Home Blog Page 3199

ಕಣ್ಣಾದವಳು…

ಒಂದು ವೇಳೆ ನಿನಗೆ ನಾ ಸಿಕ್ಕರೆ ನಿನ್ನಲ್ಲಿನ ಮಾತುಗಳು ಯಾವ ರೂಪ ತಾಳಿ ಹೇಳುವೆ ಎಷ್ಟು ದಿನಗಳು ನೀನು ಇಲ್ಲ ಅನ್ನೋ ಕೊರಗು ನನ್ನ ಮನುಷ್ಯ ಅನ್ನೋದನ್ನ ಮರೆಸಿದೆ ಹೇಗೆ ನಿನ್ನ ನೋಡಿದೆ ಯಾಕೆ ನಿನ್ನ ನೋಡಿದೆ ನನ್ನ ಕಣ್ಣಿಗೆ ನೀ ಯಾಕೆ ಬಿದ್ದೆ ಇದೆಲ್ಲವೂ ನನ್ನ ಪ್ರಶ್ನೆಯಾಗಿ ಕಾಡುತ್ತಿದೆ ಯಾವ ಬಂಧವೋ ? ಯಾವ ಅನುರಾಗವೋ ?ನಾ ಕಾಣೆ ನಿನ್ನ ಭಾಹು ಬಂಧನದಲ್ಲಿ ಸಿಲುಕಿ ನರಳಿ ನರಳಿ ನಿನ್ನ ನೆನಪಲ್ಲಿ ಹುಚ್ಚನಾಗಿ ಹೋಗಿದ್ದೇನೆ

“ಹೇಳಲು ನೂರಾರು ಮಾತುಗಳು ಮೂಡುವವು ನೀನು ಜೊತೆಗಿದ್ದಾಗ, ಇಂದು ಅದೇ ತುಟಿಯಿಂದ ಒಂದು ಕಿರುನಗೆಯು ಮೂಡುತ್ತಿಲ್ಲ ಕೈ ಕಾಲುಗಳಿಗೆ ಸ್ವಾಧೀನವೇ ಇದೆಯೋ ಇಲ್ಲವೋ ಅನ್ನೋ ಹಾಗೆ ದಿನಗಳ ಸಾಗಿಸುತ್ತಿದ್ದೇನೆ ,ಎಂದು ಒಂದು ದಿನ ನನ್ನ ಹುಡುಕಿ ಬರುವೆಯೇನೋ ಎಂದು.

“ನೀನಿಲ್ಲದ ಕ್ಷಣಗಳ ನೆನೆಸಿಕೊಂಡರೆ ಮೈಯೆಲ್ಲ ಬಿಸಿಯಾಗಿ ಹಾಕಿದ್ದ ಅಂಗಿ ಕೂಡ ಸುಟ್ಟು ಧಗ ಧಗನೆ ಉರಿದಂತೆ ಅನಿಸುತ್ತಿದೆ ಎಲ್ಲಿ ಹೋದೆ ನೀನು ಬಿಸಿಯಾದ ನನ್ನ ಮನವ ತಣಿಸಲು ನೀನು ಬರಬಾರದೆ ..ಒಂದು ಕ್ಷಣ ನಿನ್ನ ದೂರ ಮಾಡಿ ಇದ್ದವನಲ್ಲ ನಿನ್ನ ಮಡಿಲ ಬಿಟ್ಟು ಅರೆ ಕ್ಷಣವೂ ನಿದ್ದೆ ಹೋದವನಲ್ಲ ನಿನ್ನದೇ ಚಿಂತೆ ನನಗೀಗ …

“ನಿನಗೆ ನೆನಪಿದಿಯ ನಮ್ಮ ಮನೆಯ ಹಿಂಭಾಗದಲ್ಲಿ ಇರುವ ನದಿಯ ಬಳಿಯಲ್ಲಿ ದೋಣಿಯಲ್ಲಿ ಸಾಗಿ ಹೊಂಗೆ ಮರಗಳ ಗುಂಪುಲಿ ನೀನು ನನ್ನ ಕರೆದುಕೊಂಡು ಹೋಗಿ ಮುತ್ತಿನ ಮಳೆಗೆರೆವೆ ಹೊಂಗೆ ಮರದ ಹೂಗಳ ಕಿತ್ತು ನಿನ್ನ ಮುಡಿಯಲ್ಲಿ ಇರಿಸಿ ನಾನು ಹೇಗಿದ್ದೀನಿ ಚೆಂದ ಉಂಟಾ ಎಂದು ಕೇಳುತ್ತಿದ್ದೆ…

“ಅಲ್ಲೇ ಸಣ್ಣದಾಗಿ ಜೇನುಗಳು ಗೂಡು ಕಟ್ಟಿದ್ದು ಕಂಡಾಗ ನೀನು ನನಗೆ ಜೇನು ಬೇಕು ಎಂದು ಹಠ ಮಾಡಿದಾಗ ಹೊಂಗೆ ಮರದ ಎಲೆಗಳನ್ನು ಒಂದೊಂದೇ ಪೋಣಿಸಿ ನನ್ನ ಮುಖವೆಲ್ಲ ಕಾಣದಂತೆ ಮಾಡಿ ,ನನ್ನ ಹೊಟ್ಟೆ ಸುತ್ತಲೂ ಸಣ್ಣ ಸಣ್ಣ ತುಂಡುಗಳ ಮರದ ಎಳೆಯ ಕಡ್ಡಿಗಳನ್ನು ಇಟ್ಟು ದಾರದಲ್ಲಿ ಸುತ್ತಿ ಕಟ್ಟಿ ಸಿಹಿ ಜೇನು ತಂದು ಕೊಡು ಎಂದು ಹಠ ಮಾಡಿ ಜೇನು ಕೀಳಲು ಕಳಿಸುತ್ತಿದ್ದೆ ..

“ನೀನು ಮಾತ್ರ ಮರದ ಹಿಂದೆ ನಿಂತು ಕಣ್ಣು ಮುಚ್ಚಿಕೊಂಡು ಜೇನು ಕಿತ್ತಿದ್ದು ಆಯ್ಥ ಎಂದು ಅಲ್ಲಿಂದಲೇ ಕೇಳುತ್ತಿದ್ದೆ ಎಷ್ಟು ಕಷ್ಟು ಪಟ್ಟು ನಿನಗೆ ಜೇನು ಕಿತ್ತು ನಿನ್ನಲ್ಲಿಗೆ ಬಂದಾಗ” ಬಂಗಾರ ನಿನಗೆ ಏನು ಆಗಿಲ್ಲ ಅಲ್ವಾ ಎಂದು ಕೇಳಿ ಆ ಜೇನನ್ನು ನನಗೆ ಮೊದಲು ತಿನಿಸುತ್ತಿದ್ದೆ ..

“ನಿನಗಾಗಿ ತಂದಿದ್ದು ಎಂದಾಗ ನನಗಾಗಿ ನೀನು ಮೀನಮೇಷ ಎಣಿಸದೆ ಜೇನು ಕೀಳಲು ಹೋದಾಗ ನಿನಗೆ ಏನಾಗುತ್ತದೋ ಎಂಬ ಭಯ ನನ್ನಲಿತ್ತು ನಿನಗೆ ಏನು ಆಗಿಲ್ಲ ! ನನ್ನ ಖುಷಿ ಪಡಿಸುವುದೇ ನಿನ್ನ ಪ್ರೀತಿ ನಿನ್ನ ಪ್ರೀತಿಗಾಗಿ ನಾನು ,ಎಂದು ತಬ್ಬಿ ಹಿಡಿದು ಜೇನು ತಿನ್ನುವರೆಗೂ ನನ್ನ ನೀ ಬಿಡಲೇ ಇಲ್ಲ ..ನನಗೆ ಏನು ಅಗಬಾರದೆಂದು ಹೊಂಗೆ ಮರದ ಕಡ್ಡಿಗಳ ಕಟ್ಟಿದ್ದೇ ಕೂಡ .

