ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿ: ಕಾರು ತಡೆದ ಅಧಿಕಾರಿಗಳ ವಿರುದ್ಧ ಅಸಮಾಧಾನ

0
Spread the love

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.

Advertisement

ಸಾವಿರ ರೂಪಾಯಿ ಟಿಕೆಟ್ ಮೂಲಕ ನೇರ ದರ್ಶನ ಪಡೆದರು. ಹೆಚ್.ಡಿ. ದೇವೇಗೌಡ ಕುಟುಂಬದಿಂದ ಆಗಮಿಸಿದ ರೇವಣ್ಣ ದಂಪತಿಗೆ ಭದ್ರತಾ ವ್ಯವಸ್ಥೆಯೊಂದಿಗೆ ಭೇಟಿ ನೀಡಲಾಗಿದ್ದು, ಈ ವೇಳೆ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅವರ ವಾಹನವನ್ನು ತಡೆದಿದ್ದಾರೆ. ಇದರಿಂದ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ದರ್ಶನದ ನಂತರ, ಅರ್ಧಗಂಟೆ ಕಾಲ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವೇಗೌಡ ಕುಟುಂಬದ ಇತರ ಸದಸ್ಯರು — ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ಸೂರಜ್, ಪ್ರಜ್ವಲ್ ರೇವಣ್ಣರ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು.

ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ದೇವರ ಮೇಲಿದ್ದ ಕುಂಕುಮವನ್ನು ಪಡೆದುಕೊಂಡ ರೇವಣ್ಣ ದಂಪತಿ, ದೇವರ ಹೂವನ್ನೂ ತಮ್ಮೊಂದಿಗೆ ಕೊಂಡೊಯ್ಯಲಾಯಿತು. ಈ ವೇಳೆ ಹಾಸನ ಮೇಯರ್ ಗಿರೀಶ್ ಸಹ ಇದ್ದರು.


Spread the love

LEAVE A REPLY

Please enter your comment!
Please enter your name here