Home Blog Page 2179

ಶನಿವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಗಿಂತ 2 ಸಾವಿರ ದುಬಾರಿ, ದೆಹಲಿಗಿಂತ 1,400 ರೂ ಸಸ್ತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,710 ರೂ. ಇದೆ. ಮುಂಬೈನಲ್ಲಿ ಕನಿಷ್ಠ 51,580 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,880 ರೂ.,24 ಕ್ಯಾರಟ್: 53,320 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,638 ರೂ., 24 ಕ್ಯಾರಟ್: 53,060 ರೂ.

ಬೆಂಕಿಯುಂಡೆಯಾದ ಶಾಸಕ ಬಂಡಿ: ಬೆವರಿದ ಇಒ, ಪಿಡಿಒಗಳು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ನರೇಗಾ ವೇತನ ಪಾವತಿಗೆ ಮೀನಮೇಷ ಮಾಡುವ, ಪಂಚಾಯತಿಗೆ ಸರಿಯಾಗಿ ಕರ್ತವ್ಯಕ್ಕೆ ಬಾರದ, ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಒಗಳ ವಿರುದ್ಧ ಕ್ರಮಕ್ಕೆ ಗ್ರಾಪಂ ಆಡಳಿತಾಧಿಕಾರಿಗಳು  ವರದಿ ನೀಡಿ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ತಾಲೂಕಾ ಪಂಚಾಯತಿಯಲ್ಲಿ ನಡೆದ ರೋಣ ಮತ್ತು ಗಜೇಂದ್ರಗಡ ತಾಲೂಕಿನ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರ ಆಕ್ರೋಶಕ್ಕೆ ತಪ್ಪು  ಮಾಡಿದ ಪಿಡಿಒ, ಆಡಳಿತಾಧಿಕಾರಿ ಮತ್ತು ಇಒಗಳು ಬೆವರಿ ಹೋದರು.
 
ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳು ಸರಿಯಾಗಿ ಬರುತ್ತಿಲ್ಲ ಎನ್ನುವ ದೂರುಗಳಿವೆ. ಅಲ್ಲದೆ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ದೂರವಾಣಿ ಮೂಲಕ ಪಿಡಿಒಗಳ ಸಂಪರ್ಕಿಸಲು ಪ್ರಯತ್ನಿಸಿದರೆ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಪಿಡಿಒಗಳ ಕಣ್ಣಾಮುಚ್ಚಾಲೆ ಆಟ ತಾ.ಪಂ ಕಾರ್ಯ ನಿರ್ವಾಹಕರಿಗೆ ಹಾಗೂ ಗ್ರಾ.ಪಂ ಆಡಳಿತಾಧಿಕಾರಿಗಳಿಗೆ ಕಾಣುತ್ತಿಲ್ಲವೆ ಎಂದು ಆಕ್ರೋಶಗೊಂಡರು.

ಸಭೆಯಲ್ಲಿ ಇದ್ದ ತಾ.ಪಂ  ಇಒ ಸಂತೋಷಕುಮಾರ ಪಾಟೀಲ, ‘ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಪಿಡಿಒಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ’ ಎಂದು ಉತ್ತರಿಸಿದರು. ಇದಕ್ಕೆ  ಮತ್ತೆ  ಆಕ್ರೋಶಗೊಂಡ ಶಾಸಕ ಕಳಕಪ್ಪ ಬಂಡಿ, ನೋಟಿಸ್ ನೀಡಿ ಸುಮ್ಮನಾಗುವುದಲ್ಲ, ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗಮನ ನೀಡದ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾ.ಪಂ ಇಒಗೆ ಎಚ್ಚರಿಸಿದರು.
 
