Home Blog Page 3277

ವಿಧಾನಸಭೆ ಚುನಾವಣೆ-2023; ಗದಗ ಜಿಲ್ಲೆಯಲ್ಲಿ ಬುಧವಾರ 28 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು_ ಜಿಲ್ಲೆಯಲ್ಲಿ ಬುಧವಾರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 22 ಅಭ್ಯರ್ಥಿಗಳಿಂದ 28 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 73 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಅಶೋಕ ಹೇಮಪ್ಪ ಲಮಾಣಿ-1, ಪಕ್ಷೇತರ ಅಭ್ಯರ್ಥಿಯಾಗಿ ಸುನೀಲಕುಮಾರ ಪಾಂಡಪ್ಪ ಬಹಮನಪದ-1, ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿಕಾರ್ಜುನ ಯಲ್ಲಪ್ಪ ದೊಡ್ಡಮನಿ-2, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸುಜಾತಾ ನಿಂಗಪ್ಪ ದೊಡಮನಿ-3,

ಜನತಾ ದಳ(ಸೆಕ್ಯೂಲರ) ದಿಂದ ಹನುಮಂತಪ್ಪ ನಾಯಕ-1, ಪಕ್ಷೇತರ ಅಭ್ಯರ್ಥಿಗಳಾಗಿ ಸಂತೋಷ ಗೌರವ್ವ ಹಿರೇಮನಿ-1, ಹನುಮಂತಪ್ಪ ಪೀರಪ್ಪ ಕೋರವರ-1, ಗುರುನಾಥ ಕಲ್ಲಪ್ಪ ದಾನಪ್ಪನವರ ಭಾರತೀಯ ಜನತಾ ಪಾರ್ಟಿಯಿಂದ-1, ಗುರುನಾಥ ಕಲ್ಲಪ್ಪ ದಾನಪ್ಪನವರ ಪಕ್ಷೇತರರಾಗಿ-1 ನಾಮಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1, ಆಮ್ ಆದ್ಮಿ ಪಾರ್ಟಿಯಿಂದ ಪೀರಸಾಬ ಶೇಖ-2, ಜನತಾ ದಳ(ಸೆಕ್ಯೂಲರ)ಪಾರ್ಟಿಯಿಂದ ಗೋವಿಂದಗೌಡ ವೆಂಕನಗೌಡ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಚಿನಕುಮಾರ ಕರ್ಜೆಣ್ಣವರ-1, ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಶಂಕರಗೌಡ ಪರ್ವತಗೌಡ್ರ-1, ಪಕ್ಷೇತರರಾಗಿ ಬಸವರಾಜ ಷಣ್ಮುಖಪ್ಪ ಮಾಳೋದ-1 ನಾಮಪತ್ರ ಸಲ್ಲಿಸಿರುತ್ತಾರೆ.

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 3 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಭಾರತೀಯ ಜನತಾ ಪಾರ್ಟಿಯಿಂದ ಕಳಕಪ್ಪ ಬಂಡಿ-1, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಿಂದ ಗುರುಪಾದಗೌಡ ಸಂಗನಗೌಡ ಪಾಟೀಲ-2 ನಾಮಪತ್ರ ಸಲ್ಲಿಸಿರುತ್ತಾರೆ.

ಬಿಜೆಪಿಯಿಂದ ಕಳಕಪ್ಪ ಬಂಡಿ ನಾಮಪತ್ರ ಸಲ್ಲಿಸಿದ್ದಾರೆ
ಕಾಂಗ್ರೆಸ್ ಪಕ್ಷದಿಂದ ಜಿ ಎಸ್ ಪಾಟೀಲ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ವೀರೇಶ ಸೊಬರದಮಠ-1, ಜನತಾದಳ (ಸೆಕ್ಯೂಲರ)ದಿಂದ ರುದ್ರಗೌಡ ನಿಂಗನಗೌಡ ಪಾಟೀಲ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಪ್ಪ ಹುಜರತ್ತಿ-1, ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಶಿದ್ದಪ್ಪ ಮಾಯಣ್ಣವರ-1, ಭಾರತೀಯ ಜನತಾ ಪಾರ್ಟಿಯಿಂದ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ-2 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರಗುಂದ-ಬಿಜೆಪಿ ಅಭ್ಯರ್ಥಿ ಚಂದ್ರಕಾಂತಗೌಡ‌ ಪಾಟೀಲ ನಾಮಪತ್ರ ಸಲ್ಲಿಸುವ ಮೊದಲು ಮೆರವಣಿಗೆ ನಡೆಸಿದರು.

ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಾಣಾಧೀನ ಖೈದಿ ಸಾವು

ಮಹಿಳೆ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ ಆರೋಪಿ

ವಿಜಯಸಾಕ್ಷಿ ಸುದ್ದಿ, ಗದಗ

ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಬಸಪ್ಪ ನಾಗಪ್ಪ ಚಂದ್ರ (50) ಮೃತಪಟ್ಟ ವಿಚಾರಣಾಧೀನ ಖೈದಿ.

ಏಪ್ರಿಲ್ 17ರಂದು ಮುಂಜಾನೆ ಬೆಟಗೇರಿಯ ಸಬ್ ಜೈಲಿನ ಬಾತರೂಮ್ ನಲ್ಲಿ ಬ್ಲೇಡ್ ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ತಕ್ಷಣವೇ ಜೈಲು ಸಿಬ್ಬಂದಿ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬುಧವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಬಸಪ್ಪ ಮೃತಪಟ್ಟಿದ್ದಾನೆ.

2022ರ ಡಿಸೆಂಬರ್ 18ರಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ಮಹಿಳೆಯನ್ನು ಕೊಲೆಗೈದು ಜೈಲು ಸೇರಿದ್ದ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಪೋಸ್ಟ್: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ರೋಣ

ಚುನಾವಣಾಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪೋಸ್ಟ್‌ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ರೋಣ ತಾಲೂಕಿನ ಮೆಣಸಗಿ ಗ್ರಾಮದ ಕೇದಾರಗೌಡ ಎಂಬುವರು ಏ.8ರಂದು ಮುಂಜಾನೆ 10 ಗಂಟೆಯ ಸಮಯಕ್ಕೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಲವೊಂದು ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿದೆ. ಆದರೆ, ಘೋಷಣೆ ಮಾಡದ ಗ್ಯಾರಂಟಿಗಳು ಎಂದು ಪೋಸ್ಟ್‌ ಮಾಡಿದ್ದರು.

ನರಗುಂದ ಮತಕ್ಷೇತ್ರದ ಹೊಳೆಆಲೂರು ಸರ್ಕಲ್‌ ಹಾಗೂ ಗ್ರಾಮೀಣ ವಲಯದ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಹಶಮ್‌ಸಾಹೇಬ ಮಹಮ್ಮದ್‌ಗೌಸ್‌ ಖುದಾವಂದ್‌ ಇವರು ಏ.13ರಂದು ರೋಣದ ಕಾರ್ಯನಿರ್ವಾಹಕ ಅಭಿಯಂತರು ನೀಡಿದ ಮಾಹಿತಿಯ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಕಲಂ:125 ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ:171(ಬಿ) ಅಡಿಯಲ್ಲಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ; ಇನ್ಮುಂದೆ ನಿಮ್ಮ ಆಟ, ನಾಟಕ ನಡೆಯುವುದಿಲ್ಲ

ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ…….

ವಿಜಯಸಾಕ್ಷಿ ಸುದ್ದಿ, ಗದಗ

ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ, ಬಿಜೆಪಿಯ ಅನಿಲ್‌ ಮೆಣಸಿನಕಾಯಿ ಅವರು ನಾಪಪತ್ರ ಸಲ್ಲಿಕೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪೊಲೀಸರಿಗೆ ನೀಡಿಲ್ಲ. ಎಚ್.ಕೆ. ಪಾಟೀಲರ ಹೆಸರಿಗೆ ಕಳಂಕ ತರಬೇಕೆಂಬುದೇ ಅವರ ಉದ್ದೇಶವಾಗಿತ್ತು ಎಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ  ಬಿ.ಬಿ. ಅಸೂಟಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದುಗಿನ ಸಾತ್ವಿಕ ರಾಜಕೀಯಕ್ಕೆ ಅನಿಲ್ ಮೆಣಸಿನಕಾಯಿ ತಿಲಾಂಜಲಿಯಿಡುತ್ತಿದ್ದಾರೆ. ಸೋಮವಾರ ಶಾಸಕ ಎಚ್.ಕೆ. ಪಾಟೀಲ್ ಅಪಾರ ಬೆಂಬಲಿರೊಂದಿಗೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು.

