Home Blog Page 3324

ತಿಮ್ಮಕ್ಕ ಉದ್ಯಾನದ ‘ಜಿಪ್ಲೈನ್ ದರ ‘ಜಂಪ್!
100 ರೂ. ಇದ್ದ ಟಿಕೆಟ್ ಬೆಲೆ 300 ರೂ.ಗೆ ಏರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ;

ತಾಲ್ಲೂಕಿನ ಬಿಂಕದಕಟ್ಟಿ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ 370 ಮೀ. ಉದ್ದದವರೆಗೆ ನಿರ್ಮಿಸಲಾಗಿರುವ ಹೊಸ ಸಾಹಸ ಕ್ರೀಡೆ ಜಿಪ್‌ಲೈನ್ ದರದಲ್ಲಿ ಭಾರೀ ಏರಿಕೆಯಾಗಿದ್ದು, ಜನರು ಜಿಪ್‌ಲೈನ್‌ನತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.

ಕಪ್ಪತಗುಡ್ಡದ ಸೆರಗಿನಂಚಿನಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಜಿಪ್‌ಲೈನ್ ಕ್ರೀಡೆ ನಾಲ್ಕು ತಿಂಗಳ ಹಿಂದಷ್ಟೇ ಪ್ರಾರಂಭವಾಗಿತ್ತು. ಇದು ಜನರನ್ನು ಆಕರ್ಷಿತರನ್ನಾಗಿಸಿತ್ತು. ಇದರಿಂದ ಲಾಕ್‌ಡೌನ್ ವೇಳೆ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಹೆಚ್ಚು ಆದಾಯ ತಂದು ಕೊಡುವ ಮೂಲಕ ತುಸು ಚೇತರಿಕೆ ನೀಡಿತ್ತು. ಅಲ್ಲದೆ, ಅಲ್ಲಿನ ಸಿಬ್ಬಂದಿ ಸಂಬಳ ಸೇರಿ ಉದ್ಯಾನವನದ ಹಲವು ಖರ್ಚುಗಳನ್ನು ನಿಭಾಯಿಸಲು ಸಹಕಾರಿಯಾಗಿತ್ತು. ಕಡಿಮೆ ದರದಲ್ಲಿ ಜನರಿಗೆ ಮಜಾ ನೀಡುತ್ತಿದ್ದ ಜಿಪ್‌ಲೈನ್ ಸಾಹಸ ಕ್ರೀಡೆ ಇದೀಗ ಬಲು ದುಬಾರಿಯಾಗಿದೆ.

ಕೆಲ ದಿನಗಳಿಂದಾಚೆಗೆ ಒಬ್ಬರಿಗೆ 100 ರೂ. ನಿಗದಿ ಮಾಡಿತ್ತು. ಇದರಿಂದ ದಿನವೊಂದಕ್ಕೆ 50ಕ್ಕೂ ಹೆಚ್ಚು ಜನ ಕ್ರೀಡಾಸಕ್ತರು ಜಿಪ್‌ಲೈನ್ ಸಾಹಸ ಕ್ರೀಡೆಯ ಮಜಾ ತೆಗೆದುಕೊಳ್ಳಲು ಬರುತ್ತಿದ್ದರು. ಆದರೆ, ಅ.1ರಿಂದ ಅರಣ್ಯ ಇಲಾಖೆ ಒಬ್ಬರಿಗೆ 300 ರೂ. ದರ ನಿಗದಿ ಪಡಿಸಿದೆ. ಇದರಿಂದ ಜಿಪ್‌ಲೈನ್ ಕಡೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ನಿರ್ವಹಣೆಗಾಗಿ ದರ ಏರಿಕೆ ಅನಿವಾರ್ಯ

ರಾಜ್ಯದಲ್ಲಿಯೇ ಅತೀ ಉದ್ದವಾಗಿರುವ ಸಾಹಸ ಕ್ರೀಡೆಯ ಜಿಪ್‌ಲೈನ್ ತಂತಿ ಗದಗನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಜಿಪ್‌ಲೈನ್ ನೋಡಿಕೊಳ್ಳಲು ನಿತ್ಯ 10 ಜನರು ಕೆಲಸ ಮಾಡುತ್ತಿದ್ದು, ಅವರಿಗೆ ಜಿಪ್‌ಲೈನ್‌ದಿಂದ ಬರುವ ಆದಾಯದಿಂದಲೇ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಅಲ್ಲದೇ, ಅರಣ್ಯ ಇಲಾಖೆಗೆ ಜಿಪ್‌ಲೈನ್ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿರುವುದರಿಂದ ದರ ಪರಿಷ್ಕರಣೆ ಮಾಡಲಾಗಿದೆ. ಸದ್ಯ ಒಬ್ಬರಿಗೆ 100 ರೂ. ಇದ್ದಿದ್ದನ್ನು 300 ರೂ.ಗೆ ಏರಿಸಲಾಗಿದೆ. ದರ ಏರಿಕೆಯಿಂದ ಜನರ ಬರುವಿಕೆ ಕಡಿಮೆ ಆಗಿದ್ದರೂ, ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಬರುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಅಮೀನ್ ತಿಳಿಸಿದರು.

ಹೃದಯಾಘಾತವಾದರೂ ಮಾಡ್ತಾರೆ ಮರಣೋತ್ತರ ಪರೀಕ್ಷೆ! ಸಂತೋಷ್ ಅಸಹಜ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಅನುಮಾನ ಹೆಚ್ಚಿಸಿದ ಪೊಲೀಸರ ನಡೆ

ವಿಜಯಸಾಕ್ಷಿ ಸುದ್ದಿ, ಗದಗ:

ಅವಳಿ ನಗರದಲ್ಲಿ ಸಂಚಲನ ಮೂಡಿಸಿರುವ ಸಂತೋಷ ಕರಿಕಿಕಟ್ಟಿ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಮರಣೋತ್ತರ ಪರೀಕ್ಷೆ ಹೊಸ ಅನುಮಾನ ಮೂಡಿಸಿದ್ದು, ಪ್ರಕರಣ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಮನೆಯ ಕಬ್ಜಾವತ್ತಿ ವಿವಾದಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ನಾವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಎನ್ನುತ್ತಾರೆ ಪೊಲೀಸರು. ಹಾಗಾದರೆ ಹೃದಯಾಘಾತದಿಂದ ಮೃತಪಟ್ಟವನ ಮರಣೋತ್ತರ ಪರೀಕ್ಷೆ ನಡೆಸುವ ಅನಿವಾರ್ಯ ಏನಿತ್ತು ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ  ಹೃದಯಾಘಾತವೋ? ಮೂರ್ಚೆ ರೋಗವೋ? ಲಾಕಪ್ ಡೆತ್ತೋ?; ತಾಯಿ ಮಗನ ಜಗಳದಲ್ಲಿ ಖಾಕಿ ಹೊಡೆತಕ್ಕೆ ಪೊಲೀಸ್ ಠಾಣೆಯಲ್ಲೇ ವ್ಯಕ್ತಿ ಸಾವು?

