ಚಿಕ್ಕಬಳ್ಳಾಪುರ:- ಅನುಮಾನಾಸ್ಪದವಾಗಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಶವ ಪತ್ತೆಯಾಗಿದ್ದು, ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. 30 ವರ್ಷದ ಮಾಲಾ ಹಾಗೂ 8 ವರ್ಷದ ಅನುಶ್ರೀ ಮೃತರು.
Advertisement
ಈ ಘಟನೆ ದೇವನಹಳ್ಳಿ ತಾಲೂಕಿನ ಇಂಡರಸನಹಳ್ಳಿ ಗ್ರಾಮದಲ್ಲಿ ಜರುಗಿದೆ. ಮೃತ ಮಾಲಾ ಜಮೀನು ಭಾಗ ಮಾಡಿಕೊಳ್ಳುವಂತೆ ಗಂಡನಿಗೆ ಒತ್ತಡ ಹಾಕಿದ್ದಳಂತೆ ಹಾಗಾಗಿ ಕುಟುಂಬಸ್ಥರಲ್ಲಿ ಜಮೀನು ವಿಚಾರದಲ್ಲಿ ಮನಸ್ತಾಪಗಳು ಮೂಡಿದ್ದವು. ಇದೇ ವಿಚಾರದಲ್ಲಿ ಗಂಡ ನಾಗರಾಜ್ ಅತ್ತೆ ಮೈದುನ ಮುನಿರಾಜು, ಅತ್ತೆ ಅಂಜಿನಮ್ಮ ಸೇರಿ ನಾದಿನಿ ವಿರುದ್ದ ಕೊಲೆ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.