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಲ್ಲಿಗೇ ಅಗಮಿಸಿ, ಗಲಾಟೆ ಪ್ರಾರಂಭವಾಗಲು ಪ್ರಚೋದನೆ ನೀಡಿ, ಗೂಂಡಾ ವರ್ತನೆ ತೋರಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದ ಅನಿಲ್‌, ಉದ್ದೇಶಪೂರ್ವಕವಾಗಿ ಸೋಮವಾರವೇ ನಾಮಪತ್ರ ಸಲ್ಲಿಸಲು ಬಂದಿದ್ದಾರೆ ಎಂದು ಆರೋಪಿಸಿದರು.

ಜಗದೀಶ್ ಶೆಟ್ಟರ್ ಪರ ಘೋಷಣೆ ಕೂಗಿದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅವರೇ ತಮ್ಮ ಕಾರ್ ಮೇಲೆ ಏರಿ ಬಾನೆಟ್‌ಗೆ ಹಾನಿ ಮಾಡಿದ್ದಾರೆ. ಅವರೇ ಕಾರಿನ ಗ್ಲಾಸ್ ಒಡೆದು ನಾಟಕ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಗಲಾಟೆ ಮಾಡೋದು ಚಾಳಿಯಾಗಿದೆ ಎಂದು ಬಿ.ಬಿ ಅಸೂಟಿ ಹೇಳಿದರು.

ಮುಂದೆಯೂ ಇದೇ ರೀತಿ ಗದ್ದಲ, ಗಲಾಟೆ ಮಾಡುತ್ತಾರೆ. ಅನಿಲ್ ಮೆಣಸಿನಕಾಯಿಯವರೇ, ನಿಮ್ಮೆಲ್ಲಾ ನಾಟಕಗಳು ಮೇ.10ರಂದು ಕೊನೆಯಾಗಲಿದೆ. ಮತ್ತೆ ಬೆಂಗಳೂರಿಗೆ ಹೋಗಿ. ಐದು ವರ್ಷ ಅಲ್ಲೇ ಇರುವಂತೆ ಗದಗ ಜನರು ದಾರಿ ತೋರಿಸುತ್ತಾರೆ. ಮೆಣಸಿನಕಾಯಿಯವರೇ, ಇನ್ನುಮುಂದೆ ನಿಮ್ಮ ಆಟ, ನಾಟಕ‌ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

2018ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಕಾರ್ಯಕರ್ತ ಮಂಜುನಾಥ ಮುಳಗುಂದ ಜನೆವರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ, ಹುಲಕೋಟಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅತ್ಯಂತ ಶಾಂತ ರೀತಿಯಿಂದ ನಮ್ಮನ್ನೆಲ್ಲ ಬರಮಾಡಿಕೊಂಡು, ಬೀಳ್ಕೊಟ್ಟಿದ್ದರು.

ವಾಪಸ್‌ ಗದಗಕ್ಕೆ ಬಂದಾಗ, ಜೊತೆಗಿದ್ದ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ಕಲ್ಲೆಸೆಯಬೇಕಿತ್ತು. ಆಗ ನಾವು ಅದನ್ನೇ ದೊಡ್ಡ ಪ್ರತಿಭಟನೆಯ ಅಸ್ತ್ರವಾಗಿಸಿಕೊಳ್ಳಬಹುದಿತ್ತು ಎಂದಿದ್ದರಂತೆ.