“ಈಗಲೂ ಒಬ್ಬನೇ ಇದ್ದಾಗ ಅಲ್ಲಿಗೆ ಹೋಗಿ ಬರುತ್ತೇನೆ ನೀನಿದ್ದಾಗ ಹೊಂಗೆ ಮರದ ಚಿಗುರು ಎಷ್ಟೊಂದು ಸುಂದರವಾಗಿ ಚಿಗುರಿತ್ತು ,ಆದರೆ ನೀನಿಲ್ಲದಾಗ ಆ ಮರದ ಚಿಗುರು ಇಲ್ಲ ,ಆ ಮರದಲ್ಲಿ ಕಿತ್ತು ಮುಡಿದುಕೊಳ್ಳುತ್ತಿದ್ದ ಹೂಗಳ ಗೊಂಚಲು ಇಲ್ಲ ,
ಜೇನು ಕೂಡ ಮತ್ತೆ ಗೂಡು ಕಟ್ಟಿಲ್ಲ ,ನಿನ್ನ ಜೊತೆಗೆ ಇದ್ದ ಎಷ್ಟೋ ಆಸೆಗಳನ್ನು ನಾನೇ ಸಮಾಧಿ ಮಾಡಿದ್ದೇನೆ ನಿನ್ನ ನೆನೆದಾಗ ಆ ಕ್ಷಣಗಳ ನೆನೆದು ಅರಗಿಸಿಕೊಳ್ಳಲು ಆಗುತ್ತಿಲ್ಲ …

“ನೀನು ಎಲ್ಲಿ ಹೋದೆ ನನ್ನ ಒಂಟಿಯಾಗಿ ಬಿಟ್ಟು
ಎಷ್ಟೋ ದಿನಗಳು ನೀನು ನಾನು ಜೊತೆಯಲ್ಲೆ ಕುಳಿತು ಊಟ ಮಾಡಿದ ನೆನಪು ಹಸಿವಾದಾಗ ನಿನ್ನ ಕೈಗಳು ಕರೆಯುತ್ತದೆ ನನ್ನ ಹಸಿವು ನಿನ್ನನ್ನು, ಬಾ ಗೆಳತಿ ಕೈ ತುತ್ತು ನಿಡೆಂದು .

“ಎಷ್ಟೋ ದಿನಗಳು ಮಂಕಾಗಿ ಕುಳಿತಾಗ ನನ್ನ ಕಂಡ ಯಾಕೆ ಹೀಗೆ ಒಬ್ಬನೇ ಕುಳಿತೆ ಏನಾಗಿದೆ ನಿನಗೆ ನಿನ್ನ ಅಣೆಯಲ್ಲಿ ಅವಳನ್ನು ಬರೆದಿಲ್ಲ ಅವಳು ನಿನಗೆ ಇಷ್ಟೇ ದಿನಗಳು ಜೊತೆಯಲ್ಲಿ ಇದ್ದು ಕಣ್ಮರೆಯಾಗಿ ಹೋಗುವೆ ಎಂಬ ಸತ್ಯ ನಿನಗೂ ತಿಳಿಲಿಲ್ಲ ಆ ದೇವರು ನಮಗೂ ತಿಳಿಸಲಿಲ್ಲ ಎಂದು ಅಮ್ಮ ಹೇಳುವಾಗ ಕಣ್ಣಿಂದ ಕಂಬನಿ ತಾನಾಗಿ ಹೊರ ಬಂದಾಗ ಅಮ್ಮ ಸೇರಗಲ್ಲಿ ಕಣ್ಣೀರು ಹೊರೆಸಿ ಸಮಾಧಾನ ಮಾಡುತ್ತಿದ್ದಳು ಅಮ್ಮನಲ್ಲಿ ನಿನ್ನನ್ನೇ ಕಂಡಿದ್ದೆ ಕೂಡ ..

“ಒಂದು ದಿನವೂ ನನ್ನ ಬಿಟ್ಟು ಇರುವವಳು ನೀನಲ್ಲ
ಪ್ರತಿ ದಿನದ ರಾತ್ರಿಯಲ್ಲಿ ನಿದ್ದೆ ಮಾಡುವವನ ಪಕ್ಕದಲ್ಲಿ ಕೂತು ಎರಡು ಕೈಗಳಲ್ಲಿ ಕೆನ್ನೆ ಹಿಡಿದು ಬಂಗಾರ ಎಷ್ಟು ಮುದ್ದಾಗಿ ಇದ್ದೀಯ ಎಂದು ಕೆನ್ನೆ ಸವರಿ ಮುತ್ತು ಕೊಟ್ಟು ಹೋಗುತ್ತಿದ್ದೆ ..

“ಒಮ್ಮೊಮ್ಮೆ ಅಮ್ಮನಲ್ಲಿ ಸಿಕ್ಕಿ ಬಿದ್ದಾಗ ಅವನು ನನ್ನ ಬಂಗಾರ ಅವನನ್ನು ಬೇರೆ ಎಲ್ಲೂ ಗಿರವಿ ಇಡಬೇಡ ಅಂತ ಅಮ್ಮನಿಗೆ ಕೈ ತೋರಿಸಿ ಹೇಳಿ ನಾಚಿ ಓಡಿ ಹೋಗುತ್ತಿದ್ದೆ ಇದೆಲ್ಲ ನನಗೆ ಯಾಕೆ ಮಾಡಿದೆ ಹೀಗೆ ಒಬ್ಬನನ್ನೇ ಬಿಟ್ಟು ಹೋಗುವುದಕ್ಕ?

“ಬರಿ ಸುಖದಲ್ಲಿ ಮಾತ್ರ ನಾನು ನಿನಗೆ ಪಾಲುದಾರ ಎಂದು ಹೇಗೆ ಭಾವಿಸಿದೆ ?..ನಾನು ನಿನ್ನ ಸ್ವತ್ತೆಂದು ನಿನ್ನ ನೋಡಿದಾಗಲೇ ನಿನ್ನ ಪ್ರೀತಿಯಲ್ಲಿ ಬಿದ್ದಾಗಲೇ ನಿನ್ನೆಲ್ಲ ಜವಾಬ್ದಾರಿ ನನ್ನದು ಎಂದು ಯಾಕೆ ಅರಿವಾಗಲಿಲ್ಲ? ಆ ಒಂದು ವಿಷಯವನ್ನು ಮುಚ್ಚಿಟ್ಟು ಏನನ್ನು ಸಾಧಿಸಲು ನೀ ಒಂಟಿಯಾಗಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟೆ.

“ನೀನು ನನ್ನ ಬಂಗಾರ ಎಂದು ಕಾಗೆ ಬಂಗಾರ ಅಲ್ಲ ಅಂತ ಪ್ರತಿಕ್ಷಣವೂ ಮುದ್ದಿಸುವ ಪ್ರೀತಿಯನ್ನು ಬೇರೆ ಯಾರು ನನಗೆ ಕೊಡುವರು? ನನ್ನೆರಡು ತುಟಿಗಳ ಹಿಡಿದು ನಿನ್ನ ತುಟಿಗಳ ಹತ್ತಿರ ಬರಸೆಳೆದು ಚುಂಬಿಸುವ ಮೊದಲೇ ನಾಚಿಕೆ ಎಂದು ಕೈಗಳಲ್ಲಿ ಮೊಗವನ್ನು ಮುಚ್ಚಿಕೊಳ್ಳುವ ಆ ತುಂಟಾ ತನವನ್ನು ಯಾರಲ್ಲಿ ಕಾಣಲಿ ?

