ನೀವೇನು ಸೋಲೋಕೆ ಬರ್ತೀರಾ!?ನಾಚಿಕೆ ಆಗಬೇಕು ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಲಾಯರ್ ಜಗದೀಶ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಸ್ವರ್ಗ ವರ್ಸಸ್ ನರಕ ಎಂಬ ಕಾನ್ಸೆಪ್ಟ್ ಇರುವುದರಿಂದ ಈ ಬಾರಿಯ ಆಟದಲ್ಲಿ ಬದಲಾವಣೆ ಕಾಣಿಸಿದೆ. ನರಕದಲ್ಲಿ ಇದ್ದವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ನಾಮಿನೇಷನ್ನಿಂದಲೂ ಬಚಾವ್ ಆಗಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ನೀಡಿದ್ದ ‘ಕಮಾನು ಬಿಲ್ಡಿಂಗ್’ ಟಾಸ್ಕ್ನಲ್ಲಿ ನರಕ ನಿವಾಸಿಗಳು ಸೋತಿದ್ದಾರೆ. ಅದರಿಂದ ಬೇಸರ ಮಾಡಿಕೊಂಡ ಜಗದೀಶ್ ಅವರು ತಮ್ಮದೇ ತಂಡದವರ ಮೇಲೆ ಕೂಗಾಡಿದ್ದಾರೆ.
ಕಮಾನು ಬಿಲ್ಡಿಂಗ್’ ಟಾಸ್ಕ್ನಲ್ಲಿ ಭಾಗವಹಿಸಲು ಜಗದೀಶ್ಗೆ ಅವಕಾಶ ನೀಡಿರಲಿಲ್ಲ. ಮೋಕ್ಷಿತಾ ಪೈ ಅವರು ಈ ಟಾಸ್ಕ್ನ ಉಸ್ತುವಾರಿ ವಹಿಸಿಕೊಂಡಿದ್ದರು. ನರಕದವರು ಸೋತಿದ್ದರಿಂದ ಜಗದೀಶ್ ಅವರಿಗೆ ಸಿಟ್ಟು ಬಂತು. ತಮ್ಮನ್ನು ಟಾಸ್ಕ್ ಆಡಲು ಸೇರಿಸಿಕೊಳ್ಳದೇ ಇರುವುದು ಮತ್ತು ತಮ್ಮ ಮಾತನ್ನು ಪರಿಗಣಿಸದೇ ಇರುವುದೇ ತಮ್ಮ ತಂಡದ ಸೋಲಿಗೆ ಕಾರಣ ಎಂದು ಅವರು ವಾದಿಸಿದ್ದಾರೆ.
ಟಾಸ್ಕ್ ಸೋತು ಸೈಡಲ್ಲಿ ನಿಂತಿಲ್ಲ ಶಿಶಿರ್, ಮೋಕ್ಷಿತಾ, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ ಮುಂತಾವರಿಗೆ ಜಗದೀಶ್ ಅವರು ಹಿಗ್ಗಾಮುಗ್ಗಾ ಬೈಯ್ದಿದ್ದಾರೆ. ‘ಸೋಲೋಕೆ ಬರುತ್ತೀರಿ. ನಿಮಗೆಲ್ಲ ನಾಚಿಕೆ ಆಗಬೇಕು’ ಎಂದು ಜಗದೀಶ್ ಹೇಳಿದ್ದನ್ನು ಕೇಳಿಸಿಕೊಂಡು ಎಲ್ಲರೂ ತಿರುಗಿಬಿದ್ದರು. ಅದಕ್ಕೆಲ್ಲ ಜಗದೀಶ್ ಕೇರ್ ಮಾಡಲಿಲ್ಲ. ‘ನಾನ್ ಸೆನ್ಸ್’ ಎಂದು ಕೂಡ ಬೈಯ್ದರು. ಆ ಪದ ಕೇಳಿಸಿಕೊಂಡು ಗೋಲ್ಡ್ ಸುರೇಶ್ ಕೆರಳಿದರು. ಹಾಗಿದ್ದರೂ ಕೂಡ ಜಗದೀಶ್ ಆರ್ಭಟ ನಿಲ್ಲಿಸಲಿಲ್ಲ. ಎಲ್ಲರ ಜೊತೆಗೂ ಜಗದೀಶ್ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಕೂಡ ಬಿಗ್ ಬಾಸ್ ಮನೆಯ ಪ್ರತಿ ಕ್ಷಣವನ್ನು ತಾವು ಎಂಜಾಯ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.