ಸರ್ಕಾರದ ಯೋಜನೆಗಳು ಸಕಾಲದಲ್ಲಿ ಗ್ರಾಮಸ್ಥರಿಗೆ ತಲುಪಬೇಕು  ಎನ್ನುವ ಉದ್ದೇಶದಿಂದ ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭಿಸಲು ಸರ್ಕಾರ ಆದೇಶಿಸಿದೆ. ಆದರೆ ಕೆಲವು ಗ್ರಾ.ಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಆರಂಭವಾಗಿಲ್ಲ. ಹೀಗಾಗಿ 7 ದಿನಗಳಲ್ಲಿ ಕಡ್ಡಾಯವಾಗಿ ಸೇವಾ ಕೇಂದ್ರಗಳನ್ನು ಆರಂಭಿಸಲು ಪಿಡಿಒಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.

ತಾ.ಪಂ ಇಒ ಸಂತೋಷಕುಮಾರ ಪಾಟೀಲ ಸೇರಿ 31 ಗ್ರಾ.ಪಂ ಪಿಡಿಒಗಳು, ಆಡಳಿತಾಧಿಕಾರಿಗಳು ಇದ್ದರು.

‘ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ. ಪಿಡಿಒಗಳು 10 ದಿನದಲ್ಲಿ ರಸ್ತೆಗಳ  ದುರಸ್ತಿಗೆ ಅಗತ್ಯ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿ.ಪಂ ಸಿಒಇ ಅವರಿಗೆ ತಲುಪಿಸಬೇಕು.

-ಕಳಕಪ್ಪ ಬಂಡಿ, ಶಾಸಕರು

ಚಿನ್ನಾಭರಣ ಕಳ್ಳತನ; ಆರೋಪಿ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಯೊಂದಕ್ಕೆ‌ ನುಗ್ಗಿ ಮನೆಯಲ್ಲಿದ್ದ 3,16,500 ಮೌಲ್ಯದ ಚಿನ್ನಾಭರಣ ವಸ್ತುಗಳು ಮತ್ತು ನಗದು ಹಣ ದೋಚಿದ್ದ ಆರೋಪಿಯನ್ನು ಕುಕನೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗ್ಯಾಂಬ್ಲಿಂಗ್ ನೆರಳು: ಪ್ಲೇಸ್ಟೋರ್‌ನಿಂದ ಪೇಟಿಎಂ ಉಚ್ಛಾಟಿಸಿದ ಗೂಗಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಗೂಗಲ್ ಪ್ಲೇಸ್ಟೋರ್‌ನಿಂದ ಪೇಟಿಎಂ ಆ್ಯಪ್ ಅನ್ನು ಗೂಗಲ್ ತೆಗೆದು ಹಾಕಿದೆ. ಆದರೆ ಪೇಟಿಎಂ-ಫಾರ್-ಬಿಸಿನೆಸ್, ಪೇಟಿಎಂ ಮಾಲ್, ಪೇಟಿಎಂ ಮನಿ ಆ್ಯಪ್‌ಗಳನ್ನು ತೆಗೆಯಲಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಪೇಟಿಎಂ, ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದೆ.

ಗೂಗಲ್ ಕೂಡ ಖಚಿತ ಕಾರಣ ನೀಡಿಲ್ಲವಾದರೂ, ಅದರ ಬ್ಲಾಗ್‌ನಲ್ಲಿ, ‘ನಾವು ಕ್ಯಾಸಿನೊ ಅಥವಾ ಇತರ ಕಾನೂನುಬಾಹಿರ ಬೆಟ್ಟಿಂಗ್, ಜೂಜಿಗೆ ಆಸ್ಪದ ಮಾಡಿಕೊಡುವ  ಆ್ಯಪ್‌ಗಳನ್ನು ಬೆಂಬಲಿಸುವುದಿಲ್ಲ. ಯಾವುದಾದರೂ ಆ್ಯಪ್ ಅಂತಹ ಜೂಜಿನ ಸ್ಪೋರ್ಟಿಂಗ್ ವೆಬ್‌ಸೈಟ್‌ಗಳಿಗೆ ಲಿಂಕ್ ಕೊಡುತ್ತಿದ್ದರೆ ಅಂತವಕ್ಕೆ ಪ್ಲೇಸ್ಟೋರ್‌ನಲ್ಲಿ ಜಾಗವಿಲ್ಲ’ ಎಂದಿದೆ.