ಹೊಸ ಸಂಪ್ರದಾಯ?:

ಪೊಲೀಸ್ ಠಾಣೆಗೆ ಭೇಟಿ ನೀಡುವ ವ್ಯಕ್ತಿಗೆ ಒಂದು ವೇಳೆ ಹೃದಯಾಘಾತವಾದರೆ ಅಂಥವರ ಮರಣೋತ್ತರ ಪರೀಕ್ಷೆ ನಡೆಸುವ ಹೊಸ ಸಂಪ್ರದಾಯವನ್ನು ಗದಗ ಪೊಲೀಸರು ಹುಟ್ಟುಹಾಕಿದ್ದಾರೆಯೆ ಎನ್ನುವ ಅನುಮಾನ ಶುರುವಾಗಿದೆ.

ಪೊಲೀಸರು ಹೇಳುವ ಪ್ರಕಾರ ಸಂತೋಷ ಎದೆನೋವಿನಿಂದ ಅಥವಾ ಪಿಟ್ಸ್ ಬಂದಿದ್ದರಿಂದ ಮೃತಪಟ್ಟಿದ್ದಾನೆ. ಆದರೆ, ಹಾಗೆ ಅನಾರೋಗ್ಯ ಅಥವಾ ಸಹಜವಾಗಿ ಮೃತಪಟ್ಟಿದ್ದರೂ ಕುಟುಂಬದವರ ಒಪ್ಪಿಗೆ ಪಡೆಯದೆ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇಕೆ? ಸಂತೋಷನ ಮೃತದೇಹವನ್ನು ಹೂಳದೆ ಸುಟ್ಟು ಹಾಕುವಂತೆ ಕುಟುಂಬಸ್ಥರ ಮೇಲೆ ಬಾಹ್ಯ ಒತ್ತಡ ತಂದಿದ್ದೇಕೆ ಎನ್ನುವ ಪ್ರಶ್ನೆಗಳು, ಆರೋಪಗಳು ಕೇಳಿಬರುತ್ತಿವೆ.

ತಾಯಿ ಸಹಿ ಪಡೆಯಲೂ ಆತುರ

ಅಲ್ಲದೆ, ಪ್ರಕರಣಕ್ಕೆ ತೆರೆ ಎಳೆಯಲು ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದಕ್ಕೆ ಆತುರಾತುರವಾಗಿ ಗ್ರೇಡ್ -2 ತಹಸೀಲ್ದಾರ ಅವರ ಸಮ್ಮುಖದಲ್ಲಿ ಅ. 5ರ ಬೆಳಗ್ಗೆ ಸಾಕ್ಷಿದಾರರ ಹೇಳಿಕೆ ಎಂಬ ಪತ್ರದಲ್ಲಿ ಮೃತನ ತಾಯಿ ಅನಸಮ್ಮಳ ಸಹಿ ಪಡೆದುಕೊಂಡಿರುವ ಗದಗ ಶಹರ ಪೊಲೀಸರ ನಡೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ  ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ಸಂತೋಷನ ಕುಟುಂಬದವರ ಪ್ರಕಾರ ಮನೆಯಿಂದ ಹೋಗುವಾಗ ಆರೋಗ್ಯವಾಗಿಯೇ ಇದ್ದ. ಪೊಲೀಸ್ ಠಾಣೆಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಎದೆನೋವು ಕಾಣಿಸಿಕೊಂಡಿದೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಮತ್ತೊಂದೆಡೆ ಸಂತೋಷನದ್ದೇ ಎನ್ನಲಾದ ಪೋನ್ ಸಂಭಾಷಣೆಯಲ್ಲಿ ಪೊಲೀಸರು ಹೊಡೆದಿರುವ ಏಟಿಗೆ ಎದೆ ನೋಯಿಸುತ್ತಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿರುವ ಆಡಿಯೋ ಕೂಡ ವೈರಲ್ ಆಗಿದೆ.

20 ನಿಮಿಷ ವಿಳಂಬವೇಕೆ?

ಈ ಪ್ರಕರಣದಲ್ಲಿ ಪೊಲೀಸ್ ಮೂಲಗಳನ್ನೇ ಒಪ್ಪಿಕೊಳ್ಳುವುದಾದರೆ, ‘ಸಂತೋಷನಿಗೆ ಹೃದಯಾಘಾತ ಆಗಿದ್ದು ಎಷ್ಟು ಹೊತ್ತಿಗೆ?, ಪೊಲೀಸರ ಮತ್ತು ವೈದ್ಯರ ಹೇಳಿಕೆ ಪ್ರಕಾರ ಸಂತೋಷ ಸಾವನ್ನಪ್ಪಿದ್ದು 6.40ಕ್ಕೆ. ಆದರೆ, ಪೊಲೀಸರು ಆತನ ಕುಟುಂಬದವರಿಗೆ ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದ್ದು 7 ಗಂಟೆಗೆ.

ಇದನ್ನೂ ಓದಿ ಪ್ಲೀಸ್, ಇಲ್ಲಿಂದ ನನ್ನ ಬಿಡಿಸಿಕೊಂಡು ಹೋಗಿ; ಪೊಲೀಸರ ಕ್ರೌರ್ಯದ ಬಗ್ಗೆ ನೋವು ತೋಡಿಕೊಂಡಿರುವ ಸಂತೋಷ್!

ಹೃದಯಾಘಾತದಿಂದಲೇ ಸಂತೋಷ ಸಾವನ್ನಪ್ಪಿದ್ದ ಎಂದ ಮೇಲೆ, ಮೃತನ ತಾಯಿ ಹೇಳುವಂತೆ, ಸಾವಿನ ಸುದ್ದಿ ತಿಳಿಸಲು 20 ನಿಮಿಷ ಕಾಲಾವಕಾಶ ತೆಗೆದುಕೊಂಡಿದ್ದು ಏಕೆ? ಎಂಬಿತ್ಯಾದಿ ಸಂಶಯಾತ್ಮಕ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.

ಗೋಲ್ಡನ್ ಅವರ್’ ಗೊತ್ತಿಲ್ಲವೇ?

ಇನ್ನು ಹೃದಯಾಘಾತವಾದ ಅರ್ಧಗಂಟೆ ‘ಗೋಲ್ಡನ್ ಟೈಂ ಅಂತಾ ಹೇಳುತ್ತಾರೆ. ಮೊನ್ನೆಯಷ್ಟೇ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ ಅವರನ್ನು ಕಳೆದುಕೊಂಡ ಉದಾಹರಣೆ ನಮ್ಮೆದುರಿಗೆ ಇದೆ. ಇವೆಲ್ಲ ಪೊಲೀಸರ ಗಮನಕ್ಕಿದ್ದರೂ ಸಂತೋಷನಿಗೆ ಹೃದಯಾಘಾತ ಸಂಭವಿಸಿದಾಗ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ದೂರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಏಕೆ? ಎಂಬ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.