“ನೀನೇ ಹೇಳು ನೀನು ಮಾಡಿದ್ದು ಸರಿನ ? ಸುಳ್ಳು ಯಾಕೆ ಹೇಳಿದೆ ಒಂದೇ ಒಂದು ಮಾತು ನನಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಯಾಕೆ ಹೇಳಲಿಲ್ಲ ಜಾಸ್ತಿ ದಿನ ನಾ ಉಳಿಯುದಿಲ್ಲ ಎಂಬ ಸತ್ಯ ಯಾಕೆ ನಿನ್ನಿಂದ ಮುಚ್ಚಿ ಇಟ್ಟೇ, ನಿನ್ನನು ಪಡೆದ ನಾನೇ ಧನ್ಯ ಯಾವ ಪುಣ್ಯವೋ ? ಈ ಜನ್ಮದಲ್ಲಿ ನೀ ನನಗೆ ಸಿಕ್ಕಿದ್ದಿಯ ನಿಜವಾಗಿ ಇದು ನನ್ನ ಪುಣ್ಯವಲ್ಲ ಅಮ್ಮನ ಪುಣ್ಯ ಅಮ್ಮನಿಗೆ ಎಂತ ಸೊಸೆ ಸಿಕ್ಕಿದ್ದಾಳೆ ಎಂದು ಎಷ್ಟು ಸಂತೋಷ ಪಟ್ಟಿತ್ತು ಈ ಹೃದಯ ..

“ಇಂದು ಅದೇ ಸಂತೋಷ ಕಸಿದು ನನ್ನಲ್ಲಿಯೂ ಹೇಳದೆ ಮೌನವಾಗಿ ನಿದಿರೆಗೆ ಜಾರಿದೆ ಯಾಕೆ
ಈ ಸತ್ಯ ತಿಳಿದು ನಾನು ಕಂಗಾಲಾಗಬಾರದು ಎಂದು,
ಬಂಗಾರ ನಾನು ಇಲ್ಲವೆಂದು ನೀನು ಕೊರಬೇಡ ನಿನ್ನನ್ನು ಪ್ರತಿ ದಿನ ಪ್ರತಿ ಕ್ಷಣ ನಿನ್ನ ನೋಡಬೇಕು ಎನ್ನುವ ಹಠದಿಂದ ನನ್ನರೆಡು ಕಣ್ಣುಗಳನ್ನು ನನ್ನ ಅಮ್ಮನಿಗೆ ದಾನವಾಗಿ ನೀಡಿದ್ದೇನೆ ಇದು ನನ್ನ ಕನಸು ಕೂಡ, ನನ್ನ ಅಮ್ಮನಿಗೆ ಕಣ್ಣು ಕಾಣಿಸುವುದಿಲ್ಲ ಆದರೆ ನಾನು ಹೋದಮೇಲೆ ನನ್ನಮ್ಮನಿಗೆ ನೀನೇ ಮಗನು ನೀನೇ ಮಗಳು ಬಂಗಾರ, ನಾನು ಇಲ್ಲವೆಂದು ಎಂದಿಗೂ ಕಣ್ಣೀರು ಹಾಕದಿರು ನಾ ಸತ್ತರು ನಿನ್ನಲ್ಲೇ ನಿನ್ನ ಮುಂದೆ ಕಣ್ಣಾಗಿರುವೆ ,ಕಾಣಿಸುತ್ತಿರುವೆ …ನಿನ್ನಲ್ಲೇ ನಾನು ಬಿಂಬವಾಗಿರುವೆ ಸದಾ ನಗುತ್ತಿರು ಎಂದು ಕಾಗದ ಬರೆದು ನಿನ್ನನ್ನೇ ನನಗೆ ತ್ಯಾಗ ಮಾಡಿ ಮರೆಯಾದೆ ನೀನು ….?

“ಕೊನೆಯದಾಗಿ ಅಳಬೇಡ ಬಂಗಾರ ಎಂಬ ಮಾತೊಂದು ಹೇಳಿ ನೀನು ಬಾನಿಗೆ ನಕ್ಷತ್ರವಾದೆ ಭೂಮಿಲಿ ನೀ ಇಲ್ಲದೆ ನಾ ಅನಾಥವಾದೆ…

✍️ಕವಿತೆಗಳ ಸಾಲಲ್ಲಿ ಲೋಹಿತ್

ಪ್ರೀತಿಯ ಮಾಯಾಮೃಗ

ಪ್ರೀತಿಯ ಎರಡಕ್ಷರದ ಅರ್ಥ ತಿಳಿದವನು ಮನಸ್ಸನ್ನು ಎಷ್ಟು ಸಹನೆ ತಾಳ್ಮೆಯಿಂದ ನಡೆಸುವುದನ್ನು ಕಲಿಯುವುವನು ..

ಕಣ್ಣಾದವಳು…….

“ಪ್ರೀತಿ ಸಿಗಲಿಲ್ಲ ಅಂತ ಮೂರ್ಖರ ಹಾಗೆ ಪ್ರಾಣ ಕಳೆದುಕೊಳ್ಳೋದು …
ಪ್ರೀತಿಸಿದ ಹುಡುಗಿಯ ಜೀವನ ನಾಶಮಾಡೋದು. ಆಸಿಡ್ ಹಾಕೋದು ಇದು ಪ್ರೀತಿಯ ಅರ್ಥಗಳಲ್ಲ..

“ಪ್ರೀತಿ ಎಂದರೆ ದೇವರು ….
ದೇವರನ್ನು ಪೂಜಿಸಲು ಸಕಲ ಕಾರ್ಯಗಳನ್ನು ಸಿದ್ಧತೆ ಮಾಡಿ ನಂತರ ನೈವೇದ್ಯ ಇಟ್ಟು ಮನಸಿನ ಹರಕೆಯನ್ನು ಎಷ್ಟು ನಿಷ್ಠೆಯಾಗಿ ಹೇಳುವೆವೋ ಹಾಗೆ ಪ್ರೀತಿಯ ಹರಕೆಯನ್ನು ತಾನು ಪ್ರೀತಿಸಿದ ಹುಡುಗಿಗೆ ನಿಷ್ಠೆಯಾಗಿ ಹೇಳಬೇಕು…
ವರ ಕೊಡೋದು ಬಿಡೋದು ಆ ಹೆಣ್ಣಿನ ಮನಸಿಂತಾರಳದ ನಿರ್ಣಯ….
ವರ ಯಾವುದೇ ಇದ್ದರು ಅದನ್ನು ಸ್ವೀಕರಿಸಿ ಮುಂದೆ ನಡೆಯುವುದೇ ಮನುಷ್ಯನ ನಿಜ ಗುಣ …

“ನೀ ಇಷ್ಟ ಪಟ್ಟವರು ಒಪ್ಪಲಿಲ್ಲ ಅಂದ ಮಾತ್ರಕ್ಕೆ ದ್ವೇಷ ಸಾಗಿಸುವುದು ನಿಜ ಗುಣಕ್ಕೆ ಅರ್ಥವಿಲ್ಲ?
ಪ್ರೀತಿ ಎಂದರೆ ನಾಲ್ಕು ದಿನ ಕೈ ಕೈ ಹಿಡಿದು ಸುತ್ತಾಡಿ ಐದನೇ ದಿನಕ್ಕೆ ಬೈ ಎಂದು ಹೇಳಿ ಹೋಗುವುದಲ್ಲ..

