ಶಿಗ್ಲಿಯ ತಪೋನಿಧಿ ಶ್ರೀಗುರುಬಸಪ್ಪನವರು

0
shigli
Spread the love

ಶಿಗ್ಲಿ ಗ್ರಾಮವು ಲಕ್ಷೇಶ್ವರ ತಾಲೂಕಿನಲ್ಲಿ ಗದಗ ಜಿಲ್ಲೆಯ ದಕ್ಷಿಣ ಅಂಚಿನಲ್ಲಿದ್ದು, ಗಣನೀಯವಾಗಿ ಗುರುತಿಸಿಕೊಂಡ ಗ್ರಾಮವಾಗಿದೆ. ಅಷ್ಟೇ ಅಲ್ಲದೆ, ಉತ್ತಮ ಆಧ್ಯಾತ್ಮದ ಹಿನ್ನೆಲೆಯನ್ನೂ ಹೊಂದಿದೆ. ಪುರಾತನ ಕಾಲದಲ್ಲಿ ಹಳ್ಳದ ದಂಡೆಗುಂಟ ಸಮೃದ್ಧವಾದ ವನಸಿರಿ ಇತ್ತು. ಇಲ್ಲಿ ಕಲ್ಯಾಣ ಶರಣ ಸಂಪ್ರದಾಯದ ಸಿದ್ಧಲಿಂಗ ಯತಿಗಳು ಬಂದು ನೆಲೆಸಿದ್ದರು. ಅವರ ತಪೋಬಲವನ್ನು ಕಂಡು ಲಕ್ಷೇಶ್ವರದ ಅಂದಿನ ದೇಸಾಯಿಯವರು ಈ ಪ್ರದೇಶವನ್ನು ಯತಿಗಳಿಗೆ ಉಂಬಳಿ ಹಾಕಿಕೊಟ್ಟರು. ಸಿದ್ದಲಿಂಗ ಯತಿಗಳ ಶಿಷ್ಯರು-ಪ್ರಶಿಷ್ಯರು ನೆಲೆಸಿದ ಈ ಊರನ್ನು ಜನರು `ಸಿದ್ಧಲಿಂಗ’ ಎಂದೇ ಕರೆದರು. ಅದೇ ಬರಬರುತ್ತ ವನ ಸಿಗ್ನಲಿ, ಸಿಗ್ನಲಿ ಸಂತೆ ಶಿಗಲಿ ಎಂದಾಯಿತು.

Advertisement

ಮುಂದಿನ ಯುಗಾಂತರಕ್ಕೆ ಬಂದರೆ, ಶಿಶುನಾಳದ ಶರೀಫಜ್ಜನವರ ಯೋಗ ಸಾಧನೆಗೆ ಗುರುವಾಗಿದ್ದ ಶ್ರೀ ವೀರಪ್ಪಜ್ಜನವರು ಇಲ್ಲಿಗೆ ಬಂದು ನೆಲೆಸಿದರು. ಅವರು ತಮ್ಮ ಶಿಷ್ಯರೊಂದಿಗೆ ನಿರ್ಮಿಸಿದ್ದ ಗವಿ, ಅದರಲ್ಲಿ ಗದ್ದುಗೆ, ಬಾವಿ ಇವುಗಳನ್ನು ನಿರ್ಮಿಸಿದರು. ಇವು ಇನ್ನೂ ಸುಸ್ಥಿತಿಯಲ್ಲಿದ್ದು, ಇಂದು `ಸೇವಾ ಮಂದಿರ’ವಾಗಿ ಮುಂದುವರೆದಿದೆ.

ಇಂಥ ಊರಿಗೆ ಮಹಾ ತಪೋನಿಧಿ ಮತ್ತು ಇಚ್ಛಾ ಮರಣ ಪಡೆದ ದಂಪತಿಗಳು ಶ್ರೀ ಗುರುಬಸಪ್ಪಜ್ಞನವರು ಮತ್ತು ಶಾಂತಿವೀರಮ್ಮನವರು ಬಂದು ಬಹುಕಾಲ ನೆಲೆಸಿದರು. ಇವರ ಮೂಲ ಊರು `ತಾಂಬಾ’. ಇದು ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. 1860ರಲ್ಲಿ ಸ್ಥಿತಿವಂತ ಬಣಗಾರ ಮನೆತನದಲ್ಲಿ ಎಂಟು ಜನ ಸಹೋದರರಲ್ಲಿ 7ನೇ ಮಗುವಾಗಿ ಜನಿಸಿದರು.