ಪ್ಲೀಸ್, ಇಲ್ಲಿಂದ ನನ್ನ ಬಿಡಿಸಿಕೊಂಡು ಹೋಗಿ; ಪೊಲೀಸರ ಕ್ರೌರ್ಯದ ಬಗ್ಗೆ ನೋವು ತೋಡಿಕೊಂಡಿರುವ ಸಂತೋಷ್!

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿ ಸಂಚಲನ ಸೃಷ್ಟಿಸಿರುವ ಆದರ್ಶ ನಗರದ ನಿವಾಸಿ ಸಂತೋಷ (ಕರಿಕಿಕಟ್ಟಿ) ಸಾವಿನ ಪ್ರಕರಣಕ್ಕೆಈಗ ಹೊಸ ತಿರುವು ಸಿಕ್ಕಿದೆ. ಪೊಲೀಸರು ಕೊಟ್ಟ ಹೊಡೆತವೇ ಸಂತೋಷ ಸಾವಿಗೆ ಕಾರಣ ಎನ್ನುವುದಕ್ಕೆ ಪುಷ್ಟಿ ನೀಡುವಂಥ ಎರಡು ಆಡಿಯೋ ಕ್ಲಿಪ್ಪಿಂಗ್ (ಫೋನ್ ಸಂಭಾಷಣೆ) ವಿಜಯಸಾಕ್ಷಿ'ಗೆ ಲಭ್ಯವಾಗಿದ್ದು, ಸಾವಿನ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಇದನ್ನೂ ಓದಿ ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ಮೃತ ಸಂತೋಷ ತನ್ನ ಆಪ್ತನ ಜೊತೆ ನಡೆಸಿದ್ದೆನ್ನಲಾಗುತ್ತಿರುವ ಆಡಿಯೋ ಕ್ಲಿಪಿಂಗ್ ಪೊಲೀಸರತ್ತ ಬೊಟ್ಟು ಮಾಡಿ ತೋರಿಸಿದಂತಿದೆ.

ಸಾಯುವುದಕ್ಕೂ ಮುನ್ನ ಆಪ್ತರೊಬ್ಬರ ಜೊತೆ ಮಾತನಾಡಿರುವ ಸಂಭಾಷಣೆಯಲ್ಲಿ ಪೊಲೀಸರು ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಪೊಲೀಸರು ತುಂಬಾ ಹೊಡೆದ್ರು! ಹೊಡೆದಿದ್ದಕ್ಕೆ ಎದೆ ನೋಯಿಸುತ್ತಿದೆ. ಸ್ಟೇಶನ್ ಕಟ್ಟಿ ಮೇಲೆ ಮಲಕೊಂಡಿದ್ದೀನಿ. ದವಾಖಾನೆಗೆ ಹೋಗಬೇಕ್ರಿ. ಯಾರಾದ್ರೂ ಇದ್ರೆ ಕಳುಹಿಸಿರಿ. ಬಹಳ ಸಮಸ್ಯೆ ಆಗ್ತಿದೆ ರೀ. ಮಾತಾಡೋಕೆ ಆಗ್ತಿಲ್ರಿ’ ಎಂದು ಸಂತೋಷ ನರಳಾಟದ ಮಾತುಗಳು ಪೊಲೀಸರು ನಡೆಸಿದ ಕ್ರೌರ್ಯಕ್ಕೆ ಉದಾಹರಣೆಯಾಗಿದೆ.

ಕೋಲು ತಗೊಂಡು ಹೊಡೆದಿದ್ದಾರೆ

ಕರ್ತವ್ಯದ ಮೇಲಿರುವ ಪಿಸಿಗಳು ಕೋಲು ತಗೊಂಡು ಹೊಡೆದಿದ್ದಾರೆ. ಅವ್ರಿಗೆ ಮಾತಾಡೋಕೆ ಫೋನ್ ಕೊಟ್ರೆ ವಾಪಾಸ್ ಕೊಡೋದಿಲ್ಲ ರೀ ಅವ್ರು. ಏನ್ ಮಾಡ್ಬೇಕು ಅಂತಾ ಗೊತ್ತಾಗುತ್ತಿಲ್ಲ. ಅವರು (ಕಬ್ಜಾದಾರರು) ಇನ್ನೂ ದೂರು ಕೊಡೋಕೆ ಬರ್ತಿದ್ದಾರೆ, ಅಷ್ಟರಲ್ಲೇ ಪೊಲೀಸರು ಹೊಡೆದಿದ್ದಾರೆ.

ಕೈ, ಕಾಲಿಗೆ ಹೊಡೆದಿದ್ದಾರೆ. ಅವರು ಹೊಡೆದ ರಭಸಕ್ಕೆ ಕೈ ನೋವಾಗಿದೆ. ದಯವಿಟ್ಟು ಈಗಲೇ ಬಂದು ಬಿಡಿ ಸರ್' ಅಂತಾ ಸಂತೋಷ ತನ್ನ ಆಪ್ತರೆದುರು ಅಸಹಾಯಕತೆ ತೋಡಿಕೊಂಡಿದ್ದಾನೆ. ಆಡಿಯೋ ಲಭ್ಯ: ಹೀಗೆ ಆಪ್ತರ ಜೊತೆ ಅಂದು ಅಮವಾಸ್ಯೆ ದಿನ ಅ.4 ರಂದು ಮಾತಾಡಿರುವ ಎರಡುವಿಜಯಸಾಕ್ಷಿ’ಗೆ ಲಭ್ಯವಾಗಿದೆ. ಆದರೂ ಪೊಲೀಸ್ ದಾಖಲೆಗಳ ಪ್ರಕಾರ ಸಂತೋಷ್ ಹೊಡೆತದಿಂದ ಸತ್ತಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದೇ ದಾಖಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರೂ, ಇದು ಲಾಕಪ್ ಡೆತ್ ಅಲ್ಲ. ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಮೂರ್ಚೆ ಬಂದು ಬಿದ್ದಿದ್ದಾನೆ. ನಮ್ಮವರೇ (ಪೊಲೀಸರು) ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಉತ್ತರ ನೀಡುತ್ತಿದ್ದಾರೆ.

ಆದರೆ, ಸಂತೋಷನದ್ದೇ ಧ್ವನಿ ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ಕೇಳಿದಾಗಲೂ ಎಸ್ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಸಂತೋಷ ಸಾವಿನ ಬಗ್ಗೆ ಅನುಮಾನ ಮೂಡದಿರುವುದು ಅಚ್ಚರಿ ಮೂಡಿಸಿದೆ.
ಎಲ್ಲ ಗೊತ್ತಿದ್ದೂ ಸುಮ್ಮನೆ ಇರುವ ಕೆಲವು ಪೊಲೀಸ್ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಿ ಪೊಲೀಸರನ್ನು ರಕ್ಷಿಸುವ ದೊಡ್ಡ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಸಂಶಯವೂ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ.

