ಬೀರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ 1 ಲಕ್ಷ ರೂ. ನೆರವು

0
Spread the love

ನರಗುಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ರೂ. 1 ಲಕ್ಷ ರೂ ಡಿ ಡಿ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್ ಬಿ ಅಸೂಟಿ ಉದ್ಘಾಟಿಸಿದರು.

Advertisement

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಜಗದೀಶ ಭಂಡಾರಿ ಡಿಡಿ ವಿತರಿಸಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಂಡಿರುವ ಸಮಾಜಮುಖಿ ವಿವಿಧ ಕಾರ್ಯಕ್ರಮಗಳು ದೇವಾಲಯಗಳ ಸ್ವಚ್ಛತೆ ಜೀರ್ಣೋದ್ಧಾರ ಮಾಡುತ್ತಿರುವ ಮಹತ್ವದ ಕಾರ್ಯಕ್ರಮಗಳು ಕುರಿತು ಮಾಹಿತಿ ನೀಡಿದರು.

ದೇವಸ್ಥಾನ ಕಮಿಟಿ ಗೌರವಾಧ್ಯಕ್ಷರಾದ ಡಿ ವಾಯ್ ಕಾಡಪ್ಪನವರ, ತಾ.ಪಂ.ಮಾಜಿ ಅಧ್ಯಕ್ಷ ಪ್ರಕಾಶಗೌಡ್ರ ತಿರಕನಗೌಡ್ರ, ಸಮಾಜದ ಹಿರಿಯರಾದ ಡಿ ವೈ ಶಾಂತಗೇರಿ ಸಮಾಜದ ಹಿರಿಯರು ಭಾಗವಹಿಸಿದ್ದರು.

ದೇವಸ್ಥಾನದ ಕಮಿಟಿ ಅಧ್ಯಕ್ಷರು ಶರಣಪ್ಪ ಕಾಡಪ್ಪನವರ, ಕೊಣ್ಣೂರ ಮತ್ತು ಶಿರೋಳ ಗ್ರಾಮದ ಮೇಲ್ವಿಚಾರಕರಾದ ಗುರುರಾಜ ಬೆಳಗಲಿ, ನರೇಶ, ಸಂಗಪ್ಪ ಕಂಬಳಿ. ಬಸಯ್ಯ ಮಠದ. ನಜೀರ ಚಳ್ಳಮರದ. ಬಸವರಾಜ ಕಂಬಳಿ. ಶರಣಪ್ಪ ಸಂಗನಾಳ. ಸೇವಾ ಪ್ರತಿನಿದಿಗಳಾದ ಮಂಜುಳಾ. ಹೇಮಾ. ಒಕ್ಕೂಟದ ಪದಾಧಿಕಾರಿಗಳು ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಶಾಂತಗೇರಿ ಕಾರ್ಯಕ್ರಮ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here