ವಿಜಯಸಾಕ್ಷಿ ಸುದ್ದಿ, ಗದಗ: ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ ಪ್ರಶಸ್ತಿಗೆ ಭಾಜನರಾದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಗದಗ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫೀ ಎಸ್. ನಾಗರಕಟ್ಟಿ, ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ ಪ್ರಶಸ್ತಿಗೆ ಭಾಜನರಾದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಪಿ ಬಿ.ಎಸ್. ನೇಮಗೌಡ, ಗದಗ ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ, ಗದಗ ಜನತೆಯ ಸಹಕಾರದಿಂದ ನನಗೆ ಈ ಪ್ರಶಸ್ತಿ ದೊರಕಿರುವುದು ಸಂತಸವನ್ನು ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಮತ್ತು ಗದಗ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಎಂ.ಡಿ. ಜಾಫರ ಢಾಲ್ಲಾಂತ, ಲಾಡಸಾಬ್ ಕಿತ್ತೂರು, ಎಂ.ಎಂ. ಶಿರಹಟ್ಟಿ, ಸಲೀಂ ನರಗುಂದ, ಮುಜಮಿಲ್ ಬಳ್ಳಾರಿ, ಇಲಿಯಾಸ ಶಿರಹಟ್ಟಿ, ಎಸ್.ಎಸ್. ಖಾದ್ರಿ, ಮಹಮ್ಮದ ಹನೀಫ್ ಇರಕಲ್ಲ, ಅಲ್ಲಾಭಕ್ಷ ದೊಡ್ಡಮನಿ, ಇಸಾಕ ಇರಕಲ್ಲ, ಯೂನಸ ಖಾಜಿ, ನಾಸೀರ ನರೇಗಲ್ಲ, ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಾಸೀನ್ ಮುಲ್ಲಾ, ಯೂನೂಸ ಮುಲ್ಲಾ, ಅಫ್ಜಲ್ ಮನಿಯಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.