Home Blog Page 3202

ಕೊರೋನಾ ವಾರಿಯರ್ಸ್‌ ಗೆ ಪರಿಹಾರ ಕೊಡಲು ಸರ್ಕಾರ ಕುಂಟು ನೆಪ: ವರಲಕ್ಷ್ಮೀ ಆರೋಪ

0

ವಿಜಯಸಾಕ್ಷಿ ಸುದ್ದಿ, ಉಡುಪಿ

ಕೊರೋನಾ ಅವಧಿಯಿಂದ
ಇಲ್ಲಿಯ ತನಕ 27 ಜನ ಅಂಗನವಾಡಿ ಕಾರ್ಯಕರ್ತೆಯರು ಮೃತ ಪಟ್ಟಿದ್ದಾರೆ. ಆದರೆ, 26 ಮಂದಿಗೆ ರಾಜ್ಯ ಸರ್ಕಾರ ಪರಿಹಾರ ನೀಡದೆ ಕುಂಟು ನೆಪ ಹೇಳುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯನ್ನು ಕೊರೋನಾ ವಾರಿಯರ್ ಎಂದು ಹೇಳಲಾಗುತ್ತಿದೆ. ಆದರೆ, ಸಾವನ್ನಪ್ಪಿರುವ ವಾರಿಯರ್ ಗಳಿಗೆ ಇನ್ನೂವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಬಿಸಿಯೂಟ ನೌಕರರಿಗೆ 2600 ರೂ. ಸಂಬಳ ಪಡೆಯುತ್ತಿದ್ದು,
ಸೆಪ್ಟೆಂಬರ್ ನಿಂದ ಸಂಬಳ ಕೊಟ್ಟಿಲ್ಲ. ನಾಲ್ಕು ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿದೆ. ಎಲ್ಲ ಕೆಲಸಗಳನ್ನು ಮಾಡಿಸಿ ಅನ್ಯಾಯವೆಸಗಿದೆ ಎಂದು ದೂರಿದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆಯಷ್ಟೇ ಸಿಗುತ್ತಿದ್ದು, ಬೇಡಿಕೆ ಈಡೇರದಿದ್ದರೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರವನ್ನು ವರಲಕ್ಷ್ಮೀ
ಎಚ್ಚರಿಸಿದರು.

ಬೈಕ್ ಗೆ ಸರಕಾರಿ ವಾಹನ ಡಿಕ್ಕಿ; ಸ್ಥಳದಲ್ಲೇ ಇಬ್ಬರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಸರ್ಕಾರಿ ಅಧಿಕಾರಿಯೊಬ್ಬರ ಬೊಲೆರೋ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ
ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಡಗಿ ತಾಲ್ಲೂಕಿನ ಕದಮನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಾವೇರಿ ತಾಲ್ಲೂಕಿನ ಗಣಜೂರು ಗ್ರಾಮದ ಮಂಜು ಸೋಮನಕಟ್ಟಿ (37) ಹಾಗೂ ಬಸವರಾಜ್ ವಾಲ್ಮೀಕಿ (40) ಮೃತ ದುರ್ದೈವಿಗಳಾಗಿದ್ದಾರೆ.

ಮೃತರು ಹೊನ್ನತ್ತಿ ಮತ್ತು ಕದರಮಂಡಲಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಸ್ಸು ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಹಾವೇರಿಯಿಂದ ರಾಣೆಬೆನ್ನೂರು ಕಡೆ ಹೊರಟಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸರ್ಕಾರಿ ಬೊಲೆರೋ ವಾಹನ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಬ್ಯಾಡಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್‌ಪಿ ವಿದ್ಯಾನಂದ ನಾಯಕಗೆ ಮುಖ್ಯಮಂತ್ರಿಗಳ ಪದಕ

0

ವಿಜಯಸಾಕ್ಷಿ ಸುದ್ದಿ, ಗದಗ

ಸಶಸ್ತ್ರ ಮೀಸಲು ಪಡೆ (ಡಿಎಆರ್) ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರು 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಬಗ್ಗೆ ಇಲಾಖೆಯ ಗುಪ್ತ ವರದಿ (ಎಸಿಆರ್) ಆಧರಿಸಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಿಡಬ್ಲ್ಯೂಡಿ ಇಂಜನೀಯರ್ ಆಗಿದ್ದ ವೆಂಕಟಪತಿ ನಾಯಕ ಹಾಗೂ ನಿವೃತ್ತ ಶಿಕ್ಷಕಿ ಸಾವಿತ್ರಿ ನಾಯಕ ದಂಪತಿ ಪುತ್ರರಾಗಿರುವ ಗೋಕರ್ಣ ಮೂಲದ ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರು, 14 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

