ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ವೈದ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಸೇರಿ ವೈದ್ಯರನ್ನು ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದೆ. ವೈದ್ಯರು ತಮ್ಮ ಬದುಕಿನ ಜಂಜಾಟಗಳು, ಒತ್ತಡ, ಸ್ವಾರ್ಥ, ಕೌಟುಂಬಿಕ ಬದುಕಿನ ಕಷ್ಟ-ಸುಖಗಳನ್ನು ಬದಿಗೊತ್ತಿ ಜೀವ ಉಳಿಸುವ ಕಾರ್ಯ ಮಾಡುತ್ತಾರೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರ ತಾಳ್ಮೆ, ಸಹನೆ, ಕಾರ್ಯಕ್ಷಮತೆ ಪ್ರಶಂಸನೀಯ. ಸಮಾಜ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದರು.
ವೈದ್ಯರಾದ ಡಾ. ಉಮೇಶ ಕೆಳಮನೆ, ಡಾ. ಪ್ರವೀಣ ಸಜ್ಜನರ, ಡಾ. ಬಿಸ್ಮಿಲ್ಲಾ ಗೌರವ ಸ್ವೀಕರಿಸಿದರು. ತಿಪ್ಪಣ್ಣ ಸಂಶಿ, ಕಲ್ಲಪ್ಪ ಗಂಗಣ್ಣವರ, ಹನಮಂತ ಹರಿಜನ, ಜಗದೀಶ ಹುಲಗೆಮ್ಮನವರ, ಭರಮಗೌಡ ರೊಟ್ಟಿಗವಾಡ, ದಾದಾಪೀರ ಮುಚ್ಚಾಲೆ, ಗಿರೀಶ ಕಲ್ಮಠ, ಕಾರ್ತಿಕ ದೊಡ್ಡಮನಿ, ಮಾಲತೇಶ ಗುಡಸಲಮನಿ, ಫಕ್ಕೀರೇಶ ಭಜಕ್ಕನವರ, ನೀಲಪ್ಪ ಬಸಾಪುರ, ಗುಡ್ಡಪ್ಪ ಮತ್ತೂರ ಇದ್ದರು.