ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರ ಗದಗ ಗ್ರಾಮೀಣ ಮಂಡಲದ ಹರ್ತಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ವಿಬಿಜೀ ರಾಮ್ ಜೀ ಯೋಜನೆಯ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಳ್ಳೂರಮಠ, ಸುಭಾಸ ಸುಂಕದ, ಮುಖಂಡರಾದ ಡಿ.ಬಿ. ಕರೀಗೌಡ್ರ, ಎಸ್.ಎಂ. ಬಳ್ಳೊಳ್ಳಿ, ಎಸ್.ಎಸ್. ಬಳ್ಳೊಳ್ಳಿ, ಬಸವರಾಜ ಚುರ್ಚಿಹಾಳ, ಬಸವಂತಪ್ಪ ಆರಟ್ಟಿ, ವಿ.ಸಿ. ಹುಲ್ಲೂರ, ವೀರಪ್ಪ ಹಡಪದ, ಬಿ.ಡಿ. ಖಾನಾಪೂರ, ಅಂದಾನಗೌಡ ಅಂದಾನಿಗೌಡ್ರ, ಡಿ.ಐ. ಅಣ್ಣಿಗೇರಿ, ಚಂದ್ರಗೌಡ ಮಲ್ಲನಗೌಡ್ರ, ಮಲ್ಲಪ್ಪ ಖಾನಾಪೂರ, ಪ್ರಭು ಶಲವಡಿ, ಮೋಹನ ಕೋರಿ, ರಾಜು ಕುಲಕರ್ಣಿ, ಹನುಮಂತ ನಿಂಬನಾಯ್ಕರ, ವೆಂಕಟೇಶ ಸೂರಣಗಿ, ರಾಜು ಗುಡಸಲಮನಿ, ಮಂಜುನಾಥಗೌಡ ಮರೀಯಪ್ಪಗೌಡ್ರ, ಪಾಂಡುರೆಡ್ಡಿ ಹುಲಿ ಮುಂತಾದವರಿದ್ದರು.