ಸದ್ಯ ಸಂತೋಷನದ್ದೇ ಎನ್ನಲಾದ ಆಡಿಯೋ ಸಾಕಷ್ಟು ಸದ್ದು ಮಾಡುತ್ತಿದ್ದು, ಸಂತೋಷನದ್ದು ಲಾಕಪ್ ಡೆತ್ತೋ..? ಮೂರ್ಚೆ ರೋಗವೋ..? ಹೃದಯಾಘಾತವೋ..? ಎಂಬ ಗದಗ-ಬೆಟಗೇರಿ ಅವಳಿ ನಗರದ ಜನರ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ಸ್ಪಷ್ಟನೆ ನೀಡಬೇಕಿದೆ.

ಎದೆ ನೋಯ್ತೈತಿ

ಆಪ್ತರಿಗೆ ಎರಡನೇ ಬಾರಿ ಕರೆ ಮಾಡಿದ ಸಂತೋಷದ ಧ್ವನಿಯಲ್ಲಿ ನೋವು ಸ್ಪಷ್ಟವಾಗಿ ಅರಿವಿಗೆ ಬರುವಂತಿದೆ. ನರಳುತ್ತ ಕರೆ ಮಾಡಿರುವ ಆತ, `… ಹೊಡದ್ರು, ಎದೆ ನೋಯ್ತೈತಿ, ಸ್ಟೇಷನ್ ಕಟ್ಟಿ ಮ್ಯಾಲೆ ಮಲ್ಕೊಂಡೀನಿ. ದವಾಖಾನಿಗೆ ಹೋಗ್ಬೇಕು… ಲೋಕಲ್ ಯಾರಾದ್ರೂ ಇದ್ರೆ ಕಳಿಸು ಮಾರಾಯಾ… ಅಲ್ರೀ… ಮಾತಾಡೋಕೆ ಆಗವಲ್ತು ರೀ…’ ಎಂದು ಅಸಹಾಯಕತೆ ತೋಡಿಕೊಂಡಿದ್ದಾನೆ.

ಚುನಾವಣೆ ವೇಳೆಗೆ ಮೂವರು ಸಿಎಂ ಆಗಬಹುದು

0

ಜನೆವರಿ ವೇಳೆಗೆ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನದಿಂದ ಇಳಿತಾರೆ- ಶಿವರಾಜ್ ತಂಗಡಗಿ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ : ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿಯವರು‌ ಬಹಳ‌ ಜನ ಇದ್ದಾರೆ. ಅದನ್ನ ಡೈವರ್ಟ್ ಮಾಡಲು ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಬೊಬ್ಬೆ ಹಾಕ್ತಿದ್ದಾರೆ. ಬಿಟ್ಕಾಯಿನ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಜನವರಿ ವೇಳೆಗೆ ಅಧಿಕಾರದಿಂದ ಕೆಳಗೆ ಇಳೀತಾರೆ ಎಂದು‌ ಮಾಜಿ ಸಚಿವ ಶಿವರಾಜ್ ತಂಗಡಗಿ ಹೊಸ ಬಾಂಬ್ ಸಿಡಿಸಿದರು.

ನಗರದ ಸ್ಥಳೀಯ ಶಾಸಕರ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಟ್ಕಾಯಿನ್ ಹಗರಣದಲ್ಲಿ ಸಾಕಷ್ಟು ಜನ ಬಿಜೆಪಿಯವರು ಭಾಗಿಯಾಗಿದ್ದಾರೆ. ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಲಿದೆ. ಚುನಾವಣೆ ವೇಳೆಗೆ ರಾಜ್ಯಕ್ಕೆ ಇನ್ನು ಇಬ್ಬರು ಸಿಎಂ ಆಗಬಹುದು. ಬಿಜೆಪಿಯವರು ಅಧಿಕಾರ ಮಾಡುವಷ್ಟು ಶಕ್ತರಾಗಿಲ್ಲ ಎಂದರು. ‌

ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಸಚಿವ ಕೆ.ಎಸ್ ಈಶ್ವರಪ್ಪನವರೇ ಅಪವಿತ್ರರಿದ್ದಾರೆ.ಇಷ್ಟೇ ಅಲ್ಲದೆ
ಬಿಜೆಪಿಯವರು ಎಲ್ಲರೂ ಎಲ್ಲಾ ವಿಚಾರದಲ್ಲೂ ಅಪವಿತ್ರರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಎಸ್ ‌ಸಿ ಮೋರ್ಚಾದವರು ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ. ಕಾರಜೋಳ, ಜಿಗಜಿಣಗಿ ಸ್ವಾರ್ಥಕ್ಕಾಗಿ ಬಿಜೆಪಿಗೆ‌ ಹೋಗಿದ್ದಾರೆ.
ದಲಿತ ಸಮಾಜಕ್ಕೆ ಇವರು ಕೊಟ್ಟಿರುವ ಕೊಡುಗೆ ಏನು..?
ಗಂಜಿ ಗಿರಾಕಿಗಳು ಹೊಟ್ಟೆಪಾಡಿಗಾಗಿಯೇ ದಲಿತ ಹೆಸರಿನಲ್ಲಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಗೂಳಪ್ಪ ಹಲಗೇರಿ ಕಾಂಗ್ರೆಸ್ ಮುಖಂಡರಾದ ಕೃಷ್ಣ ಇಟ್ಟಂಗಿ, ರವಿ ಕುರಗೋಡ, ಕೃಷ್ಣಾ ಗಲಭಿ, ಎಸ್.ಬಿ.ನಾಗರಳ್ಳಿ, ಗಾಳೆಪ್ಪ ಪೂಜಾರ, ಮಲ್ಲು ಪೂಜಾರ, ಸಿದ್ದನಗೌಡರು, ತಮೇಶ್ ನಾಯ್ಕ ನಿಂಗಜ್ಜ ಶಹಪುರ ಮತ್ತಿತರರು ಇದ್ದರು.

ಆಸ್ಪತ್ರೆಗೆ ಬಂದ ಮಗುವಿಗೆ ಚಿಕಿತ್ಸೆ ನೀಡದೇ ಅಮಾನೀಯವಾಗಿ ನಡೆಸಿಕೊಂಡ ಹೆರಿಗೆ ಆಸ್ಪತ್ರೆ ಸಿಬ್ಬಂದಿಗಳು!