2006ರಲ್ಲಿ ಕಲಬುರಗಿ ಜಿಲ್ಲೆಯ ಮೂಲಕ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿರುವ ಅವರು, ನಂತರ ಹಾವೇರಿ, ಉಡುಪಿ, ಬೆಂಗಳೂರು, ಕಾರವಾರ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2010ರಲ್ಲಿ ಕಾರವಾರದಲ್ಲಿ ಸಂಭವಿಸಿದ ಕಡವಾಡ ಗುಡ್ಡ ದುರಂತ ಹಾಗೂ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿಯ ಸಂದರ್ಭದಲ್ಲಿ ಒಂದು ವಾರಗಳ ಕಾಲ ಸ್ಥಳದಲ್ಲಿಯೇ ಬೀಡು ಬಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾಗಿರುವ ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ಚಿರತೆ ದಾಳಿಗೆ ಮತ್ತೊಬ್ಬ ಯುವಕ ಬಲಿ! ನರಭಕ್ಷಕ ಚಿರತೆ ಕಾಟಕ್ಕೆ ಬೆಚ್ಚಿ ಬಿದ್ದ ಜನ

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ:
ದನ ಕಾಯಲು ಕುರುಚಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದರಿಂದ ಯುವಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಕರಿಯಮ್ಮನಗಡ್ಡಿಯ ರಾಘವೇಂದ್ರ ವೆಂಕಟೇಶ (19) ಎಂದು ಗುರುತಿಸಲಾಗಿದೆ. ವಿರುಪಾಪುರ ಗಡ್ಡೆಯಲ್ಲಿ (ಋಷಿಮುಖ ಬೆಟ್ಟದ ಹಿಂದೆ ಹಾಗೂ ಗೋವನ್ ಕಾರ್ನರ್ ಹೊಟೇಲ್ ಮಧ್ಯ ಭಾಗದಲ್ಲಿ) ಈ ಘಟನೆ ನಡೆದಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಇತ್ತೀಚೆಗೆ ಬೆಟ್ಟದ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಆದರೆ, ಈ ಯುವಕ ಬೆಟ್ಟದ ಸಮೀಪ ಇರುವ ಕುರುಚಲ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಚಿರತೆ ಯುವಕನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಗೋವುಗಳು ಚಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿವೆ. ಗೋವುಗಳು ಓಡುತ್ತಿರುವುದನ್ನು ದೂರದಿಂದ ಗಮನಿಸಿದ ಸ್ಥಳಿಯರು ಘಟನೆ ಸ್ಥಳಕ್ಕೆ ಬಂದಾಗಲೇ ಚಿರತೆ ದಾಳಿ ಮಾಡಿರುವುದು ಖಚಿತವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಚೆಗಷ್ಟೇ ಚಿರತೆ ಇಲ್ಲಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಯನ್ನು ಹೊತ್ತೊಯ್ದು ತಿಂದು ಸಾಯಿಸಿತ್ತು. ಬಾಲಕನ ಮೇಲೂ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಚಿರತೆ ಗಂಗಾವತಿ ತಾಲೂಕಿನಲ್ಲಿ ಎರಡನೇ ಬಲಿ ಪಡೆದಿದೆ.

ಹೊಟ್ಟಿನ ಬಣವೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು; ಸುಟ್ಟು ಕರಕಲಾದ ಮೇವು

ವಿಜಯಸಾಕ್ಷಿ ಸುದ್ದಿ, ನರೇಗಲ್

ದುಷ್ಕರ್ಮಿಗಳು ಹೊಟ್ಟು- ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲೆಗೆ ಹೊಟ್ಟು ಸುಟ್ಟು ಭಸ್ಮವಾಗಿರುವ ಘಟನೆ
ರೋಣ ತಾಲ್ಲೂಕಿನ ಕುರಡಗಿ ಗ್ರಾಮದಲ್ಲಿ ನಡೆದಿದೆ.

ಸಹೋದರ ಸಂಬಂಧಿಗಳಾದ ನಾಗಪ್ಪ ದೇವರಮನಿ, ಬಸಪ್ಪ ದೇವರಮನಿ, ಮಹಾರುದ್ರಪ್ಪ ದೇವರಮನಿ, ವೀರೇಶ ದೇವರಮನಿ ಎಂಬುವವರಿಗೆ ಸೇರಿದ್ದ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.

ವರ್ಷಪೂರ್ತಿ ದನಕರುಗಳಿಗೆ ಸಂಗ್ರಹಿಟ್ಟಿದ್ದ ಆಹಾರ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹೊಟ್ಟು ಮೇವು ಸುಟ್ಟು ಕರಕಲಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರ ನೆರವಿನಿಂದ ಬೆಂಕಿ‌ ನಂದಿಸಿದ್ದಾರೆ‌. ಬೆಂಕಿ ಬಿದ್ದ ಬಣವೆಯ ಅಕ್ಕಪಕ್ಕದಲ್ಲೇ ನೂರಾರು ಹೊಟ್ಟು ಮೇವಿನ ಬಣವೆಗಳಿದ್ದಿದ್ದರಿಂದ ಸಂಭವಿಸಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.

ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಾಲೆಗೆ ಮರಳಿದ ಮಕ್ಕಳು, ಹೂಮಳೆ ಸುರಿಸಿ, ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಭರ್ಜರಿ ಸ್ವಾಗತ

0

-ತೊಲಗಲಿ ಕೊರೋನಾ, ಎಂದಿನಂತೆ ಶಾಲೆಗೆ ಮರಳೋಣ

-ಶಾಲಾರಂಭದ ಜೊತೆ ಹೊಸ ವರ್ಷಾಚರಣೆಯ ಸಿಹಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊರೋನಾ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖ ನೋಡದಂತೆ ಮಾಡಿತ್ತು. ಇದೀಗ ವೈರಸ್‌ನ ಅಬ್ಬರ ಕಡಿಮೆಯಾಗಿದ್ದು ಮಕ್ಕಳು ಸಂತಸದಿಂದ ಶಾಲೆಗೆ ಮರಳಿದ್ದಾರೆ. ಆದರೂ ಕೊರೊನಾ ಗುಮ್ಮ ಇನ್ನೂ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಳೆದ ೧೦ ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆರಂಭವಾದ ಹಿನ್ನೆಲೆಯಲ್ಲಿ ಒಂದಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರ ಗೊಳಿಸುವ ಮೂಲಕ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್ ನಿಯಮ ಪಾಲನೆ ಹೀಗೆ ಮಕ್ಕಳನ್ನು ಶಾಲೆಗೆ ಶುಕ್ರವಾರ ಭರ್ಜರಿ ಸ್ವಾಗತಿಸಲಾಯಿತು. 

ನಗರದ ಹೊರ ವಲಯದಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಜಾಗೂ ಸಾನಿಟೈಜರ್ ಮತ್ತು ಸಿಹಿ ವಿತರಿಸುವ ಮೂಲಕ ಶಾಲೆಗಳನ್ನು ಆರಂಭಿಸಲಾಯಿತು. ಅದರಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ‌ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ, ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಂತರ ಚಾಕಲೇಟ್ ನೀಡಿ ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ಕಂಡ ಬಂದವು.

ಅದಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಮತ್ತು ಸಾನಿಟೈಜರ್ ಹಾಗೂ ಮಕ್ಕಳ ತಲೆಯ ಮೇಲೆ ಹೂ ಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮಕ್ಕಳು ಸಹ ಸರತಿಯಲ್ಲಿ ನಿಂತು, ಕೋವಿಡ್ ತಪಾಸಣೆಗೆ ಒಳಗಾಗಿ ಸಹಕಾರ ನೀಡಿದರು.
ಮನೆಯಲ್ಲಿ ಕುಳಿತು ಬಹಳ ಬೇಸರವಾಗಿತ್ತು. ಶಾಲೆ ಶುರುವಾಗಿದ್ದೇ ತಡ, ಶಾಲೆಗೆ ಓಡೋಡಿ ಬಂದೇವು. ಶಾಲೆಯ ಶಿಕ್ಷಕರು, ಸ್ನೇಹಿತರನ್ನು ಕಳೆದ ಹತ್ತು ತಿಂಗಳಿನಿಂದ ನೋಡಿರಲಿಲ್ಲ. ಈಗ ಬಹಳ ಖುಷಿಯಾಗಿದೆ ಎಂದು ಶಾಲಾ ಮಕ್ಕಳು ಸಂತಸ ಹಂಚಿಕೊಂಡರು.

 
ಕಳೆದ ಹತ್ತು ತಿಂಗಳಿಂದ ಕೋವಿಡ್ ಹಿನ್ನಲೆ ಶಾಲಾ-ಕಾಲೇಜಿಗೆ ಸರ್ಕಾರ ರಜೆ ಘೋಷಿಸಿತು. ಇದೀಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶಾಲೆ ಆರಂಭಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕೋವಿಡ್ ನಿಯಮ ಪಾಲನೆ ಮೂಲಕ ಶಾಲೆ ಪ್ರಾರಂಭ ಮಾಡಿದೆ ಎಂದು ಶಿಕ್ಷಕ ಬಿರಪ್ಪ ಹಾಗೂ ಆರ್
ಹೆಚ್ ಅತ್ತನೂರು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು. 

