ಅಂದರ್-ಬಾಹರ್ ಜೂಜಾಟ-ಏಳು ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಜಿಲ್ಲೆಯ ಮುಂಡರಗಿ ಪಟ್ಟಣದ ‌ವ್ಯಾಪ್ತಿಯಲ್ಲಿ ಬರುವ ಎಸ್. ಎಫ್. ಎಸ್ ಸ್ಕೂಲ್ ಹಿಂದೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರ ತಂಡವನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ.

ಎಎಸ್ಐ ಎಸ್ ಟಿ ಕಡಬಿನ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಈ ದಾಳಿ ಮಾಡಿತ್ತು.

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ಪಟ್ಟಣದ ದುರ್ಗಾದೇವಿ ನಗರದ ದೇವರಾಜ ಯರಮಲ್ಲಪ್ಪ ಹಡಪದ, ಗರಡಿಮನೆ ಓಣಿಯ ಅಶೋಕ ಚಿದಾನಂದ ಈಳಿಗೇರ, ಎಸ್.ಎಸ್ ಪಾಟೀಲ ನಗರದ ಪಕ್ರುಸಾಬ ಅಬ್ದುಲ್ ಸಾಬ ಹಾರೋಗೇರಿ, ಎ.ಡಿ ನಗರದ ಸುರೇಶ್ ಲಿಂಗಪ್ಪ ಉಪ್ಪಾರ, ಎಸ್.ಎಸ್ ಪಾಟೀಲ ನಗರದ ನಿಂಗಪ್ಪ ಬಸನಗೌಡ ಕಾದ್ರಳ್ಳಿ, ಎ.ಡಿ ನಗರದ ಮಂಜಪ್ಪ ಭೀಮಪ್ಪ ಬಂಡಿವಡ್ಡರ್, ದುರ್ಗಾದೇವಿ ನಗರದ ಯಲ್ಲಪ್ಪ ಬಸಪ್ಪ ಕಲ್ಲೊಡ್ಡರ್ ಬಂಧಿತರು.

ಬಂಧಿತರಿಂದ ನಗದು 8900 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಪೊಲೀಸ್ ಆ್ಯಕ್ಟ್ 1963(U/s-87) 0229/2022 ರ ಅಡಿಯಲ್ಲಿ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here