ಶಾಸಕ ಎಚ್. ಕೆ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಬಿಜೆಪಿ ಮುಖಂಡ……..
ವಿಜಯಸಾಕ್ಷಿ ಸುದ್ದಿ, ಗದಗ
ಬಿಜೆಪಿ ಟಿಕೆಟ್ ಸಿಗದೇ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದ ಬಿಜೆಪಿ ಮುಖಂಡ ಅರವಿಂದ ಹುಲ್ಲೂರ ಅವರಿಗೆ ಕೊನೆಗೂ ಕಾಂಗ್ರೆಸ್ ಪಕ್ಷ ಗಾಳ ಹಾಕಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಶನಿವಾರ ಸಂಜೆ ಬೆಟಗೇರಿಯ ಅರವಿಂದ ಹುಲ್ಲೂರ ಅವರ ನಿವಾಸದಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಸಕ ಎಚ್ ಕೆ ಪಾತ್ರವನ್ನು, ಮಾಜಿ ಶಾಸಕ ಡಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ, ಕಾಂಗ್ರೆಸ್ ಮುಖಂಡರು ಸಿಹಿ ತಿನಿಸಿ, ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ ಅಸೂಟಿ, ಮಾಜಿ ಅಧ್ಯಕ್ಷರಾದ ಗುರಣ್ಣಾ ಬಳಗಾನೂರ, ನಗರಸಭೆ ಸದಸ್ಯ ಚಂದ್ರ ಕರಿಸೋಮನಗೌಡ, ಹಾಗೂ ಮುಖಂಡರಾದ ಪ್ರಭು ಬುರಬುರೆ, ಮಹ್ಮದ ಶಾಲಗಾರ, ಶ್ರೀರಾಮ ಶಿಂಧೆ, ಮೇಘಾ ಮುದಗಲ್ಲ, ನಾಗಲಿಂಗ ಐಲಿ, ಪ್ರಕಾಶ್ ಖೋಡೆ, ರಫೀಕ ಅಣ್ಣಿಗೇರಿ, ಕಿಶೋರ್ ಮುದಗಲ್ಲ ರಾಜು ಬಗಲಿ ಸೇರಿದಂತೆ ಅನೇಕರಿದ್ದರು.