ಸಾಂಪ್ರದಾಯಿಕ ಉಡುಗೆಯಲ್ಲಿ ಪೊಲೀಸರು! ಡಿವೈಎಸ್‌ಪಿ ನೇತೃತ್ವದಲ್ಲಿ ಹೊಸ ವರ್ಷಾಚರಣೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನಿನ್ನೆ ರಾತ್ರಿಯಿಡಿ ಬಂದೋಬಸ್ತ್‌ನಿಂದ ಬಸವಳಿದಿದ್ದರೂ ಸಹ ಬೆಳಗಾಗುತ್ತಲೇ ಕೊಪ್ಪಳ ಜಿಲ್ಲೆಯ ಪೊಲೀಸರು ಸಂಭ್ರಮದಿಂದ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಬಹಳ ವರ್ಷಗಳಿಂದ ಕೊಪ್ಪಳದ ಜನತೆಯ ಬೇಡಿಕೆಯಾಗಿದ್ದ ಟ್ರಾಫಿಕ್ ಲೈಟ್, ಸಿಗ್ನಲ್ , ಕ್ಯಾಮೆರಾ ಅಳವಡಿಕೆ ಮತ್ತು ಪೊಲೀಸರಿಗೆ ಶೆಲ್ಟರ್ ವ್ಯವಸ್ಥೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮದುವೆ ಮನೆ ಸಿಂಗರಿಸಿದಂತೆ ವೃತ್ತಗಳಲ್ಲಿರುವ ಟ್ರಾಫಿಕ್ ಪೊಲೀಸರ ಶೆಲ್ಟರ್‌ಗಳನ್ನು ಸಿಂಗಾರ ಮಾಡಲಾಗಿತ್ತು. ಮದುವೆಗೆ ಸಿದ್ದರಾದ ಮದುಮಕ್ಕಳಂತೆ ಪೊಲೀಸ್ ಅಧಿಕಾರಿಗಳು ಡ್ರೆಸ್ಸಿಂಗ್ ಮಾಡಿಕೊಂಡಿದ್ದ ಎಲ್ಲರನ್ನು ಸೆಳಯಿತು.

ರೇಷ್ಮಿಯ ಲುಂಗಿ, ರೇಷ್ಮಿ ಶರ್ಟ್ ಮೇಲೊಂದು ರೇಷ್ಮಿ ಶಲ್ಯ ಹೊದ್ದುಕೊಂಡು ಭರ್ಜರಿ ಸಂಭ್ರಮದಿಂದ ಪೊಲೀಸರು ಭಾಗವಹಿಸಿದ್ದರು. ಕೊಪ್ಪಳ ಡಿವಿಜನ್‌ನ ಎಲ್ಲ ಸಿಪಿಐಗಳು, ಪಿಎಸ್ಐ ಗಳು, ಇನ್ಸಪೆಕ್ಟರ್‌ಗಳು ಎಲ್ಲರೂ ಒಂದೇ ಡ್ರೆಸ್ ಕೋಡ್‌ನಲ್ಲಿದ್ದದ್ದು ಕಂಡು ಬಂತು.

ಇದೇ ಧಿರಿಸಿನಲ್ಲಿ ಗಣ್ಯರ ಮನೆಗೆ ಭೇಟಿ ನೀಡಿ ಹೊಸ ವರ್ಷಕ್ಕೆ ಶುಭ ಕೋರಿದರು. ಸಂಸದ ಕರಡಿ ಸಂಗಣ್ಣನವರ ಮನೆಗೆ ಭೇಟಿ ನೀಡಿ ಹೂಗೂಚ್ಛ ನೀಡಿ ಕೇಕ್ ಕತ್ತರಿಸಿ ಶುಭಕೋರಿ ಬಿಜೆಪಿ ಮುಖಂಡ ಅಮರೇಶ ಕರಡಿಯವರ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಕೊಪ್ಪಳ ಡಿವೈಎಸ್‌ಪಿ ವೆಂಕಟಪ್ಪ‌ ನೇತೃತ್ವದಲ್ಲಿ ಕೊಪ್ಪಳ ಪೊಲೀಸರ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಸಹಜ ಧಿರಿಸಿನಲ್ಲಿ ಗಂಗಾವತಿ ಪೊಲೀಸರ ತಂಡ ಗಣ್ಯರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಫೋಟೋಗಳು ವೈರಲ್ ಆಗಿವೆ.

ಕೊಪ್ಪಳದ ಮಹ್ಮದ್ ಹಕ್ ಸೇರಿದಂತೆ 121 ಪೋಲಿಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
2019ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಸೇರಿದಂತೆ 121 ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಕರ್ತವ್ಯ ನಿರ್ವಹಿಸಿದ್ದ ರಾಘವೇಂದ್ರ ಸುಹಾಸ, ಬೆಳಗಾವಿ ಜಿಲ್ಲೆಯ ವರಿಷ್ಠಾಧಿಕಾರಿ ಐಪಿಎಸ್ ಲಕ್ಷ್ಮಣ ನಿಂಬರಗಿ, ಬಾಗಲಕೋಟೆ ಜಿಲ್ಲೆಯ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನಕುಮಾರ ಜಿ.ಕೆ, ಶಿವಮೊಗ್ಗ ಜಿಲ್ಲೆಯ ಕೆ.ಎಂ.ಶಾಂತಕುಮಾರ ಸೇರಿದಂತೆ ಒಟ್ಟು 121 ಜನರಿಗೆ ಸಿಎಂ ಮೆಡಲ್ ದೊರಕಿದೆ.

