ಸಿದ್ದರಾಮಯ್ಯ ರಾಜೀನಾಮೆ ಕೊಡೊ ಪ್ರಶ್ನೆಯೇ ಹುಟ್ಟಲ್ಲ: ಎಚ್ ಕೆ ಪಾಟೀಲ್

0
Spread the love

ಹುಬ್ಬಳ್ಳಿ: ಸಿದ್ದರಾಮಯ್ಯ ರಾಜೀನಾಮೆ ಕೊಡೊ ಪ್ರಶ್ನೆಯೇ ಹುಟ್ಟಲ್ಲ, ಇದು ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ ಎಂದು ಹುಬ್ಬಳ್ಳಿಯಲ್ಲಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್ ಗೆ ಪರವಾನಿಗೆ ನೀಡಿದ್ದಾರೆ. ಆದ್ದರಿಂದ ಎಲ್ಲಾ ಮಂತ್ರಿ, ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡ್ತಾ ಇದ್ದೇವೆ ಎಂದರು.

ಇನ್ನೂ ಯಾವುದೇ ಕಾರಣಕ್ಕೋ ನಾವು ಸುಮ್ಮನೇ ಇರಲ್ಲ ಭಾರತೀಯ ಜನತಾ ಪಕ್ಷದ ಪಿತೂರಿಯಿಂದ ಆಗಿದ್ದು ಈಗಾಗಲೇ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ. ಕಾನೂನು ವಿರೋಧ ನಿಲುವು ತಾಳುವುದು ರಾಜ್ಯಪಾಲರ ಕ್ರಮ ಸರಿಯಲ್ಲ. ಆದ್ದರಿಂದ ಮುಂದೆ ಯಾವುದೇ ಕಾನೂನು ಹೋರಾಟ ನಡೆಸಲು ಹಿಂದೆ ಸರಿಯಲ್ಲ . ಇನ್ನೂ ಇದೇ ಆಗಸ್ಟ್ ೨೧ ಹಾಗೂ ೨೨ ಕ್ಕೆ ಖಾಸಗಿ ವ್ಯಕ್ತಿಗಳ ದೂರು ವಿಚಾರವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ಬರಲಿದೆ ನೋಡೋಣ ಯಾವ ರೀತಿ ಆದೇಶ ಬರಬಹುದು ಎಂದರು.


Spread the love

LEAVE A REPLY

Please enter your comment!
Please enter your name here