ಶಾರ್ಟ್ ಸರ್ಕ್ಯೂಟ್; ಸುಟ್ಟು ಭಸ್ಮವಾದ ಬೆಳೆ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಗೋಧಿ (ಸದಕದ) ಬೆಳೆ ಸುಟ್ಟು ಭಸ್ಮವಾದ ಘಟನೆ ಜರುಗಿದೆ.

ತಾಲೂಕಿನ ರೆಡ್ಡೇರನಾಗನೂರ ಗ್ರಾಮದ ರೈತರಾದ ಮುದಿಗೌಡ ಶಂಕರಗೌಡ್ರ ಎಂಬುವರ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಿಡಿಗಳು ಗೋದಿ ಬೆಳೆಯಲ್ಲಿ ಬಿದ್ದಿರುವ ಕಾರಣ 2.5 ಎಕರೆ ಗೋಧಿ ಜಾತಿಯ ಸದಕದ ಬೆಳೆಯು ನಾಶವಾಗಿದೆ.

ಈ ಕುರಿತು ಮಾತನಾಡಿರುವ ಜಮೀನಿನ ಅಕ್ಕಪಕ್ಕದ ರೈತರು, ಹೆಚ್ಚಿಗೆ ವೋಲ್ಟೇಜ್ ಬಂದಿರುವ ಕಾರಣ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿಯ ಕಿಡಿಗಳಿಂದ ಸದಕದ ಬೆಳೆ ನಾಶವಾಗಿದೆ ಎಂದು ಆರೋಪಿಸಿದರು.

ಸಾವಿರಾರು ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ, ಇನ್ನೇನು ಕೈಗೆ ಬಂದ ತುತ್ತು, ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ವಿಧಿ ಪೂರ್ತಿ ಬೆಳೆಯನ್ನ ನುಂಗಿ ಹಾಕಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದು, ಸರಕಾರದಿಂದ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here