ಮತ್ತೆ ವಾಪಸ್ಸಾದ ಪೇಟಿಎಂ!

ಗೂಗಲ್ ಪ್ಲೇಸ್ಟೋರ್‌ನಿಂದ ಶುಕ್ರವಾರ ಹೊರ ಹಾಕಲ್ಪಟ್ಟಿದ್ದ ಪೇಟಿಎಂ ರಾತ್ರಿ ಹೊತ್ತಿಗೆ ಮತ್ತೆ ಪ್ಲೇಸ್ಟೋರ್‌ನಲ್ಲಿ ವಾಪಸ್ಸಾಗಿದೆ. ಪೇಟಿಎಂ ವಿವರಣೆ ಗೂಗಲ್‌ಗೆ ಸರಿ ಎನಿಸಿದ ಮೇಲೆ ಈ ಕ್ರಮ ತೆಗೆದುಕೊಂಡಿದೆ.

ಪೈಪ್ ಲೈನ್ ಒಡೆದು ನೀರು ಪೋಲು; ಬೆಳೆ ನಾಶದಿಂದ ರೈತ ಕಂಗಾಲು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿ, ಬೆಳೆ ನಾಶವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕನಕರಾಯನಗುಡ್ಡದ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಪೈಪ್ ಲೈನ್ ಒಡೆದ ಪರಿಣಾಮ, ಪಕ್ಕದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ, ಅಲ್ಲಿ ಬೆಳೆದಿದ್ದ ಟೊಮೋಟೊ, ಬದನೆಕಾಯಿ ನೀರು ಪಾಲಾಗಿದೆ.

ಹಮ್ಮಗಿ ಬ್ಯಾರೇಜ್ ನಿಂದ ಗದಗ ಬೆಟಗೇರಿ ಅವಳಿ ನಗರಕ್ಕೆ 24×7 ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ.

ಇನ್ನು ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನೋಡಿ ಸುಮ್ಮನೆ ತೆರಳಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ದಿನಗಳಿಂದಲೂ ನೀರು ಪೋಲಾಗುತ್ತಿದ್ದರೂ ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಐಪಿಎಲ್: ಪಂಜಾಬ್ ತಂಡದಲ್ಲಿ ಐವರು, ರಾಜಸ್ತಾನ್ ರಾಯಲ್ಸ್ ನಲ್ಲಿ ಮೂವರು ಕನ್ನಡಿಗರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶನಿವಾರ ಸೆ. 19ರಿಂದ ಐಪಿಎಲ್-20-20 ಆರಂಭವಾಗಲಿದೆ. ರಾಜ್ಯ ತಂಡಗಳ ನಡುವೆ ನಡೆಯುವ ಸೈಯ್ಯದ ಮುಷ್ತಾಕ್ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡು ಸಲ ಚಾಂಪಿಯನ್ ಆಗಿರುವ ಕರ್ನಾಟಕ ತಂಡದ ಹಲವಾರು ಆಟಗಾರರು ಈಗ ಐಪಿಎಲ್-20-20 ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ತಂಡಗಳ ಪರ ಆಡಲಿದ್ದಾರೆ.

ಇಲ್ಲಿ ಎರಡು ತಂಡಗಳ ವಿಷಯ ನೋಡಿ. ಪಂಚಾಬ್ ಎಲೆವೆನ್ ತಂಡದಲ್ಲಿ ಐವರು ಕನ್ನಡಿಗರು! ತಂಡದ ಕೋಚ್ ಅನಿಲ್ ಕುಂಬ್ಳೆ, ಕ್ಯಾಪ್ಟನ್ ಕೆ.ಎಲ್. ರಾಹುಲ್ ಜೊತೆಗೆ ಭಾರತ ತಂಡದಲ್ಲಿ ಆಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರುಣ್ ನಾಯರ್, ಆಲ್‌ರೌಂಡರ್‌ಗಳಾದ ಕೆ. ಗೌತಮ್ ಮತ್ತು ಜೆ. ಸುಚಿತ್ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ.