ಕೊಪ್ಪಳದ ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹ್ಮದ್ ಹಕ್ 2019ನೇ ಸಾಲಿನ ಸಿಎಂ ಮೆಡಲ್ ಗೆ ಭಾಜನರಾಗಿದ್ದಾರೆ.

ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಸೈಬರ್ ಕ್ರೈಮ್ ವಿಭಾಗದಲ್ಲಿ ಅತ್ಯುತ್ತಮವಾದ ಪರಿಣಿತ ಹೊಂದಿರುವ ಪೋಲಿಸ್ ಎಂದೇ ಹೆಸರುವಾಸಿ. ಸೋಷಿಯಲ್ ಮೀಡಿಯಾಗಳ ಬಗ್ಗೆ ವಿಶೇಷ ಪರಿಣಿತ ಹೊಂದಿರುವ ಮತ್ತು ಸೈಬರ್ ತಂತ್ರಜ್ಞಾನದ ಬಗ್ಗೆ, ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಹಕ್ ಬಗ್ಗೆ ಇಡೀ ಜಿಲ್ಲೆಯ ಪೋಲಿಸರು ಹೆಮ್ಮೆ ಪಡುತ್ತಾರೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಇವರು ತಮ್ಮ ಪರಿಣಿತಿಯಿಂದ ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಮೆಡಲ್ ಗೆ ಭಾಜನರಾಗಿರುವ ಹಕ್ ರಿಗೆ ಕೊಪ್ಪಳ ಜಿಲ್ಲೆಯ ಸಮಸ್ತ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು, ಹಿತೈಷಿಗಳು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಚಿಕ್ಕ ನರಗುಂದ ಗ್ರಾ.ಪಂ. ಚುನಾವಣೆ; ಯುವ ಮುಖಂಡ ಮುತ್ತು ರಾಯರೆಡ್ಡಿಗೆ ಭರ್ಜರಿ ಗೆಲುವು

ವಿಜಯಸಾಕ್ಷಿ ಸುದ್ದಿ, ನರಗುಂದ

ಡಿ.27 ರಂದು ನಡೆದ ತಾಲ್ಲೂಕಿನ ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೂರನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮುತ್ತು ರಾಯರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. 173 ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಮುತ್ತು ರಾಯರೆಡ್ಡಿ, ಮತ ಹಾಕಿದ 3ನೇ ವಾರ್ಡಿನ ಮತದಾರರಿಗೆ, ಗ್ರಾಮದ ಸಮಸ್ತ ಹಿರಿಯರಿಗೆ, ಸಹೋದರ- ಸಹೋದರರಿಗೆ ಕೃತಜ್ಞತೆ ಸಲ್ಲಿಸಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮೂರನೇ ವಾರ್ಡಿನಲ್ಲಿ ಚಲಾವಣೆಗೊಂಡ 990 ಮತಗಳಲ್ಲಿ 598 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ಮುತ್ತು ರಾಯರೆಡ್ಡಿಗೆ ಗ್ರಾಮಸ್ಥರು, ಗೆಳೆಯರು ಹಾಗೂ ಅಭಿಮಾನಿಗಳು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು.

ಗ್ರಾ. ಪಂ. ಚುನಾವಣೆ- ಗದಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 92 ಅಭ್ಯರ್ಥಿಗಳ ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದ 92 ಅಭ್ಯರ್ಥಿಗಳ ಹೆಸರು, ಜಾತಿ, ಹಾಗೂ ಪಡೆದ ಮತಗಳ ವಿವರ ಇಂತಿದೆ.

ಹುಲಕೋಟಿ– 4 ರಲ್ಲಿ ಮಡಿವಾಳರ ದ್ಯಾಮವ್ವ ಅಡಿವಡಪ್ಪ ( ಸಾಮಾನ್ಯ ಮಹಿಳೆ- 518 ), ರೊಳ್ಳಿ ಉಮೇಶ ಮಹಾದೇವಪ್ಪ (ಸಾಮಾನ್ಯ-740),
ಹುಲಕೋಟಿ-6 ರಲ್ಲಿ ಸೊಗಿನ ಸಂತೋಷ ಗುರಪ್ಪ (ಸಾಮಾನ್ಯ-755)

ಹುಲಕೋಟಿ-8 ರಲ್ಲಿ ಶಲವಡಿ ಸುಮಂಗಲ ತಿಪ್ಪಣ್ಣ (ಹಿಂದುಳಿದ ಅ ವರ್ಗ ಮಹಿಳೆ-529), ಬ್ಯಾಡಗಿ ಬಸಪ್ಪ ಸಿದ್ದರಾಮಪ್ಪ (ಹಿ ಅ ವರ್ಗ-520), ರಂಗನಗೌಡ ರವೀಂದ್ರ ನಿಂಗನಗೌಡ (ಸಾ-475),

