ವಿಜಯಸಾಕ್ಷಿ ಸುದ್ದಿ, ಗದಗ: ಆಗಸ್ಟ್ 24ರಂದು ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನ ನಡೆಯಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ರಾಷ್ಟ್ರ ದ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ನೇರವೆರಿಸಲಿದ್ದಾರೆ ಎಂದು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಶರಣ ಚಿಂತಕ ಕೆ.ಎಚ್. ಬೇಲೂರ, ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷರುಗಳಾದ ಡಾ. ಶಿವಪ್ಪ ಕುರಿ, ಡಾ. ಶರಣು ಗೋಗೇರಿ, ಶರಣ ಚಿಂತಕರಾದ ಲಲಿತಾ ಕೆರಿಮನಿ ಹಾಗೂ ಡಾ. ಎಸ್.ಸಿ. ಚವಡಿ ಮುಂತಾದವರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮ.ನಿ.ಪ್ರ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ವಹಿಸುವರು. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಸುಧಾ ಎಸ್.ಹುಚ್ಚಣ್ಣವರ ಮಾತನಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿ.ಪ ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆಗೊಳಿಸಲಿದ್ದಾರೆ ಎಂದರು.
ಜಿಲ್ಲೆಯ ಏಳು ತಾಲೂಕಿನ ಪ್ರತಿಯೊಬ್ಬರನ್ನು `ಶಿವಶರಣೆ ಮುಕ್ತಾಯಕ್ಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ನಂತರ ಚಿಂತನಾಗೋಷ್ಠಿ ಭಾಗ-1 ನಡೆಯಲಿದ್ದು, ಸಾನ್ನಿಧ್ಯವನ್ನು ಶಿವಶರಣೆ ಡಾ. ನೀಲಮ್ಮ ತಾಯಿ ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಡಾ. ಅರ್ಜುನ ಗೋಳಸಂಗಿ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯಕ್ಕೆ ಗದಗ ಜಿಲ್ಲೆಯ ಮಠಮಾನ್ಯಗಳ ಕೊಡುಗೆ ಕುರಿತು ಸಿದ್ದು ಯಾಪಲಪರವಿ ಉಪನ್ಯಾಸ ನೀಡಲಿದ್ದು, `12 ನೇ ಶತಮಾನದ ಆಲಕ್ಷಿತ ವಚನಕಾರ್ತಿಯರು’ ಎಂಬ ವಿಷಯದ ಕುರಿತು ಡಾ. ವಿಜಯಲಕ್ಷ್ಮೀ ಗೇಟಿಯವರ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಚಿಂತನಾಗೋಷ್ಠಿ ಭಾಗ-2 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸೋಮರೆಡ್ಡಿ ಬಸಾಪೂರ ವಹಿಸಿಕೊಳ್ಳಲಿದ್ದಾರೆ. ಉಪನ್ಯಾಸಕರಾಗಿ ಸಿದ್ದಣ್ಣ ಜಗಭಾಳ ಆಗಮಿಸಲಿದ್ದು, ಇವರು `ಜಾನಪದ ಸಾಹಿತ್ಯದಲ್ಲಿ ಬಸವೇಶ್ವರರು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಸಾಯಂಕಾಲ 4.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಬೈರನಹಟ್ಟಿಯ ಶ್ರೀ ಶಾಂತಲಿAಗ ಮಹಾಸ್ವಾಮೀಜಿ ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಸಮಾರೋಪ ನುಡಿಗಳನ್ನು ಸುಶೀಲ ಸೋಮಶೇಖರ ನುಡಿಯಲ್ಲಿದ್ದಾರೆ ಎಂದು ಸುಧಾ ಹುಚ್ಚಣ್ಣವರ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎ ಬಳಿಗೇರ, ಸೀತಾ ಬಸಾಪೂರ, ಸುಕನ್ಯಾ ಸಾಲಿ, ಪ್ರತಿಭಾ ಹೊಸಮನಿ, ಸುಲೋಚನಾ ಐಹೊಳೆ, ಅಶ್ವಿನಿ ಅಂಕಲಕೋಟಿ, ಎಸ್.ಎಂ. ಮರಿಗೌಡ್ರ, ಶೇಖಣ್ಣ ಕವಳಿಕಾಯಿ, ಪ್ರಕಾಶ ಅಸುಂಡಿ, ಪ್ರೇಮಾ ಮೇಟಿ, ಐ.ಬಿ. ಬೆನಕೊಪ್ಪ, ಎಂ.ಕೆ. ಲಮಾಣಿ, ಅಶೋಕ ಹಾದಿ, ಬೂದಪ್ಪ ಅಂಗಡಿ ಉಪಸ್ಥಿತರಿದ್ದರು.
1919ರಲ್ಲಿ ಲಕ್ಷ್ಮೇಶ್ವರದಲ್ಲಿ ಮೊಟ್ಟ ಮೊದಲು ಕದಳಿ ಮಹಿಳಾ ಸಮ್ಮೇಳನ ನಡೆದಿತ್ತು. 2025ರಲ್ಲಿ ಮತ್ತೆ ಗದಗ ನಗರದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಶರಣ ಸಾಹಿತ್ಯ ಪರಿಷತ್ತನ್ನು ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ಹುಟ್ಟು ಹಾಕಿದರು. ಶರಣರ ಮೌಲ್ಯಗಳನ್ನು ಬಿತ್ತರಿಸಿ ಸಮಾಜ ಸುಧಾರಿಸಲು ಈ ಪರಿಷತ್ತು ಉದಯವಾಗಿದೆ.
– ಕೆ.ಎ. ಬಳಿಗೇರ.
ಶ.ಸಾ.ಪ ಜಿಲ್ಲಾಧ್ಯಕ್ಷರು.