Homecultureಮಳೆಗಾಗಿ ರೈತರಿಂದ ವಿಶೇಷ ಪೂಜೆ

ಮಳೆಗಾಗಿ ರೈತರಿಂದ ವಿಶೇಷ ಪೂಜೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೊಪ್ಪಿನಕೇರಿ ಓಣಿಯ ರೈತ ಸಮುದಾಯ ಈ ವರ್ಷವೂ ಮಳೆಗಾಗಿ ಪ್ರಾರ್ಥಿಸಿ ಶ್ರೀ ಕೊಲ್ಲಾರೆಮ್ಮ ದೇವಿಗೆ ವಿಶೇಷ ಪೂಜೆ, ಎತ್ತಿನ ಮೆರವಣಿಗೆ, ಮಹಿಳೆಯರ ಪೂರ್ಣಕುಂಭ, ಪ್ರಸಾದ ಸೇವೆ ಮಾಡುವ ಮೂಲಕ ಮಳೆಗಾಗಿ ಪರವು ಸಂಪ್ರದಾಯ ಆಚರಿಸಿದರು.

ಈ ವಿಶೇಷ ಪರವು ಸಂಪ್ರದಾಯ ಆಚರಣೆಗಾಗಿ ಓಣಿಯ ಹಿರಿಯರು, ಯುವಕರು ಜಂತ್ಲಿ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ರಾತ್ರೋರಾತ್ರಿ ಗೋದಿ ಹುಗ್ಗಿ, ಜೋಳದ ಕಿಚಡಿ, ಅನ್ನ-ಸಾರು ಪ್ರಸಾದ ಸಿದ್ಧಪಡಿಸುತ್ತಾರೆ. ಬೆಳಿಗ್ಗೆ ಅಂಲಕೃತ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಸಿದ್ಧಪಡಿಸಿ ಪ್ರಸಾದವನ್ನಿರಿಸಿ ಡೊಳ್ಳು, ಭಜನೆ, ಮಹಿಳೆಯರ ಪೂರ್ಣಕುಂಭ, ಎತ್ತುಗಳ ಮೆರವಣಿಗೆ ಮೂಲಕ ಭಜನೆ ಅಡರಕಟ್ಟಿ ಹತ್ತಿರದ ಕೊಲ್ಲಾರೆಮ್ಮನ ಪೌಳಿಗೆ ತೆರಳಿ ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ದೇವಿ ಮಳೆಯ ಭವಿಷ್ಯ ಉದ್ಘರಿಸುತ್ತಾಳೆ. ನಂತರ ಲಕ್ಷ್ಮೇಶ್ವರ, ಮಂಜಲಾಪುರ, ಅಡರಕಟ್ಟಿ ಸುತ್ತಮುತ್ತಲಿನ ಭಾಗದ ರೈತ ಕುಟುಂಬಗಳಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಜನರನ್ನು ಕರೆದು ಪ್ರಸಾದ ಉಣಬಡಿಸಿದರು. ಸಂಜೆ ಸೂರಣಗಿಯ ಡೊಳ್ಳು ಮೇಳದೊಂದಿಗೆ ಪಟಾಕಿ ಸಿಡಿಸಿ ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಿಜೃಂಭಣೆಯಿಂದ ಎತ್ತುಗಳ ಮೆರವಣಿಗೆ ಜರುಗಿತು. ಓಣಿಯ ಹಿರಿಯರು, ಮಹಿಳೆಯರು ಸೇರಿ ರೈತ ಸಮುದಾಯದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!