“ಪ್ರೀತಿ ಹುಟ್ಟೋಕೆ ಒಂದು ಕಾರಣವಾದರೆ ?
ಅದೇ ಪ್ರೀತಿನ ಕೊಲ್ಲೊಕೆ ನೂರಾರು ಕಾರಣಗಳು ಉದ್ಭವ ಆಗುತ್ತವೆ ಆ ಕಾರಣಗಳನ್ನು ನಾವು ಕೊಲ್ಲುತ್ತ ಹೋದರೆ ಒಂದು ಕಾರಣದಿಂದ ಹುಟ್ಟಿದ ಪ್ರೀತಿ ಗೆಲುತ್ತ ಹೋಗುತ್ತೆ …

“ಪ್ರೀತಿ ಗೆಲ್ಲುತ್ತ ಹೋದಷ್ಟು ಜೀವನಕ್ಕೆ ಒಂದು ಅರ್ಥ ಸಿಗೋಕೆ ಪ್ರೀತಿ ಅನ್ನೋದು ಭಾವನೆಗಳ ಮೇಲೆ ಹುಟ್ಟುತ್ತಾದಾರು ಅದು ಬದುಕಿ ಬರೋದು ನಂಬಿಕೆ ಮೇಲೆನೆ .ಆ ಪ್ರೀತಿ ಅನ್ನೋದು ಹೇಗೆಲ್ಲ ತಿರುಳು ಪಡೆದು ಮತ್ತೆಲ್ಲಿಯೂ ತಿರುಗಾಡಿ ಇನ್ನೆಲಿಯೋ ಮರೆಯಾಗಿ ಹೋಗುತ್ತದೆ ಅನ್ನೋದಿಕೆ ಈ ಕಥೆ …

“ಕನಸಾದ ಹುಡುಗಿ …
ಅಂದು ಕಾಯುತ್ತಿದ್ದೆ ನಾನು .ನೀನು ಬಂದೆ ಬರುತ್ತಿಯ ಎಂದು .ನನ್ನ ನಂಬಿಕೆಯನ್ನು ಹುಸಿಗೊಳಿಸದ ನೀನು ನನ್ನನ್ನು ನೋಡಲು ಬಂದು ಬಿಟ್ಟೆ.

“ಇಂದು ಕೂಡ ಮತ್ತೆ ಅದೇ ಸ್ಥಳದಲ್ಲಿಯೇ ಕಾಯುತ್ತಿದ್ದೇನೆ .ಅದು ನೀನು ಬರುವುದಿಲ್ಲ ‘ಎಂದು ಗೊತ್ತಿದ್ದು .ನಿನಿಂದು ಬರುವುದಿಲ್ಲ .ಏಕೆಂದರೆ ಮತ್ತೆ ತಿರುಗಿ ಬರಬಾರದು ಎನ್ನುವ ಉದ್ದೇಶದಿಂದ ಅಲ್ಲವೇ ನಾ ಕೊಟ್ಟ ಪ್ರೀತಿಯ ಕಾಣಿಕೆಗಳನ್ನೆಲ್ಲ ನನ್ನೆದುರು ಎಸೆದು ನಡೆದದ್ದು ?ಅದೆಲ್ಲವೂ ಇಂದು ನೆನೆಪು ಮಾತ್ರ .

“ಆದರೆ ನೀನು ನನನ್ನು ಬಿಟ್ಟು ಹೋದ ಸ್ಥಳದಲ್ಲಿಯೇ…..
ನೀನಿದ್ದಿಯ ಎನ್ನುವಂತಹ ಹುಚ್ಚು ಭ್ರಮೆಯು .ನನ್ನುನ್ನು ಮತ್ತೆ ಇಲ್ಲಿ ಕಾಯುವಂತೆ ಮಾಡಿದೆ…..

“ನಿನ್ನ ಕಾಯುವಿಕೆ ಸಮಯದಲ್ಲಿಯೇ .ನಮಗಾಗಿ ಕಾದಿದ್ದ ಸುಂದರ ಸಂಜೆ ರಕ್ತಮಯವಾಗಿ ಸಾಯುತ್ತಿದೆ .ಸತ್ತ ಸೂರ್ಯನ ನೆನಪಲ್ಲಿ ಆಗಸ .ಮಂಜಿನ ರೂಪದಲ್ಲಿ ಕಣ್ಣೀರು ಸುರಿಸುತ್ತಿದೆ .ಇವೆಲ್ಲದರ ನಡುವೆಯೇ ಮನಸೆಕೋ ಆ ಹಳೆಯ ನೆನಪುಗಳ ಸುತ್ತಲೂ ಗಿರಕಿ ಹೊಡೆಯುತ್ತಿದೆ ..

“ಅತ್ತ ಸಾಗರದಂಚಿನಲ್ಲಿ .ನೀನು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲುಗಳಿಗಿಂದು ಮಹಾರಾಣಿ ಇಲ್ಲದ ಸಿಂಹಾಸನದಂತೆ ಗೋಚರಿಸುತ್ತಿವೆ .

“ಅಂದು ನಮ್ಮನ್ನು ಕಂಡು ಹುಚ್ಚೆದ್ದು ಕುಳಿತಲ್ಲಿಗೆ ಬಂದು ನಿನ್ನ ಪಾದಕ್ಕೆ ಮುತ್ತಿಕ್ಕಿ ಹೋಗುತ್ತಿದ್ದ ಸಾಗರದ ಅಲೆಗಳು ಇಂದು ವಿರಹ ವೇದನೆಯಲ್ಲಿ ಮಕಡೆ ಮಲಗಿಬಿಟ್ಟಿವೆ .ಕುಡಿದ ಅಮಲಿನಲ್ಲಿ ಕಂದ ಪದ್ಯ ಹಾಡಿದಂತೆ ಬೀಸುತ್ತಿದ್ದ ಆ ತಂಗಾಳಿಯು ಕೂಡ ಇಂದು ವಿರುದ್ಧ ದಿಕ್ಕಿನಲ್ಲಿ ಬಿಸುತ್ತಿದೆ …

“ನನ್ನ ಈ ಸದ್ಯದ ಪರಿಸ್ಥಿತಿ ಜಾತ್ರೆಯಲ್ಲಿ ಅಮ್ಮನಿಂದ ತಪ್ಪಿಸಿಕೊಂಡ ಮಗುವಿನಂತಾಗಿದೆ.ರೈಲು ತಪ್ಪಿಸಿಕೊಂಡ ಪ್ರಯಾಣಿಕನಂತೆ ಅತ್ತಿಂದ ಇತ್ತ ಅಲೆಯುತ್ತಿದ್ದೇನೆ …

“ನಾನು ಮೊದಲಿನಿಂದಲೂ ಕವಿತೆ ಬರೆಯುವ ಒಬ್ಬ ಕಲಾವಿದ ಒಬ್ಬ ಹುಚ್ಚು ಕವಿ …ನನ್ನೊಳಗೊಬ್ಬ ಕವಿ ಅಡಗಿದ್ದ .ನಾ ಬರೆದ ಕವಿತೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಹೇಗಿದೆ ಎಂದು ಕೇಳುವುದು ಹೀಗೆ ನನ್ನ ಕವಿತೆಯ ಲೋಕದಲ್ಲಿ ನನ್ನದೇ ಆದ ಒಂದು ಬದುಕು ಕಲ್ಪಿಸಿಕೊಂಡಿದ್ದೆ…

“ಒಂದು ವೇಳೆ ಅಂದು ನೀನು ನನ್ನನ್ನು ನೋಡಿ ನನಗಾಗಿ ಕವಿತೆ ಬರೆದು ಕೊಡು ಎಂದು ಕೇಳದೆ ಇದ್ದಿದ್ದರೆ ..ನನ್ನದೇ ಆದ ಕವಿತೆಯ ಲೋಕದೊಳಗೆ ಕವಿತೆಯ ಭಾವದೊಳಗೆ ಒಂಟಿ ಸಂಚಾರಿಯಾಗಿ ನೆಮ್ಮದಿಯಾಗಿ ಇರುತ್ತಿದ್ದೆ..