ಹೊಂಬಳ-4 ಈರಣ್ಣ ರಾಜಶೇಖರಪ್ಪ ಸಂಗಟಿ (ಹಿ ಅ ವರ್ಗ -242), ರೂಪಾ ಸಂಗಮೇಶ ಪೂಜಾರ (ಸಾ ಮಹಿಳೆ-192), ಬಸವರಾಜ ಶಂಕ್ರಪ್ಪ ಹುಣಸಿಕಟ್ಟಿ (ಸಾ-276),
ಹೊಂಬಳ-5 ಭೀಮಾಂಬಿಕ ಬ ಹಾಲನವರ (ಹಿ ಅ ವರ್ಗ ಮಹಿಳೆ-178), ಜಂದುಸಾಬ ಹುಸೇನಸಾಬ ಹಾದಿಮನಿ (ಹಿ ಅ ವರ್ಗ-427), ನೀಲವ್ವ ಮಾರುತೆಪ್ಪ ಬಾಳಣ್ಣವರ (ಸಾ ಮಹಿಳೆ-451)

ಲಿಂಗದಾಳ-3 ದೊಡ್ಡಮನಿ ದಿಲ್ಲಿಶಾದ್ ಬೇಗಂ (ಹಿ ಅ ವರ್ಗ ಮಹಿಳೆ-570), ಬಂಡಿವಾಡ ಶಕುಂತಲ ವೀರಣ್ಣ (ಸಾ ಮಹಿಳೆ-546), ನವಲಗುಂದ ದೀಲಿಪಕುಮಾರ (ಸಾ-626),
ಚಿಂಚಲಿ-1 ಗೌರಮ್ಮ ಕಾಳಪ್ಪ ಕರಿಗಾರ (ಸಾ ಮಹಿಳೆ-239), ಮಂಜುನಾಥ ಬಸಪ್ಪ ಕಾಳಿ (ಪ.ಜಾ-264), ನಿಂಗಪ್ಪ ಬ ತೇರಿನಗಡ್ಡಿ (ಸಾ-335)
ಚಿಂಚಲಿ-2 ಯಲ್ಲವ್ವ ಲು ಮಾದರ (ಪ.ಜಾ ಮಹಿಳೆ-215), ರೂಪಾ ನಾ ಕುರುಬರ (ಹಿ ಅ ವರ್ಗ ಮಹಿಳೆ-290), ಬಾಬಾಜಾನ ಕುದರಿಮೋತಿ (ಸಾ-281)

ಕಲ್ಲೂರ-1 ಚಂದ್ರಶೇಖರ ಹರಿಜನ (ಪ.ಜಾ-435) ಸೋಮಪ್ಪ ಸೊರಟೂರ (ಪ.ಪಂ-323)
ಕಲ್ಲೂರ-2 ಬಸವರಾಜ ರಾಮರೆಡ್ಡಿ (ಹಿ ಬ ವರ್ಗ-421), ಶಕುಂತಲಾ ಕೆಂಭಾವಿಮಠ (ಸಾ ಮಹಿಳೆ-222),
ಕದಡಿ-2 ಮೈಲಾರೆಪ್ಪ ನಿಂಗಪ್ಪ ಸಗರ (ಪ.ಜಾ-207), ಉಮೇಶ ವೀರಪ್ಪ ಅಕ್ಕಹುಣಸಿ (ಸಾ-304)

ಗಾವರವಾಡರಲ್ಲಿ ಕವಿತಾ ಚಂದ್ರಪ್ಪ ಕೋಣಿಮನಿ (ಪ.ಜಾ ಮಹಿಳೆ-481), ಜಂತ್ಲಿ ಮಂಜಪ್ಪ ಕನಕಪ್ಪ (ಹಿ ಅ ವರ್ಗ-493) ಕುಲಕರ್ಣಿ ಜ್ಯೋತಿ ವೀರಣ್ಣ (ಸಾ ಮಹಿಳೆ-559) ಅಣ್ಣಿಗೇರಿ ನಾಗಪ್ಪ ತಿಪ್ಪಣ್ಣ (ಸಾ-499)
ಕಳಸಾಪುರ-3 ಭಜಂತ್ರಿ ಶಾಂತವ್ವ ಹೂವಪ್ಪ (ಪ.ಜಾ ಮಹಿಳೆ-289) ಅನುಸೂಯಾ ಬಾಳನಗೌಡ ಬೆಟಗೇರಿ (ಸಾ ಮಹಿಳೆ-250), ಕಿರಣಕುಮಾರ ಕೊಪಡೆ (ಸಾ-218)
ಅಸುಂಡಿ-3 ಮೈಲೆವ್ವ ಬ ಭಾವಿಮನಿ (ಪ.ಜಾ ಮಹಿಳೆ-499) ರೇಖಾ ಶಿವಾನಂದಗೌಡ ತಿಮ್ಮನಗೌಡರ (ಸಾ ಮಹಿಳೆ-552) ಸೋನರೆಡ್ಡಿ ಹನುಮರೆಡ್ಡಿ ರಾಮನಹಳ್ಳಿ (ಸಾ-735)