0

ವಿಜಯಸಾಕ್ಷಿ ಸುದ್ದಿ, ಗದಗ

‘ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಗ್ಲುಕೋಸ್ ಬಾಟಲು, ಮಗುವಿನ ಪ್ರಾಣ ಉಳಿಸಲು ಹೆತ್ತವರು ವಾರ್ಡ್ನಿಂದ ವಾರ್ಡ್ ಗೆ ಅಲಿಯುತ್ತಿದ್ದ ಮನಕಲಕುವ ದೃಶ್ಯ ನಗರದ ದುಂಡಪ್ಪ ಮಾನ್ವಿ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಕಂಡು ಬಂದಿತು’.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಹಾಂತೇಶ ಮತ್ತು ಸಂಗೀತಾ ದಂಪತಿಗಳ ಎರಡೂವರೆ ವರ್ಷದ ದೃವಂತ ಎಂಬ ಮಗುವಿಗೆ ಮೂರ್ಛೆ (ಪಿಟ್ಸ್) ರೋಗ ಬಂದಿತ್ತು. ಹೀಗಾಗಿ ಮಗನ ಚಿಕಿತ್ಸೆಗಾಗಿ ಕೊಪ್ಪಳದಲ್ಲಿರುವ ಜಿಲ್ಲಾ ಆಸ್ಪತ್ರೆಗಿಂತ ಗದಗನ ಜಿಲ್ಲಾಸ್ಪತ್ರೆಯಲ್ಲಿ ಸೌಕರ್ಯ ಇದೆ ಎಂದು ಕೊಪ್ಪಳಕ್ಕೆ ಹೋಗದೇ ನೇರವಾಗಿ ಗದಗ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರೂ ಯಾವೊಬ್ಬ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಆ್ಯಂಬುಲೆನ್ಸ್ನಿಂದ ಮಗುವನ್ನು ಆಸ್ಪತ್ರೆ ಒಳಗೆ ಕರೆದೊಯ್ಯಲು ವ್ಹೀಲ್ ಚೇರ್ ಸ್ಟ್ರಚ್ಚರ್ ಸಹಿತ ಕೊಡದೇ ಅಮಾನವೀಯವಾಗಿ ನಡೆಸಿಕೊಂಡರು.

ಅಲ್ಲದೇ, ಎರಡೂವರೆ ವರ್ಷದ ಮಕ್ಕಳನ್ನು ಇಲ್ಲಿ ನೋಡುವುದಿಲ್ಲ. ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಹೇಳಿದ್ದಾರೆ. ಸದ್ಯ ಮಗು ನಗರದ ಜಿಮ್ಸ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗ(ಪಿಐಸಿಯು) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಯಲಬುರ್ಗಾದಿಂದ ಆಂಬ್ಯುಲೆನ್ಸ್ ಮೂಲಕ ಮೊದಲು ನಗರದ ಜರ್ಮನಿ ಆಸ್ಪತ್ರೆಗೆ ಬಂದಿದ್ದೇವೆ. ಅವರು ಹೆರಿಗೆ ಆಸ್ಪತ್ರೆಗ ಹೋಗಿ ಅಂತಾ ಹೇಳಿದರು. ಅಲ್ಲಿಂದ ಹೆರಿಗೆ ಆಸ್ಪತ್ರೆಗೆ ಹೋದರೆ ಅಲ್ಲಿ ಯಾರೂ ಮಗು ನೋಡಲಿಲ್ಲ. ಒಂದು ಕೈಯಲ್ಲಿ ಸಲಾಯನ್ ಮತ್ತೊಂದು ಕೈಯಲ್ಲಿ ಮಗುವನ್ನು ಹೊತ್ಕೊಂಡು ಅಲೆದಾಡಿದರೂ ಮಗುವಿಗೆ ಚಿಕಿತ್ಸೆ ನೀಡುವುದಿರಲಿ, ಮುಟ್ಟಿ ಸಹಿತ ಏನಾಗಿದೆ ಎಂದು ಯಾರೊಬ್ಬರೂ ಕೇಳಲಿಲ್ಲ. ಅವರು ಚಿಕಿತ್ಸೆ ನೀಡದೇ ಜಿಮ್ಸ್ ಆಸ್ಪತ್ರೆಗೆ ಹೋಗಿ ಅಂತಾ ಸಾರಾಸಗಟವಾಗಿ ಹೇಳಿ ಕಳುಹಿಸಿದರು. ಅಲ್ಲದೇ, ಸರಿಯಾಗಿಯೂ ಸ್ಪಂದಿಸಲಿಲ್ಲ ಎಂದು ಮಗುವಿನ ತಾಯಿ ಸಂಗೀತಾ ಕಣ್ಣೀರು ಹಾಕಿದರು.

ಮದುವೆಯಾಗಿ ಬಹಳ ವರ್ಷಗಳ ಬಳಿಕ ಮಕ್ಕಳಾಗಿವೆ. ಅದರಲ್ಲಿ ಹಿರಿಯ ಮಗನಿಗೆ ಪಿಟ್ಸ್ ಬಂದಿದ್ದು, ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಆದರೆ,
ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದಿರುವುದು ತುಂಬಾ ಬೇಸರವಾಯಿತು. ಮಗುವನ್ನು ಇಲ್ಲಿಗೆ ಕರೆದುಕೊಂಡು ಬಂದ ಮೇಲೆ ಜಿಮ್ಸ್ ಆಸ್ಪತ್ರೆ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದರು. ಸದ್ಯ ಮಗು ಆರಾಮವಾಗಿದೆ ಎಂದು ಮಗುವಿನ ತಂದೆ ಮಹಾಂತೇಶ ಹೇಳಿದರು.

ದುಂಡಪ್ಪ ಮಾನ್ವಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಇದೊಂದೇ ಘಟನೆ ಅಲ್ಲ, ಇಂತಹ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಅಲ್ಲದೇ, ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಏಳು ತಿಂಗಳಾದರೂ ಸಭೆ ನಡೆಸದ ಶಾಸಕ ರಾಮಣ್ಣ ಲಮಾಣಿ; ಅಧಿಕಾರಿಗಳಿಗೆ ಸಭೆಗಳಂದ್ರೆ ಆಲಸ್ಯ!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ;

ಶಿರಹಟ್ಟಿ ಮೀಸಲು ಮತಕ್ಷೇತ್ರಕ್ಕೆ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಇವುಗಳ ಪ್ರಗತಿ ನಡೆಸುವುದಕ್ಕಾಗಿ ತಾಲೂಕು ಪಂಚಾಯಿತಿಯಲ್ಲಿ ಆಗಾಗ್ಗೆ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇಪದೇ ಗೈರಾಗುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ತಾಲೂಕಿನ ಅಭಿವೃದ್ಧಿಗೆ ಮಾರಕವಾಗುತ್ತಿದೆ ಅಲ್ಲದೇ, ಸಭೆಗಳು ನಾಮಕೆವಾಸ್ತೆ ನಡೆಯುತ್ತಿವೆ.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ವಾಗೀಶ್ ಶಿವಾಚಾರ್ಯ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ ಸಣ್ಣ ನೀರಾವರಿ, ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಬಕಾರಿ, ಕೆಎಸ್‌ಆರ್‌ಟಿಸಿ, ಆಹಾರ ಶಿರಸ್ತೆದಾರ, ಪ್ರಾದೇಶಿಕ ಅರಣ್ಯ, ಭೂಮಾಪನ, ಉಪನೋಂದಣಾಧಿಕಾರಿ, ಕಾರ್ಮಿಕ, ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಅಲ್ಪಸಂಖ್ಯಾತ, ಮೀನುಗಾರಿಕೆ ಇಲಾಖೆ ಹೀಗೆ 16 ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ಕೇವಲ 15 ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಿದ್ದರು. ಅಲ್ಲದೇ, ಮಂಗಳವಾರ ಹಾಲಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಸಹ ಸಭೆಯಿಂದ ಬೇಗನೆ ನಿರ್ಗಮಿಸಿದರು.