ಅವರ ಆ ಉದ್ದೇಶ, ಮಾತು ಈಗ ನಿಜವಾಗಿದೆ. ಬಿಜೆಪಿಯ ಸ್ನೇಹಿತರೇ ನೀಡಿರುವ ಮಾಹಿತಿಯಂತೆ, ಹುಲಕೋಟಿಯನ್ನೇ ಗುರಿಯಾಗಿಸಿಕೊಂಡು, ಗದ್ದಲವೆಬ್ಬಿಸಿ, ಅನುಕಂಪ ಪಡೆದು ನಂತರ ಗದಗಕ್ಕೆ ಬಂದು ಮತಯಾಚನೆ ಮಾಡುವ ಉದ್ದೇಶವಿದೆ ಎಂದು ಮಂಜುನಾಥ ಮುಳಗುಂದ ತಿಳಿಸಿದ್ದಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ವಿದ್ಯಾಧರ ದೊಡ್ಡಮನಿ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ಬಸವರಾಜ್ ಮನಗುಂಡಿ, ರಮೇಶ್ ಹೊನ್ನಿನಾಯ್ಕರ್ ಇದ್ದರು.

ವಿಧಾನಸಭೆ ಚುನಾವಣೆ ; ಗದಗ ಜಿಲ್ಲೆಯಲ್ಲಿಂದು 16 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಗದಗ-ಅನಿಲ‌ ಮೆಣಸಿನಕಾಯಿ, ರೋಣ-ಜಿ ಎಸ್ ಪಾಟೀಲ್, ನರಗುಂದ-ಬಿ ಆರ್ ಯಾವಗಲ್, ಆನೇಕಲ್ ದೊಡ್ಡಯ್ಯ ಸೇರಿದಂತೆ 16 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 16 ಅಭ್ಯರ್ಥಿಗಳಿಂದ 18 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಆಮ್ ಆದ್ಮಿ ಪಾರ್ಟಿಯಿಂದ ಮಲ್ಲಿಕಾರ್ಜುನ ಯ ದೊಡ್ಡಮನಿ-2, ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ ಭ ಗುಗ್ಗರಿ-1, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸುಷ್ಮಾ ಸರ್ವೆದೆ-1 ನಾಮ ಪತ್ರ ಸಲ್ಲಿಸಿರುತ್ತಾರೆ.

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ಪೂಜಾ ಮಲ್ಲಪ್ಪ ಬೇವೂರ-1, ಪಕ್ಷೇತರ ಅಭ್ಯರ್ಥಿಯಾಗಿ ಬಸನಗೌಡ ಮಲ್ಲನಗೌಡ ಪಾಟೀಲ-1, ಭಾರತೀಯ ಜನತಾ ಪಾರ್ಟಿಯಿಂದ ಅನೀಲ ಪಿ ಮೆಣಸಿನಕಾಯಿ-1, ಪಕ್ಷೇತರ ಅಭ್ಯರ್ಥಿಯಾಗಿ ವಿಶ್ವನಾಥ ಗಂಗಾಧರ ಶೀರಿ-1,

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 4 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕುಮಾರ ಅಂದಪ್ಪ ಹಕಾರಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಂಜುನಾಥ ಮಹಾದೇವಪ್ಪ ಗುರಿಕಾರ-1, ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡಯ್ಯ ಎಂ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಗುರುಪಾದಗೌಡ ಸಂಗನಗೌಡ ಪಾಟೀಲ-1,

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂವಮೆಂಟ್ ಪಾರ್ಟಿಯಿಂದ ರುದ್ರಯ್ಯ ಗದಿಗಯ್ಯ ಸುರೇಬಾನ-1, ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಶಿದ್ದಪ್ಪ ಮಾಯನ್ನವರ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಪ್ಪ ಲಕ್ಷ್ಮಪ್ಪ ಹುಜರತ್ತಿ-1, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಬಸವರಡ್ಡಿ ರಂಗರಡ್ಡಿ ಯಾವಗಲ್-2, ಪಕ್ಷೇತರ ಅಭ್ಯರ್ಥಿಯಾಗಿ ದುರ್ಗಪ್ಪ ಪರಪ್ಪ ಜಮಖಂಡಿ-1 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ಪ್ರಕರಣ; ಕಾಂಗ್ರೆಸ್‌ನ 9 ಜನ, ಬಿಜೆಪಿಯ ನಗರಸಭೆ ಸದಸ್ಯರು ಸೇರಿ 12 ಜನರ ಮೇಲೆ ಕೇಸ್

ದೂರು.. ಪ್ರತಿದೂರು ದಾಖಲು……

ವಿಜಯಸಾಕ್ಷಿ ಸುದ್ದಿ, ಗದಗ

ನಿನ್ನೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಆಂಡ್ ಕೌಂಟರ್ ಕೇಸ್ ದಾಖಲಾಗಿದೆ.

ಶಹರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಜನರ ಮೇಲೆ ಹಾಗೂ ಬಿಜೆಪಿಯ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ವಿದ್ಯಾಧರ ದೊಡ್ಡಮನಿ, ಬಸವರಾಜ್ ಬೆಳದಡಿ, ಅನೀಲ ಸಿದ್ದಮ್ಮನಹಳ್ಳಿ, ಶಿವಪ್ಪ ಬಳ್ಳಾರಿ, ಪಾಟೀಲ್‌ ಸಿ.ಕೆ, ಬಾಬಾಜಾನ್ ಬೇಲೇರಿ, ಚಂದ್ರು ಕರಿರಾಯನಗೌಡ್ರ, ಆಂಜನೇಯ ಕಟಗಿ, ಪ್ರಭು ಬುರುಬುರೆ ಇವರೆಲ್ಲರೂ ಸೇರಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಅನಿಲ ಮೆಣಸಿನಕಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಗ್ಗೆ ದೂರು ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರು ತಮ್ಮ ನಾಮಪತ್ರ ಸಲ್ಲಿಸಿ ಕಾರು ಹತ್ತುವು ಸಂದರ್ಭದಲ್ಲಿ ಈ ಒಂಬತ್ತು ಜನ ಕಾಂಗ್ರೆಸ್ ಕಾರ್ಯಕರ್ತರು, ಅನಿಲ ಮೆಣಸಿನಕಾಯಿ ಅವರ ಕಾರಿನ ಗ್ಲಾಸ್ ಒಡೆದು, ಮಜ್ಜಿಗೆ ಪಾಕೆಟ್ ತೂರಾಡಿ, ಬಾಯಿಂದ ಉಗುಳಿ ಚಪ್ಪಲಿ ಒಗೆದು ಅವಮಾನ ಪಡಿಸಿ, ಬಾಬಾಜಾನ ಬೇಲೇರಿ ಎಂಬುವರು, ಶರಣಪ್ಪ ಬಸಪ್ಪ ಕಮಡೊಳ್ಳಿ ಹಾಗೂ ಉಮೇಶ್ ಮಲ್ಲಪ್ಪ ಹಡಪದ ಇವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪರಮೇಶ್ ಚನ್ನಪ್ಪ ನಾಯಕ ಇವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

0041/2023 ಕಲಂ IPC 1860 (U/s-143,147, 148, 323, 324, 427, 355, 504, 506, 149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಶಿವಪ್ಪ ಬಳ್ಳಾರಿ ಎಂಬುವರು ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ 12 ಜನರ ಮೇಲೆ ದೂರು ಕೊಟ್ಟಿದ್ದಾರೆ.

ಶಿವಪ್ಪ ಮುಳಗುಂದ, ವೆಂಕಟೇಶ ಮೆಹರವಾಡೆ, ಸೋಹೆಲ್ ಕೊಟ್ಟೂರು, ಉಡಚಪ್ಪ ಹಳ್ಳಿಕೇರಿ, ಕುಮಾರ್ ಮಾರನಬಸರಿ, ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಹಾಗೂ ಹಲವು ಜನರ ಮೇಲೆ ದೂರು ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಕೆ ಪಾಟೀಲ್ ಇವರು, ನಾಮಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇರುವಾಗ, ಆ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹಾಗೂ ಅವರ ಹಿಂಬಾಲಕರು, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಹೊರಗಡೆ ಬಂದಿದ್ದು, ಆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೋಡಿ,