ಕೋಟುಮುಚಗಿ-3 ಯಲ್ಲವ್ವ ಮ ನೀರಲಗಿ (ಹಿ ಅ ವರ್ಗ ಮಹಿಳೆ-517), ಸುವರ್ಣ ನೀಲನಗೌಡರ ಸಂಕನಗೌಡ (ಸಾ ಮಹಿಳೆ-512) ರವಿ ಮಲ್ಲಿಕಾರ್ಜುನ ಗೋದಿ (ಸಾ-598) ಶರಣಪ್ಪ ಮನೋಹರ ಮೆಗೆರಿ (ಸಾ-557)

ಕಣಗಿನಹಾಳ-1 ಕವಿತಾ ಶಂಕ್ರಪ್ಪ ಹಂಪಣ್ಣವರ (ಹಿ ಅ ವರ್ಗ ಮಹಿಳೆ-183) ಲಕ್ಷ್ಮಿ ಕಲ್ಲಪ್ಪ ಬಂಕಲಕುಂಟಿ (ಸಾ ಮಹಿಳೆ-174) ಮಲ್ಲಿಕಾರ್ಜುನ ವಿ ದೂಳಪ್ಪನವರ (ಸಾ-221)
ಸಿದ್ದರಾಮೇಶ್ವರ ನಗರ-1 ಕವಿತಾ ಸೋಮಪ್ಪ ಪವಾರ (ಪ.ಜಾ ಮಹಿಳೆ-315) ಮೀರಾಬಾಯಿ ನೇಮಪ್ಪ ಲಮಾಣಿ (ಪ.ಜಾ ಮಹಿಳೆ-300) ಸುರೇಶ ಸೋಮಪ್ಪ ಪವಾರ (ಪ.ಜಾ-395)

ಮದಗಾನೂರ, ಹನುಮವ್ವ ಪ ಬಾರಕೇರ (ಪ.ಪಂ ಮಹಿಳೆ-373) ಪದ್ಮಾವತಿ ರಾ ರಜಪೂತ (ಹಿ ಅ ವರ್ಗ ಮಹಿಳೆ-339) ಸಂಗನಗೌಡ ಪಾಟೀಲ (ಸಾ-412)
ಬಳಗಾನೂರ-3 ಶಿವಲಿಂಗವ್ವ ಜಗಳೂರು (ಪ.ಪಂ ಮಹಿಳೆ-352) ಬಂಡಿವಾಡ ಶಿ ವೀರಭದ್ರಪ್ಪ (ಹಿ ಬ ವರ್ಗ-474) ಶಾಂತಾ ವ ಶಟುವಾಜಿ (ಸಾ ಮಹಿಳೆ-325) ಕೃಷ್ಣಪ್ಪ ಯ ಪಡೆಸೂರ (ಸಾ-532)

ಕುರ್ತಕೋಟಿ-7 ಜಕ್ಕಲಿ ಮಂಜುಳಾ ಶರಣಪ್ಪ (ಹಿ ಅ ವರ್ಗ-397) ಚನ್ನಬಸವ್ವ ಹ ಹುಬ್ಬಳ್ಳಿ (ಸಾ ಮಹಿಳೆ-515) ಅಶೋಕ ವೀರಪ್ಪ ಶಿರಹಟ್ಟಿ (ಸಾ-627)
ಬ್ರಹ್ಮಾನಂದಪುರ-2 ಸವಿತಾ ಹನುಮಂತ ನಾಯಕ (ಪ.ಜಾ ಮಹಿಳೆ-279) ಶಾರದಾ ನಾಯಕ (ಪ.ಜಾ ಮಹಿಳೆ-266) ಶಿವಪ್ಪ ಟೋಪಣ್ಣ ನಾಯಕ (ಪ.ಜಾ-366)

