ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿರುವ ಬಜೆಟ್ ರಾಜ್ಯದ ಶೋಷಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಜನರ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸಿ ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಐದು ವರ್ಷಗಳ ಅವಧಿಯವರೆಗೆ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರೇ ಮುಂದುವರೆಯಲಿ ಎಂದು ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
Advertisement
ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಶರಣಪ್ಪ ಜೋಗಿನ, ರವಿ ಗಂಗರಾತ್ರಿ, ಉದಯ ಮಸಾರಿ, ಚಿನ್ನಪ್ಪ ಬಿಸನಳ್ಳಿ, ಹುಚ್ಚೀರಪ್ಪ ಬಾಬರಿ, ಶಿವಕುಮಾರ ಯತ್ನಟ್ಟಿ, ಚನ್ನಪ್ಪ ಗದಗ ಕುಶಾಲ ಗಂಗರಾತ್ರಿ, ಮಹಾಂತೇಶ ದೇವರವರ, ಅರ್ಚಕರಾದ ವೆಂಕಟೇಶ ಪೂಜಾರ ಪಾಲ್ಗೊಂಡಿದ್ದರು.