“ಆದರೆ ನೀನು ಕೇಳಿದ ಮರುಕ್ಷಣ ನಿನಗಾಗಿ ಕವನಗಳ ಬರೆದು ನಿನ್ನೊಂದಿಗೆ ಹೇಳುತ್ತಿದ್ದರೆ ಮೈಮರೆತು ಕೇಳುತ್ತಿದ್ದೆ ….
ಅಂದು ಮೈ ಮರೆತು ಕೇಳಿದ ಎಲ್ಲ ಕವನಗಳಿಗೆ ಸೋತು ಪ್ರೇಮದೊಲೇಯ ಕರೆಯ ಕಣ್ಣಸನ್ನೆಯಲಿ ರವನಿಸಿದ್ದೆ …ಆದರೆ ನನ್ನ ಬದುಕನ್ನು ಒಂದು ಅಲ್ಟಿಮೇಟ್ ಆಘಾತಕ್ಕೆ ಒಡ್ಡುತ್ತಿಯ ಎಂದುಕೊಂಡಿರಲಿಲ್ಲ….

“ಕಣ್ಣಲ್ಲಿ ಪ್ರೇಮದ ಪಾರಿಜಾತವನ್ನು ಅರಳಿಸಿ ನಿಂತ ನಿನ್ನನು ತಿರಸ್ಕರಿಸುವುದಕ್ಕೆ ನನ್ನಿಂದಾಗದೇ .
ಒಂದೇ ಉಸಿರಿನಲ್ಲಿ. ಐ ಲವ್ ಯು ಎಂದು ಹೇಳಿ ಬಿಟ್ಟೆ .
ನಂತರ ಶುರುವಾಯಿತ್ತು ನಮ್ಮ ಪ್ರೀತಿಯ ದಂಡಯಾತ್ರೆ .
ದಿನೇ ದಿನೇ ಮನಸ್ಸಿನಲ್ಲಿ ನಿನ್ನ ಮೇಲಿನ ನಿರೀಕ್ಷೆಗಳ ಮೆರವಣಿಗೆಯೇ ಆರಂಭವಾಯಿತು .ಇಬ್ಬರು ಸುತ್ತದ ಪಾರ್ಕುಗಳಿಲ್ಲ….ಅಲ್ಲಿ ಕುಳಿತು ನಿನಗಾಗಿ ರಚಿಸಿದ ಕವನಗಳು ನನಗೆ ಕಮ್ಮಿ ಎನಿಸಲಿಲ್ಲ ನಾ ನಿನಗಾಗಿ ಬರೆದ ಕವನಗಳ ಹೇಳುತ್ತಿದ್ದರೆ ಆ ಕವನದ ಸಾಲುಗಳಂತೆ ನೀನು ಅಭಿನಯಿಸುತ್ತಿದ್ದೆ..

“ನಮ್ಮಿಬ್ಬರ ಮಾತುಗಳಿಗೆ ಕೊರತೆನೆ…ಇರಲಿಲ್ಲ ….ಅಮೋಘ ಒಂದು ವರ್ಷ ಪ್ರೇಮಲೋಕದ ಪಕ್ಷಿಗಳ ತರ ಬಹುದೂರ ಸಾಗಿದ್ದೆವು…..ಆ ಸಂಜೆ ಸಾಗರದ ತಟದಲ್ಲಿ ನಿನಗೋಸ್ಕರ ಕಾಯುತ್ತ ನಿಂತಿದ್ದೆ..

“ಬಂದವಳೇ ಮನಸ್ಸು ಮೌನಾವಾಗುವ ರೀತಿಯಲ್ಲಿ
ಮತ್ತೆ ತುಟಿಗಳು ಪ್ರೀತಿ ಎಂಬ ಪದವ ಹೇಳದ ಹಾಗೆ
ಕಡಲಿನ ಅಲೆಗಳು ಮತ್ತೆ ನಿನ್ನ ಸೋಕದ ಹಾಗೆ ಇನ್ನು ಈ ಸುತ್ತಾಟ ಸಾಕು ..
ನನ್ನನ್ನು ನೋಡುವ ಯತ್ನ ಮಾಡಬೇಡ ಗುಡ್ ಬೈ ಎಂದು ಹೇಳಿ ನಿ ಹೊರಟು ಹೋದೆ…

“ಇಂದು ನನ್ನನ್ನು ನಿ ಏಕೆ ಬಿಟ್ಟು ಹೋದೆ?
ಎಂದು ಕೇಳುವುದಿಲ್ಲ ..ಕಾರಣಗಳು ಸಾವಿರಾರು ಇರಬಹುದು ..ಒಂದು ಮಾತು. ಒಂದು ಹುಸಿ ಮುನಿಸು …ಏನೇ ಇರಬಹುದು ..

“ಆದರೆ ನಾನು ಕೇಳುವುದು ಇಷ್ಟೇ .ವಿನಾಕಾರಣ ನನ್ನನ್ನು ಪ್ರೀತಿಸಿದ್ದೆಕ್ಕೆ? ಪ್ರೀತಿಸಿದ ರೀತಿ ಮಾಡಿದ್ದೇಕೆ? ಕಾರಣ ನನಗೆ ತಿಳಿಯುತ್ತಿಲ್ಲ ನಿನ್ನ ಬಲವಂತ ಪ್ರೀತಿಯು ನನಗೆ ಬೇಕಿಲ್ಲ …

“ಗಿಳಿಯನ್ನು ಪಂಜರದಲ್ಲಿ ಕೂಡಿಟ್ಟು ಘಳಿಗೆ ಘಳಿಗೆಗೆ ಊಟ ನೀರು ಕೊಟ್ಟರೆ ಆ ಗಿಳಿಯನ್ನು ನಾನು ಪ್ರೀತಿ ಮಮತೆ, ವಾತ್ಸಲ್ಯದಿಂದ ಸಾಕುತ್ತಿದ್ದೇನೆ ಎಂದುಕೊಳ್ಳುವುದು ನನ್ನ ಮೂರ್ಖತನ ….

“ಪ್ರೀತಿ ಎಂದರೆ ಜೀವನ ಎನ್ನುತ್ತಾರೆ .ಆದರೆ ಅದು ಜೀವನದ ದಿಕ್ಕನ್ನು ತಪ್ಪಿಸುವ ಮಾಯಾಮೃಗ ಎಂದು ನಿನ್ನಿಂದ ತಿಳಿದುಕೊಂಡೆ ಆದರೂ ನಿನ್ನ ಮೇಲೇ ನನಗೆ ದ್ವೇಷವಿಲ್ಲ ನೀನು ಕೆಟ್ಟವಳಲ್ಲ.ಇಬ್ಬರಲ್ಲಿಯೂ
ಇಷ್ಟ ಎಂಬ ಪದವು ಪ್ರೀತಿಯಾಗಿ ಪರಿಣಮಿಸಿತು ಆದರೆ ಕೊನೆವರೆಗೂ ಇಷ್ಟದ ಪದವು ಕಷ್ಟದ ನೆನಪು ಕೊಟ್ಟು ಹೋಗುವೇ ಎಂಬ ಸುಳಿವು ಕೊಡಲಿಲ್ಲ ಅಷ್ಟೇ”

“ಸದ್ಯಕ್ಕಂತೂ ನಿನ್ನ ಮೇಲಿನ ನಿರೀಕ್ಷೆಗಳ ಮೆರವಣಿಗೆ ಸ್ತಬ್ಧವಾಗಿದೆ .ಆದರೆ ನೀನು ನನ್ನಲಿಯೇ ಇದ್ದಿಯೇ ಎನ್ನುವ ಭ್ರಾಂತಿ ಅಧಿಕವಾಗಿದೆ..ಹೀಗಾಗಿ ಮತ್ತೆ ಮತ್ತೆ ನೀನು ಬಿಟ್ಟು ಹೋದ ಸ್ಥಳದಲ್ಲಿಯೇ ನಾ ಕಾಯುತ್ತಿರುತ್ತೇನೆ ..ಕೈಯಲ್ಲಿ ಒಂದು ಪೆನ್ನು ಹಿಡಿದು ನಿನಗಾಗಿ ಕವಿತೆ ಬರೆದು ಹೇಳಲು…

ಆದರೂ ನೀನು ನನ್ನ ಬಾಳಿಗೆ ವ್ಯತೆಯಾದೇ ನನ್ನ ಕವಿತೆಯ ಸಾಲಿಗೆ ಕತೆಯಾದೇ….