ಸಿಟ್ಟಿನಿಂದ ನೋಡುತ್ತಾ ಕಾರು ಹತ್ತಲು ಪ್ರಯತ್ನಿಸುತ್ತಿದ್ದಾಗ ಅವರ ಕಾರ್ಯಕರ್ತರಾದ ಶಿವಪ್ಪ ಮುಳಗುಂದ, ನಮ್ಮೇನ್ನೆಲ್ಲಾ ನೋಡಿ, ಮೀಸೆ ತಿರುವಿ, ಶೆಡ್ ಹೊಡೆದು ಈ ಸಲ ಮಕ್ಕಳ ನಿಮ್ಮೆಲ್ಲರನ್ನೂ ಒಂದು ಕೈ ನೋಡುತ್ತೇವೆ ಅನ್ನುತ್ತಾ, ಶಿವಪ್ಪ ಬಳ್ಳಾರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ನೋಡಿಕೊಂಡು ಬಿಡೋಣ ಅಂದಾಕ್ಷಣ ವೆಂಕಟೇಶ ಮೆಹರವಾಡೆ ಇವರು, ಏಕಾಏಕಿ ಅಸುಂಡಿ ಗ್ರಾಮದ ವೆಂಕರಡ್ಡಿ ಹನಮರಡ್ಡಿ ರಾಮೇನಹಳ್ಳಿ ಇವರಿಗೆ ಮುಷ್ಠಿಯಿಂದ ಹೊಡೆಯಲು ಹತ್ತಿದಾಗ,

ಬಿಡಿಸಲು ಹೋದ ಶಶಿಧರಗೌಡ ಲೆಂಕನಗೌಡರ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿ ತಳ್ಳಿದಾಗ, ಮತ್ತೊಬ್ಬ ಸೋಹೆಲ್ ಕೊಟ್ಟೂರು ಕೂಡ ಶಿವಪ್ಪ ಬಳ್ಳಾರಿ ಅವರಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಾಗ,

ವೆಂಕಟೇಶ ಮೆಹರವಾಡೆ ಇವಂದು ಬಾಳ ಆಗೈತಿ ಸಾಯಿಸಿ ಬಿಡಬೇಕು ಎಂದು ಆವಾಚ್ಯ ಶಬ್ದಗಳಿಂದ ನಿಂಧಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಉಡಚಪ್ಪ ಹಳ್ಳಿಕೇರಿ ಎಂಬುವರು ಎಲೆಕ್ಷನ್ ಅದು ಹೇಗೆ ಮಾಡ್ತೀರೀ ನೋಡ್ತೀವಿ ಎಂದು ಹೊಡೆದನು. ಕುಮಾರ್ ಮಾರನಬಸರಿ, ಕಲ್ಲಿನಿಂದ ಕಾಲಿಗೆ ಒಗೆದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೆ ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ, ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಸೇರಿದಂತೆ ಇನ್ನೂ ಅನೇಕರು ಶಿವಪ್ಪ ಬಳ್ಳಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಾಹಿತಿ ‌ನೀಡಿದ್ದಾರೆ.

0042/2023 ಕಲಂ IPC 1860 (U/s-143, 147, 148, 323, 324, 504, 506, 149) ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನಸಭೆ ಚುನಾವಣೆ; ಗದಗ ಜಿಲ್ಲೆಯಲ್ಲಿಂದು 18 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ವಿಧಾನ lಸಭಾ ಕ್ಷೇತ್ರಗಳಲ್ಲಿ ಸೋಮವಾರ 14 ಅಭ್ಯರ್ಥಿಗಳಿಂದ 18 ನಾಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ.

65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿಯಾಗಿ ಮುತ್ತು ಎಸ್-1, ಅನಿಲ ನಾಗಪ್ಪ ಮುಳಗುಂದ ಭಾರತೀಯ ಜನತಾ ಪಾರ್ಟಿ-1, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಸುಜಾತಾ ನಿಂಗಪ್ಪ ದೊಡ್ಡಮನಿ-1, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಂಜುನಾಥ ಅಸಂಗೆಪ್ಪ ಆಸಂಗಿ-1, ಪಕ್ಷೇತರ ಅಭ್ಯರ್ಥಿಯಾಗಿ ಅನಿಲ ನಾಗಪ್ಪ ಮುಳಗುಂದ-1, ಪಕ್ಷೇತರ ಅಭ್ಯರ್ಥಿಯಾಗಿ ರಾಮಕೃಷ್ಣ್ ಸಿದ್ದಲಿಂಗಪ್ಪ ದೊಡ್ಡಮನಿ-1,