ಅಧಿಕಾರಿಗಳ ಸಭೆ ನಡೆಸದ ಶಾಸಕರು!

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜಿಡ್ಡು ಹಿಡಿಯುತ್ತಿರುವಂತಹ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಬೇಕಾಗಿರುವ ಶಾಸಕ ರಾಮಣ್ಣ ಲಮಾಣಿ ಏ.8 ರಂದು ತ್ರೈಮಾಸಿಕ ಸಭೆ ಏರ್ಪಡಿಸಿದ್ದನ್ನು ಬಿಟ್ಟರೆ ಬಳಿಕ ಯಾವುದೇ ಸಭೆ ನಡೆಸಿಲ್ಲ. ಏಳು ತಿಂಗಳಾದರೂ ಯಾವುದೇ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸದಿರುವುದು ಖೇದಕರ. ಅಲ್ಲದೇ, ಶಾಸಕರ ಈ ನಡೆ ಅಧಿಕಾರಿಗಳಿಗೆ ವರದಾನವಾಗಿದೆ.

ಇಒ ಅವರ ನಿರ್ದೇಶನಕ್ಕಿಲ್ಲ ಕಿಮ್ಮತ್ತು

ಸಭೆಗಳಿಗೆ ಅಧಿಕಾರಿಗಳು ಪದೇಪದೇ ಗೈರು ಉಳಿಯುತ್ತಿರುವುದಕ್ಕೆ ತಾಪಂ ಇಒ ಡಾ.ಎನ್.ಎಚ್.ಓಲೇಕಾರ್ ಅವರು ಸಾಕಷ್ಟು ಬಾರಿ ನಿರ್ದೇಶನ ನೀಡಿದರೂ ಇಒ ಅವರಿಗೆ ಕವಡಿ ಕಾಸಿನಷ್ಟು ಕಿಮ್ಮತ್ತಿಲ್ಲದಂತಾಗಿದೆ. ಇಒ ಅವರು ಈ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.

ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಮನಹರಿಸುವರೇ?

ಶಿರಹಟ್ಟಿ ತಾಲೂಕು ಕೇಂದ್ರದ ಜೊತೆಗೆ ವಿಧಾನಸಭಾ ಮತಕ್ಷೇತ್ರವಾಗಿದ್ದು, ಸರ್ಕಾರದ ಅನುದಾನ ಸದ್ಭ್ಬಳಕೆ ಆಗುತ್ತಿದೆಯೋ.. ಇಲ್ಲವೋ ಎಂಬುದನ್ನು ತಿಳಿಯಲು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಗಮನಹರಿಸಬೇಕಿದೆ.

ಅಧಿಕಾರಿಗಳು ಸಭೆಗಳಿಗೆ ಪದೇಪದೇ ಗೈರು ಉಳಿಯುತ್ತಿರುವುದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಪಂ ಸಿಇಒ ಅವರ ಗಮನಕ್ಕೆ ತರುವ ಮೂಲಕ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗುವುದು. ನವೆಂಬರ್ 15ರ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು.

ರಾಮಣ್ಣ ಲಮಾಣಿ, ಶಾಸಕರು

ಸಭೆಗೆ ಗೈರು ಉಳಿದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಿಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು. ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ಸಭೆ ನಡೆಸಲಾಗುವುದು.

ಡಾ.ಎನ್.ಎಚ್.ಓಲೆಕಾರ್, ತಾಪಂ ಇಒ

ನೂರಾರು ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ; ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಮಂಗಳವಾರ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ‌ಕೊಡುವಂತೆ ಆಗ್ರಹಿಸಿ ರೋಣ-ಬೆಳಗಾವಿ ಬಸ್ ತಡೆದು ಶಿರೋಳದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಹೊಳೆಆಲೂರು, ಮೆಣಸಗಿ, ಕಪ್ಪಲಿ, ಕಲ್ಲಾಪುರ, ಶಿರೋಳ, ಗೊಳಗಂದಿ ಗ್ರಾಮಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್ಸಿನ ಸೌಲಭ್ಯವಿಲ್ಲದೇ ದಿನನಿತ್ಯ ಪರದಾಡುತ್ತಿದ್ದಾರೆ.

ರೋಣದಿಂದ ಬೆಳಗಾವಿ ಹೋಗುವ ಒಂದೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬೆಳಿಗ್ಗೆ ಬರುವ ಇದೊಂದೇ ಬಸ್ಸಿನಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪ್ರಯಾಣಿಸಿ ಕಾಲೇಜಿಗೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಇದೆ. ಒಂದು ವೇಳೆ ಪ್ರಯಾಣಿಕರಿಂದ ಬಸ್ ತುಂಬಿದರೆ, ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹಲವು ಬಾರಿ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಬಸ್ ಬಿಡುವಂತೆ ಪ್ರತಿಭಟಿಸಲಾಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅವರ ಗಮನಕ್ಕೂ ಬಂದಿತ್ತು. ಆದರೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಸಚಿವರು ಹೇಳಿದರೆಂದು ಒಂದು ತಿಂಗಳವರೆಗೆ ಬಸ್ ಬಿಟ್ಟಂತೆ ಮಾಡುವ ನರಗುಂದ ಡಿಪೋ ವ್ಯವಸ್ಥಾಪಕರು ಪುನಃ ಈ ಮಾರ್ಗದ ಬಸ್ ಸಂಚಾರ ಬಂದ್ ಮಾಡುತ್ತಿದ್ದಾರೆ. ಬಸ್ ಯಾಕೆ ಬಂದ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳು ಕೇಳಿದರೆ ‘ನಮಗೆ ಬಸ್ ಬಿಡುವುದು ಆಗುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ’ ಎಂದು ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೇ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆ. 7.45 ಕ್ಕೆ ಶಿರೋಳ ಮಾರ್ಗವಾಗಿ ಕೊಣ್ಣೂರ ಹಾಗೂ ಮ. 2.45 ಕ್ಕೆ ಕೊಣ್ಣೂರದಿಂದ ಶಿರೋಳಕ್ಕೆ ಬಸ್ ಸೌಲಭ್ಯದ ಅವಶ್ಯಕತೆ ಇದ್ದು, ಕೂಡಲೇ ಈ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿದರು.

ಅಂಗನವಾಡಿ ಪುನರಾರಂಭ: ಮಕ್ಕಳಿಗೆ ಹೂವು ನೀಡಿ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ರಾಜ್ಯಾದ್ಯಂತ ಸೋಮವಾರ ಅಂಗನವಾಡಿ ಕೇಂದ್ರಗಳು ಆರಂಭವಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ದೀಪ ಬೆಳಗಿಸುವ ಮೂಲಕ ಪುನರ್ ಆರಂಭಿಸಿದರು.