✍️ಕವಿತೆಗಳ ಸಾಲಲ್ಲಿ ಲೋಹಿತ್

ನೀನೇ ನನ್ನ ಜನುಮದ ಸಂಗಾತಿ…

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

“ಆರತಿ ಎತ್ತಿರೆ ವಾರಿಜ ಮುಖಿ ಸೀತಾ ದೇವಿಗೆ
ಭೂಮಿಯನಾಳುವ ರಾಜದೊರೆ ರಾಮ ಚಂದ್ರಗೆ ಆರತಿ
ನಿಮ್ಮ ದಾಂಪತ್ಯ ಸದಾ ಹಾಲು ಜೇನಿನಂತೆ ಸಿಹಿಯಾಗಿರಲಿ ಹುಳಿಯಂತಾಗದಿರಲಿ,,

ಏನೋ ಹೊಸ ಉಲ್ಲಾಸದ ಘಳಿಗೆ ,ಸೂರ್ಯ ಉದಯಿಸಿ ಭೂಮಿಗೆ ಕಿರಣಗಳ ಸೂಸಿದಂತೆ ಎನ್ನ ಬಾಳಲ್ಲಿ ನಿನ್ನ ಪ್ರೀತಿಯ ಒಲುಮೆಯ ಭಾವದ ಬಾಣಗಳು ಆಗಮನವಾಯಿತು,,

ಇರುವೆಗೆ ಸಕ್ಕರೆಯ ಸಿಹಿ ಸಿಕ್ಕಂತೆ ,ನೀ ನನ್ನ ಜೀವನಕ್ಕೆ ಕಡಲ ಮುತ್ತಂತೆ ದೊರೆತೆ,,
ಮಳೆಯಾಗಿ ಸುರಿದ ಎನ್ನ ಭಾವನೆಗಳ ಹನಿಗಳು ನಿನ್ನ ಪ್ರೀತಿಯ ಹಳ್ಳ ಹಳ್ಳಗಳಲಿ ಹರಿದು ಹೃದಯದ ಕಡಲ ನಾ ಸೇರುವಾಗ ನನ್ನ ನಿನ್ನ ಭಂದಕ್ಕೆ ಕಾಮನಬಿಲ್ಲು ಮೂಡಿತ್ತು ಸಾಕ್ಷಿಯಾಗಿ,,

ಉಸಿರ ಉಸಿರಲಿ ಬೆರೆತಿರುವೆ ನೀನು
ಈ ಉಸಿರು ಬಿಸಿಯಾದರು ಅಪ್ಪುಗೆಯ ಬಿಗಿ ಸಡಿಲವಾಗದು ನಲ್ಲ

ಹೆಣ್ಣಿಗೆ ಗಂಡೇ ಸರ್ವಸ್ವ, ಗಂಡಿಗೆ ಹೆಣ್ಣೇ ಬಾಳಿನ ದಿಕ್ಸೂಚಿ , ಹೆಣ್ಣಿಲ್ಲದ ಬಾಳು ಗಂಡಿಗೆ ಪರಿಪೂರ್ಣವಾಗದು , ಹೆಣ್ಣೇ ಗಂಡಿನ ಮೂಲ ,ಅವಳಿಲ್ಲದ ಜೀವನ ಶೂನ್ಯ ,

ಹಣೆಬರಹದಲ್ಲಿ ಬ್ರಹ್ಮ ಯಾರಿಗೆ ಯಾರು ಅಂತ ಮೊದಲೇ ಬರೆದುಬಿಡುತ್ತಾನಂತೆ ನನ್ನ ಹಣೆಯಲ್ಲಿ ಆ ಬ್ರಹ್ಮ ನಿನ್ನನ್ನೇ ಬರೆದಿದ್ದಾನೆ ,,

ನೀನು ನನ್ನ ಬಾಳಲ್ಲಿ ಬಂದಾಗಿನಿಂದ ಈ ಹೆಣ್ಣಿನ ಮನಸ್ಸು ಮಲ್ಲಿಗೆಯಂತೆ ಅರಳಿದೆ ,ನಿನ್ನ ಪ್ರೀತಿಯಲ್ಲಿ ಹೃದಯ ಹಣ್ಣಾಗಿದೆ,ಈ ಹೆಣ್ಣಿನ ಭಾವನೆಗಳು ಹಕ್ಕಿಯಂತೆ ಹಾರಡಿವೆ,

ಈ ಹೃದಯದ ಗುಡಿಯಲ್ಲಿ ನೀನೇ ದೇವರ ರೂಪವಾಗಿರುವಾಗ ,ನಿನ್ನ ದಿನನಿತ್ಯ ಪೂಜಿಸುವ ಭಕ್ತೆ ನಾನು ,ನನಗಾಗಿ ಹೊಲಿದಿರುವ ವರವು ನೀನು ,,

ಏಳೇಳು ಜನ್ಮಕ್ಕೂ ನೀನೇ ನನ್ನವನಾಗಿರುವ ಎಂದು ನಾ ನಿನ್ನಲ್ಲಿ ಹೇಳಲಾರೆ ,
ಆದರೆ ಆ ಏಳೇಳು ಜನ್ಮಕ್ಕೂ ನೀಡುವ ಪ್ರೀತಿಯನ್ನು ಈ ಒಂದು ಜನ್ಮದಲ್ಲಿ ನನಗಾಗಿ ಮಿಸಲಿಡು ಎಂದು ನಿನ್ನಲ್ಲಿ ಪ್ರಾರ್ಥಿಸುವೆ,,,

ಪ್ರತಿದಿನವು ನಿನ್ನನ್ನು ನೋಡುವಾಗ ಹೊಸಹೊಸದಾದ ಭಾವನೆಗಳ ಅನಾವರಣ ಈ ಎದೆ ಗೂಡಲ್ಲಿ ,
ನಿನ್ನಿಂದಲೇ ಚಿಲುಮೆಯ ಹೊಂಗಿರಣದ ಮುಗುಳುನಗೆ ದಿನವೂ ನನ್ನ ಮೊಗದಲ್ಲಿ ,,

ಆಲಿಸುವೆ, ಆಲಿಂಗಿಸುವೆ ,ಆರಾಧಿಸುವೆ ,ಆಸೆಗಳ ಅಲೆಯಲ್ಲಿ ತೇಲಿಸುವೇ ,ಅಂದದ ಹೂ ಮುತ್ತುಗಳನಿತ್ತು ಮುದ್ದಿಸುವೆ ,ಛೇಡಿಸುವೆ , ಹಂಬಲಿಸುವೆ ,ಹಠ ಮಾಡುವೆ ಆದರೂ ಅಂತರವಿಲ್ಲ ನಮ್ಮ ಪ್ರೀತಿಗೆ ಬಾರದಿರಲಿ ಕೂಡ ,

