ರಾಮನಗರ:- ಬಿಡದಿಯ ತೋಟದಲ್ಲಿ ಇಂದು (ಗುರುವಾರ) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆತ್ಮೀಯವಾಗಿ ಆಚರಿಸಿದರು.
ಪರಂಪರೆಯ ಆಚರಣೆಗಳೊಂದಿಗೆ ಸಂಕ್ರಾಂತಿಯ ಸಂಭ್ರಮವನ್ನು ಹಂಚಿಕೊಂಡ ಅವರು, ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯುವ ಮೂಲಕ ಹಬ್ಬದ ಮಹತ್ವವನ್ನು ಸಾರಿದರು. ಈ ವೇಳೆ ಸಂಪ್ರದಾಯಬದ್ಧ ವಾತಾವರಣದಲ್ಲಿ ಹಬ್ಬದ ಸಡಗರ ಮನೆಮಾಡಿದ್ದು, ಸಂಕ್ರಾಂತಿಯ ಸಂತಸ ಎಲ್ಲರ ಮುಖದಲ್ಲೂ ಕಾಣಿಸಿಕೊಂಡಿತು.



