಿ ನಿವಾಸಿ ಭರತ್ ಮಾರನಾಳ ನರಳುತ್ತಿದ್ದಾನೆ.
ಕೊಪ್ಪಳದಿಂದ ಇಟಗಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಧ್ಯ ಗಾಯಾಳು ಭರತ್ ನನ್ನ ಕೊಪ್ಪಳ ಜಿಲ್ಲಾ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.