ಹೇಳಿಬಿಡು ನಲ್ಲ
ನಾ ನಿನಗೆ ಸಿಹಿ ಗೆಣಸ
ಕಹಿಯಾಗುವ ಮರಗೆಣಸ

ಈ ಹೆಣ್ಣಿನ ಹೃದಯದೊಳಗೆ ಗಂಡ ಎಂದು ನಿನ್ನ ಪ್ರತಿಮೆಯ ಪ್ರತಿದಿನವೂ ಪೂಜಿಸುವಾಗ ,,
ಪಚ್ಚೆ ಕರ್ಪೂರದಂತೆ ,ಗಂಧದ ಕಡ್ಡಿಯಂತೆ ,
ಬೆಳಗುವ ಜ್ಯೋತಿಯಂತೆ ನೀ ನರ್ತನ ಮಾಡುವಾಗ ನಿನ್ನೆಸರ ಹೇಳಿ ನೀ ಕಟ್ಟಿದ ಮಾಂಗಲ್ಯಕ್ಕೆ ಆರಿಸಿಣ ಕುಂಕುಮ ಹಚ್ಚುವಾಗ ಎದುರಿಗೆ ನೀ ಬಂದು ನಿಂತು ದೀರ್ಘ ಸುಮಂಗಲಿ ಭವ ಶೀಘ್ರ ಪುತ್ರ ಪ್ರಾಪ್ತಿರಸ್ತು ಎಂದು ನನ್ನ ನೀ ಆಶೀರ್ವಾದಿಸುವಾಗ ಈ ಜೀವಕ್ಕೆ ಇನ್ನೇನು ಬೇಕು ಇನ್ನೊಂದು ಜನ್ಮ ನಾ ಬೇಡೆನು ,,,

✍️ಕವಿತೆಗಳ ಸಾಲಲ್ಲಿ ಲೋಹಿತ್

ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ಆರೋಪ; ಗ್ರಾಪಂ ಪಿಠೋಪಕರಣ ಧ್ವಂಸ

ವಿಜಯಸಾಕ್ಷಿ ಸುದ್ದಿ, ರೋಣ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಗ್ರಾಪಂಗೆ ನುಗ್ಗಿದ ಜನರು ಪಿಠೋಪಕರಣ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಈ ಘಟನೆ  ರೋಣ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಮುದೇನಗುಡಿ ಗ್ರಾಮಸ್ಥರಿಂದ ಗ್ರಾಪಂಗೆ ಮುತ್ತಿಗೆ ಹಾಕಿ ಜನರು ದಾಂಧಲೆ ಮಾಡಿದ್ದಾರೆ.

ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದು ನಿರ್ಮಾಣ ಕಾರ್ಯದಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ನೂರಾರು ಜನರು ಏಕಾಏಕಿ ಧಾವಿಸಿ ಗ್ರಾಪಂ ಕಚೇರಿ ಒಳಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಲ್ಲದೇ, ಗ್ರಾಪಂ ಸಿಬ್ಬಂದಿಗಳ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಪಂಚಾಯತಿ ಇಒ ಸಂತೋಷ ಪಾಟೀಲ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿ ಬಯಲಿನಲ್ಲಿಯೇ ನಡೆಯುತ್ತಿದೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಕೊರೊನಾ ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಭಯಪಟ್ಟು ಹಳ್ಳಿಯ ಹೊಲಗಳಲ್ಲಿ ಮರಗಳ ಕೆಲಕೆ ಚಿಕಿತ್ಸೆ ಪಡೆಯುತ್ತಿರುವ ಸಂಗತಿ ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.

ಆ ರಾಜ್ಯದ ಅಗರ್ – ಮಾಲ್ವಾ ಜಿಲ್ಲೆಯ ಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಕೊರೊನಾ ಸೋಂಕಿತರು ಮಲಗಿದ್ದಾರೆ. ಮರಗಳಿಗೆ ಡ್ರಿಪ್ ಬಾಟಲಿಗಳನ್ನು ತೂಗಿ ಹಾಕಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಭಾಗದ ಗ್ರಾಮಗಳಲ್ಲಿನ ಜನರಲ್ಲಿ ಜ್ವರ – ನೆಗಡಿ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ, ಜನ ಮಾತ್ರ ಆಸ್ಪತ್ರೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಹೀಗಾಗಿ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಜನರು ಅವಲೊತ್ತಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಸ್ಥಳೀಯ ವೈದ್ಯರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನೆಗಡಿ, ಕೆಮ್ಮು ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಎಂದು ಆರೋಗ್ಯಾಧಿಕಾರಿ ಮನಿಶ್ ಕುರ್ಲಿ ತಿಳಿಸಿದ್ದಾರೆ.

ಹಿಮದಂತೆ ಕಂಡು ಬಂದ ಹರಿದು ಬಂದ ನೊರೆ; ಗಾಬರಿಗೊಂಡ ಜನ!

ವಿಜಯಸಾಕ್ಷಿ ಸುದ್ದಿ, ರೋಣ

ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹಿಮದ ಬಂಡೆಯಂತೆ ನೊರೆ ಕಂಡು ಬಂದಿದ್ದು, ಜನ ಆಶ್ಚರ್ಯದಿಂದ ತಂಡೋಪ ತಂಡವಾಗಿ ಆಗಮಿಸಿ ನೋಡುತ್ತಿದ್ದಾರೆ.
ಮಾರನಬಸರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಭರ್ಜರಿಯಾಗಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಗ್ರಾಮದ ನರೇಗಲ್ ರಸ್ತೆಗೆ ಹೊಂದಿಕೊಂಡಿರುವ ಸೇತುವೆ ಬಳಿ ನೊರೆ ಹಿಮದ ಬಂಡೆಯಂತೆ ಕಂಡು ಬಂದಿದೆ.

ಈ ದ್ರಶ್ಯ ನೊಡಲು ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಅಪರೂಪದ ದೃಶ್ಯ ಕಂಡಿದ್ದಾರೆ. ಆದರೆ, ಇಷ್ಟೊಂದು ನೊರೆ ಬಂದಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ರಾಸಾಯನಿಕ ಬಳಕೆಯಿಂದ ಈ ರೀತಿಯ ನೊರೆ ಕಂಡು ಬಂದಿದೆ ಎನ್ನಲಾಗುತ್ತದೆ.

ರಾಜ್ಯದಲ್ಲಿ ಸೋಂಕು ತಡೆಗಟ್ಟದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲೇಬೇಕು. ಇಲ್ಲವೇ ಬೇರೆ ಪರಿಹಾರ ಇಲ್ಲ ಎಂದು ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮೇ ಮಧ್ಯ ಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮೀರುವ ಸಾಧ್ಯತೆ ಇದೆ. ಜೂನ್ ಮೊದಲ ವಾರದಲ್ಲಿ ಶೇ. 80ರಷ್ಟು ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ಮಾತ್ರ ಸೋಂಕನ್ನು ತಡೆಗಟ್ಟಬಹುದು. ಹೀಗಾಗಿ 15 ದಿನ ಲಾಕ್ ಡೌನ್ ಮಾಡಿದರೆ ಪರಿಣಾಮ ಹೆಚ್ಚಾಗಿರುತ್ತದೆ. ಏಕಾಏಕಿ ಲಾಕ್‍ ಡೌನ್ ಘೋಷಿಸದೆ ಹಂತ – ಹಂತವಾಗಿ ವಿನಾಯಿ ನೀಡುತ್ತ ಲಾಕ್ ಡೌನ್ ತೆರೆಯಬೇಕು ಎಂದು ಸರ್ಕಾರಕ್ಕೆ ಐಐಎಸ್ಸಿ ಎಚ್ಚರಿಕೆ ನೀಡಿದೆ.

