ವಿಜಯಸಾಕ್ಷಿ ಸುದ್ದಿ, ಗದಗ
ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ಗದಗ ಜಿಲ್ಲೆ ಎಲ್ಲಾ ತಾಲೂಕ ಸಮಿತಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮಾನ್ಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸುಮಾರು 45ವರ್ಷಗಳಿಂದ ಅತಿ ಕನಿಷ್ಠ ಕೂಲಿಗೆ ಕೆಲಸ ಮಾಡುತ್ತ ಬಂದಿದ್ದಾರೆ. ಇವರಿಗೆ ಕನಿಷ್ಠ ವೇತನವಾಗಲಿ ಅಥವಾ ಸಾಮಾಜಿಕ ಭದ್ರತಾ ಯೋಜನೆ ಕಾಯಂ ಪಿಂಚಣಿಯನ್ನಾಗಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಯಾವ ಪಕ್ಷವೂ ಜಾರಿ ಮಾಡಿಲ್ಲ.
ಸಮಾಜದ ಅಭಿವೃದ್ಧಿಗೆ ಐಸಿಡಿಎಸ್ ಕೆಲಸ ಅಲ್ಲದೇ ಇತರೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಬಂದಿದ್ದಾರೆ. ಕಳೆದ ಏಪ್ರಿಲ್ 25, 2022 ರಂದು ಸರ್ವೋಚ್ಚ ನ್ಯಾಯಾಲಯವು ಅಂಗನವಾಡಿ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದೆ.
ಈ ತೀರ್ಪಿನ ಅನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರ ರೋಣ ತಾಲೂಕಿನ ಎಲ್ಲಾ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ನಮ್ಮ ಇಲಾಖೆಯ ನಿರ್ದೇಶಕರಿಗೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಕಳಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ತಾಲೂಕ ಸಮಿತಿ ಗದಗ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿಗಳು ಈ ಮೂಲಕ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಅಂಗನವಾಡಿ ನಿವೃತ್ತ ನೌಕರರ ಸಂಘದ ಗಿರಿಜಾ ಮಮ್ಮಿಗಟ್ಟಿ, ಗಿರಿಜಾ ಹೂಗಾರ, ಹನಮವ್ವ ದಾಸರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ಸಬನೀಸ, ಪ್ರಧಾನ ಕಾರ್ಯದರ್ಶಿ ವಿಜಯಾ ಪಾಟೀಲ, ಖಜಾಂಚಿ ಶಂಕ್ರಮ್ಮ ಕೋಳಿವಾಡ, ಅಂಗನವಾಡಿ ನೌಕರರಾದ ದುಂಡಮ್ಮ ಬಳಿಗಾರ, ಗಂಗಮ್ಮ ಹೂಗಾರ, ರೇಣುಕಾ ಕಳಕಣ್ಣವರ, ದೇವಕ್ಕ ಮಾಮುನಿ, ಸುಮಿತ್ರಾ ಹಕಾರಿ, ಶಕುಂತಲಾ ಮುಧೋಳ, ಕಾಳಮ್ಮ ಪಂಚಾಳ, ಗೀತಾ ಶಾನಭೋಗ, ಗಂಗಮ್ಮ ದ್ಯಾವರೆಡ್ಡಿ, ಚಂದ್ರಕಲಾ ಶಳಕೆ, ರೇಣುಕಾ ಹಡಪದ, ಸುಮಿತ್ರಾ ಕಮ್ಮಾರ, ಶಕೀನಾ ನದಾಫ್, ದೇವಕ್ಕ ರಾಠೋಡ, ಕಮಲಾ ಬಡಿಗೇರ, ಗಿರಿಜಾ ಮಾಚಕನೂರ, ಶಾರದಾ ರೋಣದ, ಲಕ್ಷ್ಮಿ ಗಾಯಕವಾಡ, ನೀಲಮ್ಮ ದಾಸರ, ಸುಶೀಲಾ ಚಲವಾದಿ, ಕಮಲಾಕ್ಷಿ ಬೀಳಗಿ, ನಾಗರತ್ನ ಲಕ್ಕ್ಕುಂಡಿ ಉಪಸ್ಥಿತರಿದ್ದರು.