ರಾಜಸ್ತಾನ್ ರಾಯಲ್ಸ್ ನಲ್ಲಿ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಮತ್ತು ಗದಗಿನ ಹುಡುಗ ಅನಿರುದ್ಧ ಜೋಶಿ ಇದ್ದಾರೆ.

ಕೊರೊನಾ ಪಾಸಿಟಿವ್ ರಿಜಲ್ಟ್ ಬಂದಿದ್ದಕ್ಕೆ  ಆಸ್ಪತ್ರೆಯಲ್ಲೇ ವ್ಯಕ್ತಿ ಆತ್ಮಹತ್ಯೆ!

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೊರೋನಾ ಹಾವಳಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ‌. ಎಷ್ಟೋ ಜನ ಭಯಕ್ಕೆ ಪ್ರಾಣ ಬಿಡುತ್ತಿರುವ ಸಂಗತಿ ಗೊತ್ತಿರುವಂಥದ್ದೇ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ವ್ಯಕ್ತಿಯೊಬ್ಬ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಖಚಿತ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸರಿಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಕೆಮ್ಮಿನ ಸೌಂಡ್ ಆಧಾರದಲ್ಲಿ ಕೊವಿಡ್ ಪರೀಕ್ಷೆ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೆಮ್ಮು, ಜ್ವರ ಬಂದ ಕೂಡಲೇ ಈಗ ಕೊವಿಡ್ ಭೀತಿ ಶುರುವಾಗುತ್ತದೆ. ಇಂತಹ ಲಕ್ಷಣಗಳಿದ್ದೂ ಕೊವಿಡ್ ಇರದಿರುವ ಸಾಧ್ಯತೆ ಹೆಚ್ಚು. ಆದರೂ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕಲ್ಲ?
ಅದನ್ನು ತಪ್ಪಿಸಲೆಂದೇ ವಾಧ್ವಾನಿ ಇನ್‌ಸ್ಟಿಟ್ಯೂಟ್ ಈಗ ಒಂದು ಉಪಕರಣ ಸಂಶೋಧಿಸಿದೆ. ಕೃತಕ ಬುದ್ಧಿಮತ್ತೆ ಬಳಸಿ ಈ ಉಪಕರಣ ಕೆಲಸ ಮಾಡುತ್ತದೆ.

ವ್ಯಕ್ತಿಯ ಕೆಮ್ಮಿನಿಂದ ಉಂಟಾಗುವ ಶಬ್ದದ ನಮೂನೆಗಳನ್ನು ಪರೀಕ್ಷಿಸಿ ಕೊವಿಡ್ ಇಲ್ಲದಿರುವುದನ್ನು ಖಚಿತ ಪಡಿಸುತ್ತದೆ. ಸಂಶಯಾತ್ಮಕವಾಗಿದ್ದರೆ ಆಗ ಪರೀಕ್ಷೆಗೆ ಹೋಗಬಹುದು.
ದೂರದ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಒಮ್ಮೆಲೇ ಮಾಸ್ ಟೆಸ್ಟಿಂಗ್ ನಡೆಸಲು ಈ ಉಪಕರಣ ಉಪಕಾರಿ ಎನ್ನಲಾಗಿದೆ. ಸದ್ಯ ಕಂಪನಿ ಈ ಉಪಕರಣ ಬಳಸಿ ಬಿಹಾರ್ ಮತ್ತು ಒರಿಸ್ಸಾಗಳ ರಿಮೋಟ್ ಗ್ರಾಮಗಳಲ್ಲಿ ಕೊವಿಡ್ ಪರೀಕ್ಷೆ ನಡೆಸುತ್ತಿದೆ. 