ಕಿರಟಗೇರಿ ಕ್ಷೇತ್ರದಲ್ಲಿ ಹೇಮಾ ಬಸವರಾಜ ಹರಿಜನ (ಪ.ಜಾ ಮಹಿಳೆ-436) ಶಂಕ್ರವ್ವ ಕಲ್ಲಪ್ಪ ಹಡಪದ (ಹಿ ಅ ವರ್ಗ ಮಹಿಳೆ-393) ಪಾಟೀಲ ಮಹೇಶಗೌಡ ತಮ್ಮನಗೌಡ (ಸಾ-320)
ಅಂತೂರ-2 ಭಜಂತ್ರಿ ಅಶೋಕ ರಾಮಪ್ಪ (ಪ.ಜಾ-307) ನಿರ್ಮಲಾ ಎಂ ಹಸರಾನಿ (ಹಿ ಅ ವರ್ಗ ಮಹಿಳೆ-300) ನಿರ್ಮಲಾ ಕೊಪ್ಪಳ (ಸಾ ಮಹಿಳೆ-357) ಮಂಜುನಾಥ ಈ ಪವಾಡಿ (ಸಾ-507)
ಲಕ್ಕುಂಡಿ-10 ಗಂಗಮ್ಮ ಎಂ ಪೂಜಾರ (ಪ.ಪಂ ಮಹಿಳೆ-189) ಈರವ್ವ ಛಬ್ಬರಭಾವಿ (ಹಿ ಬ ವರ್ಗ ಮಹಿಳೆ-276) ರುದ್ರಪ್ಪ ಮುಸುಕಿನಭಾವಿ (ಸಾ-426)

ಲಕ್ಕುಂಡಿ-7 ಮಂಜುನಾಥ ಗುಡನಮನಿ (ಹಿ ಅ ವರ್ಗ-236) ಶ್ರೇಯಾ ಚಂದ್ರಹಾಸ ಕಟುಗಾರ (ಸಾ ಮಹಿಳೆ-374)
ಲಕ್ಕುಂಡಿ -8 ಭಜಂತ್ರಿ ಲಕ್ಮವ್ವ ದೇವಪ್ಪ (ಪ.ಜಾ ಮಹಿಳೆ-107) ಬೇಟಗೇರಿ ಕಲ್ಲಪ್ಪ (ಸಾ-126)
ನರಸಾಪೂರ -2 ಜಂಬಣ್ಣ ವೀರಪ್ಪ ಕಲಬುರಗಿ (ಹಿ ಅ ವರ್ಗ-211) ನಿರ್ಮಲಾ ಎಂ ಕರಿಗೌಡರ (ಸಾ ಮಹಿಳೆ-201)
ನಾಗಸಮುದ್ರ, ವಿಜಯಲಕ್ಷ್ಮಿ ಹೊಸಮನಿ (ಪ.ಜಾ ಮಹಿಳೆ-301) ಬಸನಗೌಡ ವೀರನಗೌಡ ಪಾಟೀಲ (ಹಿ ಅವರ್ಗ -496) ನೀಲವ್ವ ಶಿವಪ್ಪ ಮಣ್ಣೂರ (ಸಾ ಮಹಿಳೆ-558) ಮಂಜುನಾಥ ಪರ್ವತಗೌಡರ (ಸಾ-459)
ಕಣವಿ-1 ಹಾಲವ್ವ ಕುಬೇರಪ್ಪ ಕುರಿ (ಹಿ ಅ ವರ್ಗ ಮಹಿಳೆ-408) ಮಹಾದೇವಿ ಶರಣಪ್ಪ ಬಳಿಗೇರ (ಸಾ ಮಹಿಳೆ-389) ಪ್ರಕಾಶ ಈಶ್ವರಪ್ಪ ಕುರ್ತಕೋಟಿ (ಸಾ-503)
ಹಿರೇಹಂದಿಗೋಳ-1 ಗಾಯತ್ರಿ ಬಸವರಾಜ ಖಾನಾಪುರ (ಹಿ ಅ ವರ್ಗ ಮಹಿಳೆ-260) ಪರಪ್ಪನವರ ನಿಂಗಪ್ಪ ಈರಪ್ಪ (ಸಾ-343)
ಎಲಿಶಿರೂರ-2 ಶಿವಪುತ್ರೆವ್ವ ನಾಗಪ್ಪ ಬರಮನಾಯಕ (ಪ.ಪಂ ಮಹಿಳೆ-403) ಪರುಶುರಾಮ ಗೂಳಪ್ಪ ಹೂಗಾರ (ಹಿ ಅ ವರ್ಗ -508) ಕವಿತಾ ಮಲ್ಲಿಕಾರ್ಜುನ ಹೊನ್ನಪ್ಪನವರ (ಸಾ ಮಹಿಳೆ-404) ಮಂಜುನಾಥ ಶ ಎಲಿ (ಸಾ-574)
ಕುರ್ತಕೋಟಿ-6 ಶೇಖವ್ವ ದುರ್ಗಪ್ಪ ಶೈಲಾಪುರ (ಪ.ಪಂ ಮಹಿಳೆ-395) ಪುಷ್ಪಾ ವೀರಪ್ಪ ನಾಗಾವಿ (ಸಾ ಮಹಿಳೆ-386) ಇನಾಮತಿ ಮಲ್ಲಪ್ಪ ಮೈಲಾರಪ್ಪ (ಸಾ-517) ಕೋರಿ ವೀರಣ್ಣ ಗುರುಸಿದ್ದಪ್ಪ (ಸಾ-504)

error: Content is protected !!