ಬಾಲ್ಯದಿಂದಲೇ ಆಧ್ಯಾತ್ಮ ಮತ್ತು ತತ್ವ ಶಾಸ್ತçಗಳಲ್ಲಿ ಒಲವು ಬೆಳೆಸಿಕೊಂಡು ಬೆಳೆದರು. ತಂದೆ ತಾಯಿ ಮತ್ತು ಗುರು ಹಿರಿಯರು ಅಜ್ಞಾನಸಾರ ವಿವಾಹವಾದರು. ಇವರು ಧರ್ಮಪತ್ನಿ ಶಾಂತಿವೀರಮ್ಮ ಗಂಡನ ಒಲವಿನಂತೆ ಗಂಡನ ನೆರಳಾಗಿ ಬಾಳಿದರು. ಅಣ್ಣ-ತಮ್ಮಂದಿರಲ್ಲಿ ಆಸ್ತಿ ವ್ಯಾಜ್ಯಕ್ಕೆ ಬೇಸತ್ತು ಯಾವ ಪಾಲು ಪಡೆಯದೆ ವಿರಕ್ತರಾಗಿ 1985ರಲ್ಲಿ ದೂರದ ಶಿಗ್ಲಿಗೆ ಬಂದು ನೆಲೆಸಿದರು. ಇಲ್ಲಿ ಆಧ್ಯಾತ್ಮದ ವಾತಾವರಣ ಇವರನ್ನು ಚುಂಬಕದಂತೆ ಸೆಳೆದಿತ್ತು. ಇಲ್ಲಿಯ ಸಹೃದಯ ಜನರು ಇವರನ್ನು ಸ್ವಾಗತ ಆಶ್ರಯ ನೀಡಿದರು. ಆಗ ಇವರಿಗೆ 35ವರ್ಷಗಳ ಏರು ಪ್ರಾಯ.

ದಂಪತಿಗಳಿಬ್ಬರು ಜನಾನುರಾಗಿ ಕಾಯಕನಿಷ್ಠರಾಗಿ ಜನರೊಂದಿಗೆ ದುಡಿದರು. ದಾನ ಮಾಡುವುದಕ್ಕಾಗಿ ಗಳಿಸುತ್ತಿದ್ದರು. ಜನಸೇವೆಯೇ ಜೀವನ ಗುರಿಯಾಗಿತ್ತು. ವೈದ್ಯಕೀಯ ಸೌಲಭ್ಯವಿಲ್ಲದ ಆಗಿನ ಕಾಲದಲ್ಲಿ ಗುರುಬಸಪ್ಪನವರು ನೀಡುತ್ತಿದ್ದ ಗಾವಟಿ ಔಷಧಿ ಮತ್ತು `ರ ಬಳಿ’ ಉಪಚಾರವು ಜನರಿಗೆ ವರದಾನವಾಗಿತ್ತು. ಊರಿನ ಗೌಡರಿಗೂ ಉಪಚಾರ ನೀಡಿ ಗುಣಪಡಿಸಿದರು. ಹೀಗೆ ಪರಸ್ಪರಲ್ಲಿ ಸ್ನೇಹ, ಆತ್ಮೀಯತೆ ಬೆಳೆದಿತ್ತು. ಗೌಡರ ಜಮೀನನ್ನು ಲಾವಣಿ ತರೀಕ ವ್ಯವಸಾಯ ಮಾಡಿದರು. ಅಲ್ಲೇ ಗುಡಿಸಿಲು ಕಟ್ಟಿಕೊಂಡು ಬಾಳಿದರು, ದುಡಿಮೆಯಲ್ಲಿ ದೇವರನ್ನು ಕಂಡರು.

ಅವರು ಉಪದೇಶಗಳು ಜನರಿಗೆ ಹಿತವಾಗಿದ್ದವು. ಅತಿ ಆಸೆ, ಅತಿ ಪ್ರೀತಿ, ಅತಿ ಅವಲಂಬನೆ ಇವು ದುಃಖಕ್ಕೆ ಕಾರಣವಾಗುತ್ತದೆ. ದ್ವೇಷ, ಅಸೂಯೆ, ಕೋಪ-ತಾಪ ನಮ್ಮನ್ನು ಕುಬ್ಜರನ್ನಾಗಿ ಮಾಡುತ್ತವೆ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸಮ ಚಿತ್ತರಾಗಿರಬೇಕು. ನಮ್ಮ ಸುಖ ದುಃಖಗಳಿಗೆ ಮನಸೇ ಕಾರಣವಾಗಿರುತ್ತದೆ. ಹೀಗೆ ಮನಸ್ಸು ಮತ್ತು ದೇಹಗಳ ಸಮಾಧಾನದ ಮಹತ್ವ ತಿಳಿಸುತ್ತಿದ್ದರು.