ಮಲಗಿದ್ದ ವೇಳೆ ಗೋಡೆ ಕುಸಿತ: ದಂಪತಿ ಪಾರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶುಕ್ರವಾರ ಬೆಳಗಿನ ಜಾವ ಆ ದಂಪತಿ ಗಾಢ ನಿದ್ದೆಯಲ್ಲಿದ್ದರು. ಏಕಾಏಕಿ ಮನೆ ಗೋಡೆ ಕುಸಿದು ಬಿದ್ದಿತು. ಮಣ್ಣು-ಕಲ್ಲುಗಳ ನಡುವೆ ಸಿಕ್ಕ ಅವರನ್ನು ಜನ ಸೇರಿ ಸಾವಿನ ದವಡೆಯಿಂದ ಪಾರು ಮಾಡಿದರು.

ಗದಗ ತಾಲೂಕಿನ ಕಣವಿಯ ಕುರುಬರ ಓಣಿಯ ರೇವಣಸಿದ್ದೇಶ್ವರ ಗುಡಿ ಸಮೀಪ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬದುಕುಳಿದ ಗೂಳಪ್ಪ ಬಸಾಪೂರ(60) ಮತ್ತು ರೇಣವ್ವ ಗೂಳಪ್ಪ ಬಸಾಪೂರ(55) ದಂಪತಿಯನ್ನು ಜಿಮ್ಸ್ ಗೆ ಸೇರಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಂಪುಟ ಪುನಾರಚನೆಯೋ, ವಿಸ್ತರಣೆಯೋ? ರೇಸ್‌ನಲ್ಲಿ ಯಾರ‍್ಯಾರು?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇವತ್ತು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ನಡೆಯಲಿದ್ದು, ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನಾರಚನೆ ಮಾಡುವುದೋ ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಗುರುವಾರವೇ ದೆಹಲಿ ತಲುಪಿರುವ ಯಡಿಯೂರಪ್ಪ ಸಂಪುಟ ಪುನಾರಚನೆಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು 8 ಜನರನ್ನು ಸೇರ್ಪಡೆ ಮಾಡಿಕೊಳ್ಳುವುದು ಅವರ ಉದ್ದೇಶ. ಇದಕ್ಕೆ ಹೈಕಮಾಂಡ್ ಒಪ್ಪದಿದ್ದರೆ ವಿಸ್ತರಣೆಗಾದರೂ ಅವಕಾಶ ಪಡೆಯುವುದು ಅವರ ಗುರಿ.
ಗುರುವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತ್ ಶಾ ಭೇಟಿ ಕಷ್ಟವಿದೆ. ಈಗ ಚಡ್ಡಾ ಮತ್ತು ರಾಜನಾಥ್ ಸಿಂಗ್ ಮೂಲಕವೇ ಅಮಿತ್ ಶಾರನ್ನು ಒಪ್ಪಿಸುವ ಲೆಕ್ಕದಲ್ಲಿ ಯಡಿಯೂರಪ್ಪ ಇದ್ದಾರೆ.

ಈಗಾಗಲೇ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮತ್ತು ಎಚ್. ವಿಶ್ವನಾಥ್ ದೆಹಲಿಯಲ್ಲಿದ್ದಾರೆ. ಸದ್ಯ ಪರಿಷತ್ತಿನಿಂದ ಎಂಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್, ವಿಧಾನಸಭೆಯಿಂದ ಉಮೇಶ ಕತ್ತಿ, ಎಸ್. ಅಂಗಾರ, ಜಿಎಚ್ ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳು.

ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕಾಂಕ್ಷಿಯೇ. ಅಂದಂತೆ ಖಾಲಿ ಇರುವುದು ಐದೇ ಸ್ಥಾನಗಳು. ಪುನಾರಚನೆಯಾದರಷ್ಟೇ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ.
ಈ ಎಲ್ಲದರ ನಡುವೆ ವಿಸ್ತರಣೆ ಮತ್ತು ಪುನಾರಚನೆ ಎರಡೂ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಹೇಳಿದರೂ ಹೇಳಬಹುದು!

error: Content is protected !!