ಜೆಸಿಬಿ ಕೊಡಿಸುವದಾಗಿ ಉದ್ಯಮಿಗಳಿಂದ ರೈತನಿಗೆ ಲಕ್ಷಾಂತರ ರೂ. ಮೋಸ…!

0
Spread the love

ಹುಬ್ಬಳ್ಳಿ, ತಮಿಳುನಾಡಿನ ಉದ್ಯಮಿಗಳು…..

ವಿಜಯಸಾಕ್ಷಿ ಸುದ್ದಿ, ಗದಗ

ರೈತರೊಬ್ಬರಿಗೆ ಜೆಸಿಬಿ ಕೊಡಿಸುವದಾಗಿ ನಂಬಿಸಿ ಲಕ್ಷಾಂತರ ರೂ.ಗಳನ್ನು ಪಡೆದು ನಾಲ್ವರು ಉದ್ಯಮಿಗಳು ಮೋಸ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದ ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ತಮ್ಮ ಉದ್ಯೋಗಕ್ಕಾಗಿ ಜೆಸಿಬಿ ತೆಗೆದುಕೊಳ್ಳುವ ಸಲುವಾಗಿ ಹುಬ್ಬಳ್ಳಿಯ ಅಮರಗೋಳದ ಎಪಿಎಮ್ ಸಿ ಯಾರ್ಡ್ ನ ಅಬ್ದುಲ್ ಸಾಬ ಎ ದರಗಾದ ಎಂಬುವರ ಜೊತೆಗೆ ಮಾತನಾಡಿದ್ದಾರೆ.

ಆಗ ಅಬ್ದುಲ್ ಸಾಬ ಇನ್ನುಳಿದ ತಮಿಳುನಾಡಿನ ಸುಬ್ರಮಣಿಯನ್, ಕರುಪ್ಪುಸಾಮಿ ಹಾಗೂ ಇನ್ನೊಬ್ಬ ಕರುಪ್ಪುಸ್ವಾಮಿ ವೀರಮುತ್ತು ಎಂಬುವರ ಜೊತೆಗೆ ಸೇರಿಕೊಂಡು ಕಳೆದ ವರ್ಷ 2022ರ ಸೆಪ್ಟೆಂಬರ್ 20ರಂದು ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಬಳಿ ಜೆಸಿಬಿ ಯ ಪೋಟೋ ತೋರಿಸಿ ಇದು ಮಾರಾಟಕ್ಕೆ ಇದೆ ಎಂದು ನಂಬಿಸಿ ರೈತ ಬಸವಣ್ಣೆಪ್ಪನಿಂದ ಮುಂಗಡವಾಗಿ 50 ಸಾವಿರ ರೂ.ಗಳನ್ನು ಪಡೆದು ನಂತರ, ಎರಡು ದಿನ ಬಿಟ್ಟು ಸೆಪ್ಟೆಂಬರ್ 23ರಂದು ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿ ಬೇರೆ ಯಾರಿಗೂ ಸೇರಿದ ಜೆಸಿಬಿ ತೋರಿಸಿ ರೈತನಿಂದ ಮತ್ತೆ 16 ಲಕ್ಷ ರೂ.ಗಳನ್ನು ಬ್ಯಾಂಕ್ ಮುಖಾಂತರ ತಮ್ಮ ಖಾತೆಗೆ ಹಾಕಿಸಿಕೊಂಡು ಜೆಸಿಬಿ ಕೊಡಸದೇ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ.

ಈ ಕುರಿತು ರೈತ ಬಸವಣ್ಣೆಪ್ಪ ನಾಗಪ್ಪ ಎಂಬುವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೀಟಿಂಗ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here