ಗುರುಪಸಪ್ಪಜ್ಜನವರದು ಯೋಜನಾಬದ್ಧ ಬದುಕು, ಎಲ್ಲದರಲ್ಲೂ ಶಿಸ್ತು ಎದ್ದು ಕಾಣುತ್ತಿತ್ತು. ತಾವು ಸಪತ್ನಿಕರಾಗಿ ವರ್ಷಪೂರ್ತಿ ದುಡಿದು ಗಳಿಸಿದ್ದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಒಂದನ್ನು ಸ್ವಂತ ಉಪಜೀವನಕ್ಕೆ, ಎರಡನೇ ಭಾಗವನ್ನು ದಾನ-ಧರ್ಮಗಳಿಗೆ, ಮೂರನೆಯದನ್ನು ನಿತ್ಯ ಬರುತ್ತಿದ್ದ ಅತಿಥಿ, ಸಾಧು, ಸಂತರ ಸತ್ಕಾರ, ಉಪಚಾರಕ್ಕೆ ಮತ್ತು ನಾಲ್ಕನೇ ಭಾಗವನ್ನು ಶಿವರಾತ್ರಿ ವೃತಾಚರಣೆಯಲ್ಲಿ ವ್ಯಯಿಸಿ ವರ್ಷದ ಗಳಿಕೆಯನ್ನು ಮುಗಿಸುತ್ತಿದ್ದರು. ಹಬ್ಬದ ಮರುದಿನ ಮತ್ತೆ ಹೊಸ ಗಳಿಕೆ ಪ್ರಾರಂಭ. ಶಿವರಾತ್ರಿ ಅವರ ಭಕ್ತಿ-ಶ್ರದ್ಧೆಯ ಹಬ್ಬವಾಗಿತ್ತು.

1924ರಲ್ಲಿ ಬೆಳಗಾವ ಕಾಂಗ್ರೆಸ್ ಅಧಿವೇಶದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಅವರಂಥ ರಾಷ್ಟ ನಾಯಕರನ್ನು ಕಂಡು ಮಾತನಾಡಿಸಿ ಬಂದರು. ಅಲ್ಲಿಂದ ಬರುವಾಗ ಗಾಂಧೀ ಟೋಪಿ ಧರಿಸಿದರು. ಅದು ಆಗ ರಾಷ್ಟ್ರೀಯತೆಯ ಸಂಕೇತವಾಗಿತ್ತು. ಹೀಗೆ ಶಿಗ್ಲಿ ಯುವಕರಲ್ಲಿ ರಾಷ್ಟç ಪ್ರಜ್ಞೆಯನ್ನೂ ಮೂಡಿಸಿದರು.

1931ನೇ ಜನವರಿ 30ರಂದು ಬನದ ಹುಣ್ಣಿಮೆಯ ದಿನ ಇಚ್ಛಾ ಮರಣ ಹೊಂದಿದರು. ಅವರ ಈ ನಿರ್ಧಾರ ತಿಳಿದ ಪತ್ನಿಯೂ ಇವರು ಮುಂದೆಯೇ ಅದೇ ದಿನ ಇಚ್ಛಾ ಮರಣ ಪಡೆದರು. ಹೀಗೆ ದಂಪತಿಗಳಿಬ್ಬರು ಎಲ್ಲಾ ಶಿಷ್ಯ ಬಳಗದವರ ಭಜನೆ, ಶಿವನಾಮ ಸ್ಮರಣೆಗಳ ನಡುವೆ ದೇಹ ತ್ಯಾಗ ಮಾಡಿದ್ದು ಅಪರೂಪದ ಸನ್ನಿವೇಶವಾಗಿತ್ತು.

ಮಾ.8, ಶಿವರಾತ್ರಿಯ ದಿನ ರಾತ್ರಿ 8 ಗಂಟೆಯಿಂದ ಜಾಗರಣೆ, ಶಿವಕೀರ್ತನೆ ಹಾಗೂ ಭಜನಾ ಮಂಡಳಿಗಳಿಂದ ಕಾರ್ಯಕ್ರಮ, ಮಾ.10ರ ಅಮವಾಸ್ಯೆ ಮುಂಜಾನೆ 8 ಗಂಟೆಗೆ ಶ್ರೀ ಗುರುಬಸಪ್ಪಜ್ಜ ದಂಪತಿಗಳ ಗದ್ದುಗೆಗೆ ಪೂಜಾಭಿಷೇಕ, ನಂತರ ಶ್ರೀ ಗುರುಬಸಪ್ಪಜ್ಜ ಹಾಗೂ ಶಾಂತವೀರಮ್ಮನವರ ಮೂರ್ತಿಗಳ ಮೆರವಣೆಗೆಯು ಸಕಲ ವಾದ್ಯ-ವೈಭವಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಠಕ್ಕೆ ಬರುವುದು. ಮಾ. 11ರ ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಕಡುಬಿನ ಕಾಳಗ ಹಾಗೂ ಮಹಾಪ್ರಸಾದ ನೆರವೇರುವುದು.


Spread the love

LEAVE A REPLY

Please enter your comment!
Please enter your name here