ಬಳಿಕ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ಸಮಸ್ಯೆ ಕಂಡುಬಂದರೆ ಅಂತಹ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕರೆ ತರದಂತೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪೋಷಕರಿಗೆ ಸೂಚಿಸಬೇಕು.

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಶನಿವಾರ ಗ್ರಾಪಂ ಸಿಬ್ಬಂದಿಗಳಿಂದ ಸ್ಯಾನಿಟೈಸ್ ಸಿಂಪಡಿಸಲಾಗುವುದು ಎಂದರು.

ಗ್ರಾಮದಲ್ಲಿ ಒಟ್ಟು ಆರು ಅಂಗನವಾಡಿ ಕೇಂದ್ರಗಳಿದ್ದು, ಮಧುವನಗಿತ್ತಿಯಂತೆ ಶೃಂಗಾರಗೊಂಡಿದ್ದವು. ಮಕ್ಕಳಿಗೆ ಹೂವು ಕೊಡುವ ಮೂಲಕ ಬರಮಾಡಿಕೊಂಡರು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪುಗೌಡ ಹಿರೇಗೌಡ್ರ, ಶರಣಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ,

ಬಾಲವಿಕಾಸ ಸಮಿತಿ ಸದಸ್ಯರಾದ ವೀಣಾ ರಾಯರಡ್ಡಿ, ನಿಂಗವ್ವ ಮರಿಯಣ್ಣವರ, ಶ್ವೇತಾ ವಾಸನ, ಸುಧಾ ಗಾಣಿಗೇರ, ಗ್ರಾಮಸ್ಥರಾದ ಅಡಿವೆಪ್ಪ ಮರಿಯಣ್ಣವರ, ಬಸನಗೌಡ ಮುದಿಗೌಡ್ರ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಕಾಡದೇವರಮಠ, ಸವಿತಾ ರಾಯರಡ್ಡಿ, ಭಾರತಿ ಪಾಟೀಲ್, ಮಂಜುಳಾ ಮೇಟಿ, ನೀಲಗಂಗಾ ಮಾದರ ಇದ್ದರು.

‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ವಿಜಯಸಾಕ್ಷಿ ಸುದ್ದಿ, ಗದಗ:

‘ಅವತ್ತು(ನ.4) ಮಧ್ಯಾಹ್ನ ಎರಡು ಗಂಟೆಗೆ ಪೊಲೀಸರು ಮಗ(ಸಂತೋಷ)ನಿಗೆ ಪೋನ್ ಹಚ್ಚಿದ್ರು. ಪೊಲೀಸ್ರು ಪೋನ್ ಹಚ್ಚ್ಯಾರ ಸ್ಟೇಷನ್ಗೆ ಹೋಗಿ ಬರ್ತೀನಿ ಅಂತಾ ಹೇಳಿ ಎದ್ದು ಹೋದ. ಆದ್ರೆ, ಒಮ್ಮೆಲೆ ಸಂಜೆ ಪೊಲೀಸ್ರು ಫೋನ್ ಹಚ್ಚಿ ಜಿಲ್ಲಾಸ್ಪತ್ರೆಗೆ ಬರ್ರೀ ಅಂತಾ ಹೇಳಿದ್ರು. ಹೋಗಿ ನೋಡಿದ್ರ ಮಗ ಹೆಣವಾಗಿ ಬಿದ್ದಿದ್ದೋ ಎಪ್ಪಾ!’ ಎಂದು ಮೃತ ಸಂತೋಷನ ತಾಯಿ ಜನರ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರಂತೆ.

ಮಗನ ಕಳೆದುಕೊಂಡ ರೋಧಿಸುತ್ತಿರುವ ತಾಯಿ ಅನಸಮ್ಮ

ಆದರ್ಶ ನಗರದ ಮೃತ ಸಂತೋಷನ ಸಾವು ಗದಗ-ಬೆಟಗೇರಿ ಅವಳಿ ನಗರದ ಜನರ ಸಂಶಯಕ್ಕೆ ಕಾರಣವಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯವರ ಪ್ರಕಾರ ಸಂತೋಷನಿಗೆ ಯಾವುದೇ ಖಾಯಿಲೆ ಇರಲಿಲ್ಲ. ಅಲ್ಲದೇ, ಅವನಿಗೆ ಪಿಟ್ಸ್ ರೋಗವೇ ಇರಲಿಲ್ಲವಂತೆ. ಆದರೆ, ಕೆಲ ಪೊಲೀಸ್ ಮೂಲಗಳು ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಅಂತಾ ಹೇಳುತ್ತವೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಂತಿದ್ದು, ಆರೋಗ್ಯವಾಗಿಯೇ ಇದ್ದ ಸಂತೋಷ ಪೊಲೀಸ್ ಠಾಣೆಗೆ ಹೋದ ಮೇಲೆ ಏನಾಗಿ ಮೃತಪಟ್ಟನೆಂಬ ಕುರಿತು ಕುಟುಂಬದವರಿಗೆ ಈಗಲೂ ಏನು ಗೊತ್ತಿಲ್ಲವಂತೆ.

ಮೃತಪಟ್ಟ ಸಂತೋಷ

ಎರಡು ದಿನ ಪೊಲೀಸರ ವಶದಲ್ಲಿದ್ದ ಪೋನ್!


ನ.4ರಂದು ಸಂತೋಷ ಗದಗ ಶಹರ ಪೊಲೀಸ್ ಠಾಣೆಗೆ ಬಂದ ದಿನದಿಂದ ಮೊನ್ನೆಯವರೆಗೂ(ನ.6) ರವರೆಗೂ ಆತನ ಮೊಬೈಲ್ ಪೊಲೀಸರ ವಶದಲ್ಲಿತ್ತಂತೆ. ಸಾವಿನ ಬಳಿಕ ಮನೆಯವರು ಸಂತೋಷನ ಮೊಬೈಲ್ ಕೊಡಿ ಎಂದು ಕೇಳಿದಾಗ. ಪೊಲೀಸರು ಮೊಬೈಲ್ ಕಳೆದಿದೆ ಎಂದು ಸುಳ್ಳು ಹೇಳಿದ್ದರಂತೆ. ಘಟನೆ ನಡೆದಾದ ಎರಡು ದಿನಗಳ ಬಳಿಕ ಅಂದರೆ ಮೊನ್ನೆ (ನ.6) ರಂದು ಪೊಲೀಸರು ಮನೆಯವರಿಗೆ ಸಂತೋಷನ ಮೊಬೈಲ್ ಕೊಟ್ಟಿದ್ದಾರಂತೆ. ಕೊಡುವಾಗ ಮೆಮೊರಿ ಕಾರ್ಡ್ ಹಾಳು (ಡ್ಯಾಮೇಜ್) ಮಾಡಿ ಸಾಕ್ಷ್ಯ ನಾಶ ಪಡಿಸಿದ್ದಾರಂತೆ. ಆದರೆ, ಪೊಲೀಸರು ಸಂತೋಷ‌ ಮೊಬೈಲ್ ನಲ್ಲಿದ್ದ ಇವೆರಡನ್ನೂ ಹಾಳು ಮಾಡಿದ್ದು ಯಾಕೆ?