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಪ್ರಸನ್ನ ಅವರು, ಸದ್ಯ ಜನರ ಜೀವ ಉಳಿಸಲು ಲಾಕ್ ಡೌನ್ ಒಂದೇ ಪರಿಹಾರವಾಗಿದೆ. ಜನರ ಜೀವ ಉಳಿದರೆ ಆರ್ಥಿಕತೆ ತನ್ನಿಂದ ತಾನೇ ಸರಿಯಾಗುತ್ತದೆ. ಸದ್ಯ ಹಳ್ಲಿಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ಇನ್ನೊಂದೆಡೆ ಆರೋಗ್ಯ ವಲಯದ ಮೇಲೆಯೂ ವಿಪರೀತ ಒತ್ತಡ ಬೀಳುತ್ತಿದೆ. ಸಿಬ್ಬಂದಿಗೂ ಸೋಂಕು ಹರಡುತ್ತಿದ್ದು, ಅಭಾವ ಶುರುವಾಗುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ, ಸರ್ಕಾರ ಮಾತ್ರ ಲಾಕ್ ಡೌನ್ ಘೋಷಿಸಲು ಮುಂದಾಗುತ್ತಿಲ್ಲ. ಕೇರಳದಲ್ಲಿ ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್‍ ಡೌನ್ ಘೋಷಿಸಲಾಗಿದೆ. ಮೇ. 8 ರಿಂದ 16ರ ವರೆಗೆ ಕೇರಳ ಸ್ತಬ್ಧವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಲಾಕ್ ಡೌನ್ ನಿಂದಾಗಿ ಸೋಂಕಿನ ಪ್ರಮಾಣ ಇಳಿಮುಖ ಕಾಣುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಈ ನಿರ್ಧಾರ ಕೈಗೊಳ್ಳುತ್ತಿಲ್ಲ.

ಮತ್ತೆ ಗಾರೆ ಕೆಲಸ ಪ್ರಾರಂಭಿಸಿದ ನಟ ಚಿಕ್ಕಣ್ಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಳೆದ ವರ್ಷಕ್ಕಿಂತ ಈ ವರ್ಷ ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಅಲ್ಲದೇ, ಸಮರ್ಪಕ ಆಕ್ಸಿಜನ್ ಸಿಗದೆ ಜನರು ನರಳಾಡುತ್ತಿದ್ದಾರೆ. ಇತ್ತ ಲಾಕ್‌ ಡೌನ್‌ ನಿಂದಾಗಿ ಹಲವಾರು ಸೆಲೆಬ್ರೆಟಿಗಳು ಮನೆಯಿಂದಲೇ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕಾಮಿಡಿ ಕಿಂಗ್ ಚಿಕ್ಕಣ್ಣ ಶೂಟಿಂಗ್ ಕೆಲಸವಿಲ್ಲದೆ, ಅವರ ಹಳೆಯ ಕೆಲಸಕ್ಕೆ ಮರಳಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅವರು ನಟನಾಗುತ್ತಿದ್ದಂತೆ ಬೆಂಗಳೂರಿಗೆ ಬಂದು ಹಲವಾರು ವರ್ಷಗಳ ಶ್ರಮದಿಂದ ಉತ್ತಮ ನಟನಾಗಿ ಹೆಸರು ಮಾಡಿದ್ದಾರೆ.

ಆದರೆ, ಸದ್ಯ ಚಿಕ್ಕಣ್ಣ ತಮ್ಮ ಹಳೆಯ ವೃತ್ತಿಗೆ ಮರಳಿದ್ದಾರೆ. ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಚಿಕ್ಕಣ್ಣ ಬೇರೆಯವರ ಮನೆಯ ಗಾರೆ ಕೆಲಸ ಮಾಡುತ್ತಿಲ್ಲ. ಬದಲಿಗೆ ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಬಳಿ ದೊಡ್ಡ ಫಾರ್ಮ್ ನಿರ್ಮಿಸಿರುವ ಚಿಕ್ಕಣ್ಣ ಅಲ್ಲಿಯೇ ಸಣ್ಣದೊಂದು ಮನೆ ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ತಾವೇ ಕೈ ಜೋಡಿಸಿದ್ದಾರೆ. ಲಾಕ್‌ ಡೌನ್ ಸಮಯದಲ್ಲಿ ಚಿತ್ರೀಕರಣ ಇಲ್ಲದ ಕಾರಣ ಸಮಯದ ಸದುಪಯೋಗಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ. ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲಸ ಬೇಕಾದರೆ ಬಿಡುತ್ತೇನೆ….ಬೆಡ್ ಕೊಡಿಸಲು ಆಗಲ್ಲ ಎಂದ ಡಿಎಚ್ ಒ

ವಿಜಯಸಾಕ್ಷಿ ಸುದ್ದಿ, ಮೈಸೂರು

ನನ್ನ ಮಡದಿಗೂ ವೆಂಟಿಲೇಟರ್ ಕೊಡಿಸಲು ನನ್ನಿಂದ ಆಗುತ್ತಿಲ್ಲ ಎಂದು ಹೇಳುವ ಮೂಲಕ ಜಿಲ್ಲೆಯ ಡಿಎಚ್ ಒ ಅಮರನಾಥ್ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.

ಹೀಗಂತ ಸಂಬಂಧಿಕರೊಂದಿಗೆ ಫೋನ್ ಸಂಭಾಷಣೆ ನಡೆಸಿರುವ ಅಮರನಾಥ್ ಅವರ ಆಡಿಯೋ ಸದ್ಯ ಸಖತ್ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ವಾರ್ ರೂಂ ಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.

ಆಗ ವ್ಯಕ್ತಿ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಆಗ ಡಿಎಚ್ ಒ ಅವರು ಬೆಡ್ ಗೆ ಹಾಗೂ ನನಗೆ ಯಾವುದೇ ಸಂಬಂಧವಿಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ. ನನಗೆ ನನ್ನ ಹೆಂಡತಿಗೂ ಬೆಡ್ ಕೊಡಿಸಲು ಯೋಗ್ಯತೆ ಇಲ್ಲ. ನನ್ನ ಕೈ ಸೋತು ಹೋಗಿದೆ ಎಂದು ಅಸಹಾಯಕತೆ ತೋರಿಸಿದ್ದಾರೆ.

ಆಗ ಕರೆ ಮಾಡಿದ್ದ ವ್ಯಕ್ತಿ, ಜವಾಬ್ದಾರಿ ಏಕೆ? ಕೆಲಸ ಬಿಟ್ಟು ಹೋಗಿ ಎಂದು ಹೇಳಿದ್ದಾರೆ. ಕೆಲಸದಿಂದ ಕಳುಹಿಸಿ ಬಿಟ್ಟು ಹೋಗಲು ಕೂಡ ಸಿದ್ಧನಿದ್ದೇನೆ ಎಂದಿರುವ ಡಿಎಚ್ ಒ ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡದ ಖ್ಯಾತ ನಿರ್ದೇಶಕ ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕಿಗೆ ಚಿತ್ರರಂಗವು ಬಳಲಿ ಬೆಂಡಾಗುತ್ತಿದೆ. ಹಿರಿಯ ನಟ, ನಿರ್ದೇಶಕರನ್ನು ಕಳೆದುಕೊಳ್ಳುತ್ತ ಸೊರಗುತ್ತಿದೆ. ಸದ್ಯ ಕನ್ನಡದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾದಿಂದಾಗಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ‘ಕವಿರತ್ನ ಕಾಳಿದಾಸ’, ‘ಅಂಜದ ಗಂಡು’, ‘ಕಿಂದರ ಜೋಗಿ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಎರಡು ದಿನಗಳ ಹಿಂದೆಯಷ್ಟೇ ರೇಣುಕಾ ಶರ್ಮಾ ಅವರನ್ನು ಕೊರೊನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

error: Content is protected !!