66-ಗದಗ ವಿಧಾನಸಭಾ ಮತಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಆನಂದ ಬಸವರಾಜ ಹಂಡಿ-1, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದ ಹನುಮಂತಗೌಡ ಕೃಷ್ಣಗೌಡ ಪಾಟೀಲ-4, ಆಮ್ ಆದ್ಮಿ ಪಾರ್ಟಿಯಿಂದ ಪೀರಸಾಬ ಅಬ್ದುಲಸಾಬ ಶೇಖ-1, ಭಾರತೀಯ ಜನತಾ ಪಾರ್ಟಿಯಿಂದ ಅನಿಲ ಪಿ ಮೆಣಸಿನಕಾಯಿ-1,

67-ರೋಣ ವಿಧಾನಸಭಾ ಮತಕ್ಷೇತ್ರದಿಂದ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ಶಿವಾನಂದ ಶಂಕ್ರಪ್ಪ ರಾಠೋಡ-1, ಅಶೋಕ ವಿರುಪಾಕ್ಷಪ್ಪ ಬೇವಿನಕಟ್ಟಿ-1

68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವೀರನಗೌಡ ಶಿವನಗೌಡ ಮೂಗನೂರ-1, ಆಮ್ ಆದ್ಮಿ ಪಾರ್ಟಿಯಿಂದ ರಾಮಪ್ಪ ದ್ಯಾಮಪ್ಪ ಹೂವಣ್ಣವರ-1, ಪಕ್ಷೇತರ ಅಭ್ಯರ್ಥಿಯಾಗಿ ಮುತ್ತು ಎಸ್-1 ನಾಮಪತ್ರ ಸಲ್ಲಿಕೆಯಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಕಾರಿಗೆ ಕಲ್ಲು, ಗಾಜು ಜಖಂ, ಮಾತಿನ ಚಕಮಕಿ

ನಾಮಪತ್ರ ಸಲ್ಲಿಸಿ ವಾಪಾಸು ಹೋಗುವಾಗ ನಡೆದ ಘಟನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು, ಕಾರಿನ ಗ್ಲಾಸ್ ಜಖಂಗೊಂಡ ಘಟನೆ ನಡೆದಿದೆ.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಈ ಘಟನೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ವಾಪಾಸು ಆಗುವಾಗ ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ನಾಮಪತ್ರ ಸಲ್ಲಿಸುವ ಕಾರ್ಯ ನಿಗದಿಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

ಇದರಿಂದಾಗಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆಗೆ ಮುಂದಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಪೊಲೀಸರು ಹಾಗೂ ಅರೆಸೇನಾ ಪಡೆಯು, ಸೇರಿದ್ದ ಕಾರ್ಯಕರ್ತರನ್ನು ಚದುರಿಸಿದರು.

ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಸಬ್ ಜೈಲಿನಲ್ಲಿ ಬ್ಲೇಡನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ; ಸ್ಥಿತಿ ಗಂಭೀರ

ಮಹಿಳೆಯೊಬ್ಬಳ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ……..

ವಿಜಯಸಾಕ್ಷಿ ಸುದ್ದಿ, ಗದಗ

ವಿಚಾರಣಾಧೀನ ಖೈದಿಯೊಬ್ಬ ಸಬ್ ಜೈಲಿನಲ್ಲಿ ಬ್ಲೇಡ್ನಿಂದ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಬಸಪ್ಪ ನಾಗಪ್ಪ ಚಂದ್ರ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವಿಚಾರಣಾಧೀನ ಖೈದಿ.