ಮರಣೋತ್ತರ ಪರೀಕ್ಷೆ ಮಾಡಿದ್ದು ಯಾಕೆ?


ಪೊಲೀಸ್ ಮೂಲಗಳೇ ಹೇಳುವ ಹಾಗೆ ಸಂತೋಷ ಯಾವುದೇ ದುರ್ಮರಣಕ್ಕೆ ಇಡಾಗಿಲ್ಲ. ಅಲ್ಲದೇ, ಸಂಶಯಾಸ್ಪದವಾಗಿಯೂ ಸತ್ತಿಲ್ಲ. ಹಾಗಿದ್ದಾಗ್ಯೂ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರಂತೆ. ಪೋಸ್ಟ್ ಮಾರ್ಟ್ಂ ಮಾಡುವ ವೇಳೆ ಮೃತ ಸಂತೋಷನ ಮನೆಯವರ ಅನುಮತಿಯನ್ನು ಕೇಳಿಲ್ಲವಂತೆ. ಹಾಗಿದ್ದಾಗ ಪೊಲೀಸರು ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದ್ಯಾಕೆ? ಮರಣೋತ್ತರ ಪರೀಕ್ಷೆ ಮಾಡಲೇ ಬೇಕೆಂದಿದ್ದರೆ, ಮನೆಯವರ ಅನುಮತಿ ಪಡೆಯಲಿಲ್ಲ ಯಾಕೆ?

ಸಂತೋಷನ ಮೃತದೇಹ ಹೂಳದೇ ಸುಟ್ಟಿದ್ದು ಯಾಕೆ?

ಪೊಲೀಸರ ಹೊಡೆತದಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿರುವ ಸಂತೋಷ ಲಿಂಗಾಯತ ಸಮುದಾಯಕ್ಕೆ ಸೇರಿದವನಾಗಿದ್ದು, ಬಹುತೇಕ ಆ ಸಮುದಾಯದಲ್ಲಿ ಮರಣ ಹೊಂದಿದವರನ್ನು ಮಣ್ಣಲ್ಲಿ ಹೂಳುತ್ತಾರೆ. ಅಲ್ಲದೇ, ಈ ಸಮುದಾಯದವರು ಅಪಘಾತ ಸೇರಿ ಇನ್ನಿತರ ಘಟನೆಗಳಲ್ಲಿ ದುರ್ಮರಣಕ್ಕೀಡಾದರನ್ನು ಮಾತ್ರ ಹೂಳದೇ ಸುಟ್ಟು ಹಾಕುತ್ತಾರೆ. ಆದರೆ, ಸಂತೋಷನ ಮೃತ ದೇಹವನ್ನು ಹೂಳದೇ ಸುಟ್ಟು ಹಾಕಿದ್ದು ಯಾಕೆ? ಎಂಬ ಅವಳಿ ನಗರದ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.

ಮಾಧ್ಯಮದ ಎದುರು ಮಾತಾಡದ ತಾಯಿ

ಅನೌಪಚಾರಿಕವಾಗಿ ಜನರ ಎದುರು ಪೊಲೀಸರ ಕರ್ಮಕಾಂಡದ ಬಗ್ಗೆ, ಮಗನ ಕೊಂದಿರುವ ಕುರಿತು ಬಾಯಿ ಬಿಡುವ ತಾಯಿ ಅನಸಮ್ಮ, ಮಾಧ್ಯಮದ ಮುಂದೆ ಮಾತ್ರ ಬಾಯಿ ಬಿಡುತ್ತಿಲ್ಲ. ಕಾರಣ ಪೊಲೀಸರ ಭಯ. ಮಾಧ್ಯಮದ ಮುಂದೆ ಮಾತೆತ್ತಿದರೆ ಎಪ್ಪಾ ನನಗ್ಯಾರು ದಿಕ್ಕಿಲ್ಲ…. ನಾ ಏನೂ ಮಾತಾಡಲ್ಲ ಅಂತಾ ಹೇಳ್ತಾಳೆ. ಆದರೆ ಮಾಧ್ಯಮದ ಮುಂದೆ ಮಾತ್ರ ಕೈ ಮುಗಿದು ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾಳೆ.

ಅಷ್ಟಕ್ಕೂ ಆಗಿದ್ದಾದರೂ ಏನು?

ಸಂತೋಷ ಕಬ್ಜಾದಾರರ ಜೊತೆಗೆ ಜಗಳ ಮಾಡಿ, ಅವಾಚ್ಯವಾಗಿ ಬೈದಾಡಿದ್ದನಂತೆ. ಅಲ್ಲದೇ, ನೀರು, ವಿದ್ಯುತ್ ಕಟ್ ಮಾಡಿದ್ದನಂತೆ. ಆದರೆ, ಇದೇನೂ ಅಷ್ಟೊಂದು ದೊಡ್ಡ ವಿಷಯ ಅಲ್ಲ ಅಂತಾರೆ ಪ್ರಜ್ಞಾವಂತರು. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಬಂದ ನೂರಾರು ಜನರ ನಡುವೆ ರಾಜೀ ಸಂಧಾನ ಮಾಡಿ ಕಳುಹಿಸುವ ಪೊಲೀಸರು ಯಾಕೀಷ್ಟು ಹೃದಯಹೀನರಾದರು ಎಂಬುದು ಸಾರ್ವಜನಿಕರ ಪ್ರಶ್ನೆ.

2022ರ ಜನೇವರಿ 19ರಂದು ಅಜ್ಜನ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಕೊಪ್ಪಳ ಎಂದಾಕ್ಷಣ ಗವಿಮಠ ಕಣ್ಮುಂದೆ ಬರುತ್ತದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂತಲೂ ಫೇಮಸ್. 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ, ಈ ವರ್ಷ ಮತ್ತೇ ಹಿಂದಿನ ವರ್ಷಗಳ ವೈಭವವನ್ನು ಕಟ್ಟಿ ಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

ಈ ಸಲ ಕೊರೋನಾ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳ ಹಿಂದಿನ ದಿನಗಳಿಗಿಂತ ಕಡಿಮೆಯಾಗಿದ್ದು, ಅಜ್ಜನ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ತಯಾರಿ ನಡೆದಿದೆ‌.

2022ರ ಜನೇವರಿ 19ರಂದು ಅಜ್ಜನ ಜಾತ್ರೆಯ ಮಹಾರಥೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹಿಂದಿನಂತೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಹದಿನೈದು ದಿನಗಳ ಮಹಾ ಅನ್ನದಾಸೋಹ, ಸಂಜೆ ಮಹಾರಥೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕುರಿತು ವಿಶೇಷ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

error: Content is protected !!