HomeIndia News75 ವರ್ಷದ ಸಂಪ್ರದಾಯ ಮುರಿಯುವ ಕೇಂದ್ರ ಬಜೆಟ್: ಭಾಗ ‘B’ ಮೂಲಕ ಆರ್ಥಿಕ ಭವಿಷ್ಯ ಅನಾವರಣ

75 ವರ್ಷದ ಸಂಪ್ರದಾಯ ಮುರಿಯುವ ಕೇಂದ್ರ ಬಜೆಟ್: ಭಾಗ ‘B’ ಮೂಲಕ ಆರ್ಥಿಕ ಭವಿಷ್ಯ ಅನಾವರಣ

For Dai;y Updates Join Our whatsapp Group

Spread the love

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ 75 ವರ್ಷಗಳ ಸಂಪ್ರದಾಯವನ್ನು ಮುರಿಯುವ ಸಾಧ್ಯತೆ ಇದೆ. ಭಾರತದ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ವಿವರವಾದ ದೃಷ್ಟಿಕೋನವನ್ನು ಅನಾವರಣಗೊಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದ ‘ಭಾಗ B’ಯನ್ನು ಪ್ರಮುಖವಾಗಿ ಬಳಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಬಾರಿ ಕೇಂದ್ರ ಬಜೆಟ್ ಅನ್ನು ಭಾಗ ‘A’ ಮತ್ತು ಭಾಗ ‘B’ ಎಂದು ವಿಭಜಿಸಿ ಮಂಡಿಸುವ ಸಾಧ್ಯತೆ ಇದೆ. ಹಿಂದಿನ ಬಜೆಟ್‌ಗಳಲ್ಲಿ ಹೆಚ್ಚಿನ ವಿಷಯಗಳು ಭಾಗ ‘A’ಯಲ್ಲೇ ಒಳಗೊಂಡಿದ್ದರೆ, ಭಾಗ ‘B’ ಸಾಮಾನ್ಯವಾಗಿ ತೆರಿಗೆ ಮತ್ತು ನೀತಿ ಘೋಷಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಭಾಗ ‘B’ ಅಲ್ಪಾವಧಿಯ ಆದ್ಯತೆಗಳು ಹಾಗೂ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆ ಇದೆ.

ಭಾರತ 21ನೇ ಶತಮಾನದ ಎರಡನೇ ತ್ರೈಮಾಸಿಕಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ದೇಶದ ಸ್ಥಳೀಯ ಸಾಮರ್ಥ್ಯಗಳು ಹಾಗೂ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಬಜೆಟ್ ಮೂಲಕ ಎತ್ತಿ ತೋರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ನಿಯಮಿತ ತೆರಿಗೆ ಬದಲಾವಣೆಗಳನ್ನು ಮೀರಿದ ದೀರ್ಘಾವಧಿಯ ಮಾರ್ಗಸೂಚಿಗೆ ದೇಶಿ ಹಾಗೂ ವಿದೇಶಿ ಅರ್ಥಶಾಸ್ತ್ರಜ್ಞರು ಕಾತರದಿಂದ ಕಾಯುತ್ತಿದ್ದಾರೆ.

ಇದು ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೇ ಕೇಂದ್ರ ಬಜೆಟ್ ಆಗಿದೆ. 2019ರಲ್ಲಿ ತಮ್ಮ ಮೊದಲ ಬಜೆಟ್‌ನಲ್ಲಿ ದಶಕಗಳ ಕಾಲ ಬಳಸಲಾಗುತ್ತಿದ್ದ ಚರ್ಮದ ಬ್ರೀಫ್‌ಕೇಸ್ ಪದ್ಧತಿಯನ್ನು ಕೈಬಿಟ್ಟು, ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ‘ಬಹಿ-ಖಾತಾ’ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಕಳೆದ ನಾಲ್ಕು ವರ್ಷಗಳಂತೆ ಈ ಬಾರಿಯೂ ಬಜೆಟ್ ಸಂಪೂರ್ಣವಾಗಿ ಕಾಗದರಹಿತ ರೂಪದಲ್ಲೇ ಮಂಡನೆಯಾಗಲಿದೆ.

2026ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇಕಡಾ 4.5ಕ್ಕಿಂತ ಕಡಿಮೆ ಹಣಕಾಸು ಕೊರತೆಯ ಗುರಿ ಸಾಧಿಸಿದ ಬಳಿಕ, 2027ರ ಬಜೆಟ್‌ನಲ್ಲಿ ಸಾಲ–ಜಿಡಿಪಿ ಅನುಪಾತ ಕಡಿತಕ್ಕೆ ಸಂಬಂಧಿಸಿದ ಸ್ಪಷ್ಟ ಮಾರ್ಗಸೂಚಿ ದೊರಕುವ ನಿರೀಕ್ಷೆ ಮಾರುಕಟ್ಟೆಗಳಲ್ಲಿ ಇದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರ ನಿರ್ದಿಷ್ಟ ಹಣಕಾಸು ಕೊರತೆ ಗುರಿಯನ್ನು ಘೋಷಿಸಬಹುದೇ ಎಂಬುದರ ಮೇಲೂ ಕುತೂಹಲವಿದೆ.

ಈ ಹಣಕಾಸು ವರ್ಷದಲ್ಲಿ ಸರ್ಕಾರದ ಯೋಜಿತ ಬಂಡವಾಳ ವೆಚ್ಚವನ್ನು 11.2 ಲಕ್ಷ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಖಾಸಗಿ ವಲಯ ಹೂಡಿಕೆ ಬಗ್ಗೆ ಎಚ್ಚರಿಕೆಯಿಂದಿರುವ ಹಿನ್ನೆಲೆ, ಸರ್ಕಾರ ಬಂಡವಾಳ ವೆಚ್ಚದ ಮೇಲೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಪ್ರಸ್ತುತ ಮಟ್ಟದಿಂದ ಶೇಕಡಾ 10ರಿಂದ 15ರಷ್ಟು ಬಂಡವಾಳ ವೆಚ್ಚ ಹೆಚ್ಚಳವಾಗುವ ನಿರೀಕ್ಷೆ ಇದೆ.

ಇನ್ನು 2027ರ ಹಣಕಾಸು ವರ್ಷದ ನಾಮಮಾತ್ರ ಜಿಡಿಪಿ ಬೆಳವಣಿಗೆ ಮುನ್ಸೂಚನೆಗಳು ಹಣದುಬ್ಬರದ ಭವಿಷ್ಯ ದಿಕ್ಕಿನ ಕುರಿತು ಸುಳಿವು ನೀಡಲಿವೆ. ಸರ್ಕಾರವು ಮುಂದಿನ ಹಣಕಾಸು ವರ್ಷಕ್ಕೆ ಶೇ.10.5 ರಿಂದ 11ರ ನಡುವೆ ನಾಮಮಾತ್ರ ಜಿಡಿಪಿ ಬೆಳವಣಿಗೆಯನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಜಿ ರಾಮ್ ಜಿ ಸೇರಿದಂತೆ ಪ್ರಮುಖ ಯೋಜನೆಗಳು, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಕ್ಷೇತ್ರಗಳ ಮೇಲಿನ ವೆಚ್ಚಕ್ಕೂ ಬಜೆಟ್‌ನಲ್ಲಿ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!