ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಯುವ ಸಂಗೀತ ಕಲಾವಿದೆ ಪ್ರಿಯಾಂಕಾ ಪ್ರವೀಣ ಹಾವೇರಿ ಇವರು ಧಾರವಾಡ ಆಕಾಶವಾಣಿ ಕೇಂದ್ರದ ಬಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.
ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಪದವಿ ಮುಗಿಸಿದ ಕಲಾವಿದೆ ಸದ್ಯ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾಳೆ. ಸಂಗೀತ ಪದವಿ ಪಡೆದ ಪ್ರಿಯಾಂಕಾ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆಯೊಂದಿಗೆ ಈಗಾಗಲೇ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆ ನೀಡುವ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾಳೆ.
5 ವರ್ಷಗಳ ಅವಧಿಗೆ ಕನ್ನಡ ಭಕ್ತಿಗೀತೆಗಳ ವಿಭಾಗದಲ್ಲಿ ಲಘು ಸಂಗೀತ ಸೇವೆಯನ್ನು ಗೌರವ ಧನದೊಂದಿಗೆ ನೀಡಲು ಆಕಾಶವಾಣಿ ಕಾರ್ಯಕ್ರಮಗಳ ಮುಖ್ಯಸ್ಥರಾದ ಎಸ್.ಎಸ್. ಕೋಲಿನ್ ಅನುಮೋದಿಸಿದ್ದಾರೆ.



