ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಜನತಾ ಬಜಾರದ ಪೂಜ್ಯ ಶ್ರೀ ಕಲ್ಲಯ್ಯಜ್ಜ ಯುವಕ ಮಂಡಳದ ವತಿಯಿಂದ ಪರಮಪೂಜ್ಯ ಗಾನಯೋಗಿ ಶಿವಯೋಗಿ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳರವರ 81ನೇ ಹಾಗೂ ಪಂಡಿತ ಶ್ರೀ ಪುಟ್ಟರಾಜ ಗವಾಯಿಗಳರವರ 15ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಸೋಮವಾರ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಗರದ ಜನತಾ ಬಜಾರದಲ್ಲಿ ಜರುಗಿತು.
ಕಾರ್ಯಕ್ರಮವನ್ನುದ್ದೇಶಿಸಿ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮ ಶಿಕ್ಷಣ ದಾಸೋಹ, ಸಂಗೀತ ದಾಸೋಹ, ಅನ್ನದಾಸೋಹ ನಡೆಸುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ ಎಂದರು.
ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಸಿಬ್ಬಂದಿಗಳಾದ ಅನಂದಸಿಂಗ ದೊಡ್ಡಮನಿ, ಪ್ರವೀಣ ಕಲ್ಲೂರ, ಬಸವರಾಜ ಗುಡ್ಲಾನವರ ಹಾಗೂ ಕಪ್ಪತ್ತನವರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿ.ಜಿ. ಮೇರವಾಡೆ, ಶಹರ ಪೊಲೀಸ್ ಠಾಣೆ ಸಿಪಿಐ ಡಿ.ಬಿ. ಪಾಟೀಲ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಎಸ್.ಎನ್. ಬಳ್ಳಾರಿ, ಮಾರುತಿ ಸೋಳಂಕಿ, ಮಹಮ್ಮದಅಲಿ ಅತ್ತಾರ, ಚಂದ್ರು ಮೇಲಿನಮನಿ, ಉಮರ ಫಾರೂಕ ಹುಬ್ಬಳ್ಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾದ ರಾಜು ಡಿ.ರೋಣ, ಉಪಾಧ್ಯಕ್ಷರಾದ ರಾಮಣ್ಣ ಎನ್.ಗುರುಜಾಲಕರ, ಕಾರ್ಯದರ್ಶಿ ರಾಘವೇಂದ್ರ ವಿ.ಖೋಡೆ, ಸಹ-ಕಾರ್ಯದರ್ಶಿ ಚನ್ನಪ್ಪ ಗ.ಸಂಗಮ, ಖಜಾಂಚಿ ಗಣೇಶ ಎ.ಪಾಟೀಲ, ಸದಸ್ಯರಾದ ಈರಣ್ಣ ತಿಪ್ಪಶೆಟ್ಟಿ, ಕಾಶೀನಾಥ ಎನ್.ಕಬಾಡಿ, ನಿಂಗಪ್ಪ ಮಾಗಡಿ, ಗುಡೆಲಿಸಾಬ ಅತ್ತಾರ, ರೇವಣಪ್ಪ ರಾಜೂರ, ರಾಜೇಸಾಬ ಸಯ್ಯದ, ಮಂಜುನಾಥ ಕಾಟವಾ, ರಾಜೀವ ರೋಣದ, ರಾಮಣ್ಣ, ಗಣೇಶ, ರಾಘವೇಂದ್ರ, ಈರಣ್ಣ, ಬುಡೇಲಿ ಅತ್ತಾರ, ಕಾಶೀನಾಥ ಕಬಾಡಿ, ಚನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಭಾಷಾಸಾಬ ಮಲ್ಲಸಮುದ್ರ ನಿರೂಪಿಸಿದರು. ರಾಮಣ್ಣನವರು ವಂದಿಸಿದರು.
ನಗರ ಪೊಲೀಸ್ ಠಾಣೆಯ ಸಿಪಿಐ ಬಿ.ಬಿ. ಪಾಟೀಲ ಮಾತನಾಡಿ, ಪಂಡಿತ ಪಂಚಾಕ್ಷರ ಗವಾಯಿಗಳರವರ ಕೃಪೆ ಹಾಗೂ ಪುಟ್ಟರಾಜ ಗವಾಯಿಗಳರವರ ಆಶೀರ್ವಾದ ಸದಾಕಾಲ ನೆಮ್ಮಲ್ಲರ ಮೇಲೆ ಇರಲಿ ಎಂದು ಹೇಳಿದರು.