Home Gadag News ರಾಮ್ ಪ್ರಸಾದ್ ಮನೋಹರ್ ಅವರಿಂದ ವಿವಿಧೆಡೆ ಭೇಟಿ

ರಾಮ್ ಪ್ರಸಾದ್ ಮನೋಹರ್ ಅವರಿಂದ ವಿವಿಧೆಡೆ ಭೇಟಿ

0
ರಾಮ್ ಪ್ರಸಾದ್ ಮನೋಹರ್ ಅವರಿಂದ ವಿವಿಧೆಡೆ ಭೇಟಿ
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ. ರಾಮ್ ಪ್ರಸಾದ್ ಮನೋಹರ್ ಅವರು ಗದಗ ಜಿಲ್ಲೆಯ ನೂತನ ಕಾಮಗಾರಿಯಾದ ಹೊಸಳ್ಳಿಯ ಬೂದೇಶ್ವರ ಮಠದ ಶಿಲಾ ಮಂಟಪ ನಿರ್ಮಾಣ ಕಾಮಗಾರಿ, ತ್ರಿಸ್ಟಾರ್ ಹೋಟೆಲ್ ಸ್ಥಳ ಪರಿಶೀಲನೆ, ಬಿಂಕದಕಟ್ಟೆಯ ಪ್ರಾಣಿ ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಪಾರ್ಕ್ ಮತ್ತು ಬಸವೇಶ್ವರ ಮೂರ್ತಿಯ ಸ್ಥಳಕ್ಕೆ ಭೇಟಿ ನೀಡಿದರು.

ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಪ್ರವಾಸಿ ಗೈಡ್ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ವರ ವಿಭೂತಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here