ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೊಪ್ಪಿನಕೇರಿ ಓಣಿಯಲ್ಲಿ ಶ್ರೀರಾಮ ನವಮಿ ನಿಮಿತ್ತ ಬುಧವಾರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ ಮಾತನಾಡಿ, ಶ್ರೀರಾಮ ಕೇವಲ ವ್ಯಕ್ತಿಯಲ್ಲ, ಪ್ರತಿಯೊಬ್ಬರ ಬದುಕಿನ ಆದರ್ಶವಾಗಿದ್ದಾರೆ. ಭಕ್ತಿ, ಶೃದ್ಧೆ, ಸತ್ಯ, ಶಾಂತಿ, ಪ್ರೀತಿ, ಧರ್ಮ, ಸಂಸ್ಕಾರ, ಮಾನವೀಯತೆ, ಕರ್ತವ್ಯಪ್ರಜ್ಞೆಗಳನ್ನು ರೂಢಿಸಿಕೊಂಡು ಸಾರ್ಥಕ ಜೀವನ ಹೊಂದಬೇಕು ಎಂಬುದನ್ನು ಸಾಕ್ಷೀಕರಿಸಿದ್ದಾನೆ. ಕುಟುಂಬ, ಸಮಾಜ, ದೇಶಕ್ಕಾಗಿ ಬದುಕುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಈರಣ್ಣ ಮುಳಗುಂದ, ವಿರೇಶ ಚಿಂಚಲಿ, ಈರಣ್ಣ ಪೂಜಾರ, ಅರುಣ ಮೆಕ್ಕಿ, ಅಮಿತ ಗುಡಗೇರಿ, ಶಿವು ಮೆಕ್ಕಿ, ಆದೇಶ ಸವಣೂರ, ಸುನೀಲ ಮುಳಗುಂದ, ಯಶವಂತ ಶಿರಹಟ್ಟಿ, ಸೋಮು ಗೌರಿ, ಕುಮಾರ ಕಣವಿ, ವೈಭವ ತಿರುಮಲೆ, ಬಾಲಾಜಿ ಕಲಾಲ್, ಈರಣ್ಣ ಮೆಣಸಿನಕಾಯಿ, ದುಂಡೇಶ ಸವಣೂರ, ಸೋಮು ನರೇಗಲ್, ನೀಲೇಶ ಹುಳಕನವರ ಸೇರಿ ಹಲವರಿದ್ದರು.