HomeCrime Newsಮೊಬೈಲ್‌ನಿಂದ ತಮ್ಮ ಖಾತೆಗೆ 1.20 ಲಕ್ಷ ರೂ. ಹಣ ವರ್ಗಾಯಿಸಿಕೊಂಡ ಅಪರಿಚಿತರು

ಮೊಬೈಲ್‌ನಿಂದ ತಮ್ಮ ಖಾತೆಗೆ 1.20 ಲಕ್ಷ ರೂ. ಹಣ ವರ್ಗಾಯಿಸಿಕೊಂಡ ಅಪರಿಚಿತರು

Spread the love

ಬಸ್ ಏರುವ ಗಡಿಬಿಡಿಯಲ್ಲಿ……..

ವಿಜಯಸಾಕ್ಷಿ ಸುದ್ದಿ, ಗದಗ

ಬಸ್‌ ನಿಲ್ದಾಣದಲ್ಲಿ ಬಸ್‌ ಏರುವ ಗಡಿಬಿಡಿಯಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲನ್ನು ತೆಗೆದುಕೊಂಡ ಅಪರಿಚಿತರು, ಮೊಬೈಲ್‌ ಅಪ್ಲಿಕೇಶನ್‌ಗಳ ಮೂಲಕ ಬ್ಯಾಂಕ್‌ ಖಾತೆಯ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಣ ತಾಲೂಕಿನ ಯರೆಬೆಲೇರಿಯ ಶೇಖರಯ್ಯ ವೀರಭದ್ರಯ್ಯ ಬೀಕ್ಷಾವತಿಮಠ ಇವರು ಮಾರ್ಚ್‌ 18ರ ಮುಂಜಾನೆ 10 ಗಂಟೆಯ ಸುಮಾರಿಗೆ ಮುಂಡರಗಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿದ್ದರು.

ಈ ಗದ್ದಲದ ಸಮಯದಲ್ಲಿ ಯಾರೋ ಅಪರಿಚಿತರು ಫಿರ್ಯಾದಿಯ ಮೊಬೈಲನ್ನು ತೆಗೆದುಕೊಂಡು, ಅದರಲ್ಲಿಯ ಫೋನ್‌ಪೇ ಹಾಗೂ ಯುಪಿಐ ಪಿನ್‌ ನಂಬರ್‌ಗಳನ್ನು ಊಹಿಸಿ ಅಪ್ಲಿಕೇಶನ್‌ ತೆರೆದಿದ್ದಾರೆ.

ನಂತರ, ಗದಗ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಅವರ ಖಾತೆಯಿಂದ ಒಟ್ಟೂ 1.20 ಲಕ್ಷ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫಿರ್ಯಾದಿಯು ನೀಡಿರುವ ದೂರಿನನ್ವಯ Information Technology Act 2008ರಂತೆ ಪ್ರಕರಣ ದಾಖಲಿಸಿಕೊಂಡಿರುವ ಗದಗ ಸಿಇಎನ್‌ ಪೊಲೀಸರು ತನಿಖೆ ನಡೆಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!