ಬೆಟಗೇರಿಯ ಸಬ್ ಜೈಲಿನಲ್ಲಿ ಈ ಘಟನೆ ನಡೆದಿದ್ದು, ವಿಚಾರಣಾಧೀನ ಖೈದಿಗಳನ್ನು ಉಪಹಾರಕ್ಕೆ ಕರೆದಿದ್ದ ವೇಳೆ ಬಾತ್ ರೂಮ್ ನಲ್ಲಿ ಹೋಗಿ ಬ್ಲೇಡ್ ನಿಂದ ಕತ್ತು ಕೊಯ್ದಕೊಂಡಿದ್ದಾನೆ. ಉಪಹಾರ ಸೇವಿಸಲು ಬಸಪ್ಪ ಬಾರದಿದ್ದಾಗ ಜೈಲು ಸಿಬ್ಬಂದಿ ಸ್ಥಳಕ್ಕೆ ಹೋಗಿ ‌ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ತಕ್ಷಣವೇ ಜೈಲು ಸಿಬ್ಬಂದಿ ಬಸಪ್ಪನನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಿಮ್ಸ್ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ ಮಹಿಳೆ ಭೀಕರ ಕೊಲೆ; ಕೊಲೆಗೈದು ಕುಡುಗೋಲು ಸಮೇತ ಠಾಣೆಗೆ ಶರಣಾದ ಆರೋಪಿ!

2022ರ ಡಿಸೆಂಬರ್ 18ರಂದು ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೊಬ್ಬಳ‌ ಕೊಲೆ ಆರೋಪದಲ್ಲಿ ಬಸಪ್ಪ ಜೈಲು ಪಾಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚಿರತೆ ಪತ್ತೆಗೆ ಡ್ರೋಣ ಕ್ಯಾಮೆರಾ; ಪತ್ತೆಯಾಗದ ಚಿರತೆ……….

ನಿನ್ನೆ ರಾತ್ರಿ ಪತ್ತೆಯಾಗಿದ್ದ ಚಿರತೆ…….

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರ ರಾತ್ರಿ ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಆರಾಮದಾಯಕವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಕಂಡಿದ್ದ ಚಿರತೆ ಇನ್ನೂ ಪತ್ತೆಯಾಗಿಲ್ಲ.

ನಿನ್ನೆ ರಾತ್ರಿಯಿಂದ ಬಿಂಕದಕಟ್ಟಿ, ಅಸುಂಡಿ ಗ್ರಾಮದ ಜನರ ನಿದ್ದೆಗೆಡಿಸಿರುವ ಚಿರತೆ, ಅರಣ್ಯ ಇಲಾಖೆಯ ಅಧಿಕಾರಿಗಳ ರಾತ್ರಿಯಿಡೀ ಶೋಧ ನಡೆಸಿದರು ಚಿರತೆ ಇರುವಿಕೆ ಪತ್ತೆಯಾಗಿಲ್ಲ.

ಇದನ್ನೂ ಓದಿ ಗದಗ ಸಮೀಪ ಚಿರತೆ ಪ್ರತ್ಯಕ್ಷ; ಸಾರ್ವಜನಿಕರ, ಪ್ರಯಾಣಿಕರ ಆತಂಕ, ಅರಣ್ಯ ಇಲಾಖೆ ಅಧಿಕಾರಿಗಳ ಶೋಧ ಕಾರ್ಯಾಚರಣೆ 

ಮತ್ತೆ ಬೆಳ್ಳಂಬೆಳಿಗ್ಗೆ ಡ್ರೋಣ ಕ್ಯಾಮೆರಾ ಮೂಲಕ ಬಿಂಕದಕಟ್ಟಿ, ಅಸುಂಡಿ ಹಾಗೂ ಗದಗ ರಸ್ತೆಯಲ್ಲಿ, ಪ್ರಾಣಿ ಸಂಗ್ರಹಾಲಯದ ಸುತ್ತಮುತ್ತ ಕಣ್ಣಾಡಿಸಿದರೂ ಚಿರತೆ ಪತ್ತೆಯಾಗಿಲ್ಲ. ನಿನ್ನೆ ರಾತ್ರಿ ಬಿಂಕದಕಟ್ಟಿ ಹಾಗೂ ಅಸುಂಡಿ, ಟೀಚರ್ಸ್ ಕಾಲೋನಿಯಲ್ಲಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ.

ಡ್ರೋಣ ಕ್ಯಾಮೆರಾ ಕಣ್ಣಿಗೂ ಕಾಣದ ಚಿರತೆ ಟೀಚರ್ಸ್ ಕಾಲೋನಿ ಮೂಲಕ ಕಳಸಾಪೂರ, ನಾಗಾವಿ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತದೆ.

error: Content is protected !!