ಬೈಕ್-ಬಸ್ ನಡುವೆ ಡಿಕ್ಕಿ; ಸ್ಥಳದಲ್ಲೇ ಬೈಕ್ ಸವಾರ ಸಾವು

0
Spread the love

ಮುಖಾಮುಖಿ ಡಿಕ್ಕಿ ಹೊಡೆದು ದುರ್ಘಟನೆ…..

Advertisement

ನವಲಗುಂದ: ಪಟ್ಟಣದ ಲಾಲಗುಡಿ ಮಾರುತಿ ದೇವಸ್ಥಾನದ ಎದುರಿನ ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದ ತಿಪ್ಪನಗೌಡ್ರ ಈಶ್ವರಗೌಡ್ರ ಅಡಿವೆಪ್ಪಗೌಡ್ರ (43) ಬೆಳವಟಗಿಯಿಂದ ದ್ವಿಚಕ್ರ ವಾಹನದಲ್ಲಿ ನವಲಗುಂದಕ್ಕೆ ಬರುತ್ತಿದ್ದಾಗ ಎದುರಗಡೆ ಬಂದ ಹುಬ್ಬಳ್ಳಿ-ಇಳಕಲ್ಲ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ತಿಪ್ಪನಗೌಡ್ರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯ್ದಿರಿಸಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ. 


Spread the love

LEAVE A REPLY

Please enter your comment!
Please enter your name here