ಅಂದರ್-ಬಾಹರ್ ಜೂಜಾಟ; ಆರು ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

Advertisement

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ತಂಡದ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ದಾಳಿ ಬಂಧಿಸಿದ್ದಾರೆ.

ಬಂಧಿತರನ್ನು ಪಂಚಾಕ್ಷರಿ ನಗರದ ಮೌನೇಶ್ ಗುರುಸಿದ್ದಪ್ಪ ಬಡಿಗೇರ, ಪಿ ಆಂಡ್ ಟಿ ಕ್ವಾರ್ಟರ್ಸ್ ನ ಸುಮಂತಕುಮಾರ್ ಮಂಜುನಾಥ್ ವಾಲ್ಮೀಕಿ, ವಿವೇಕಾನಂದ ನಗರದ ಪರಶುರಾಮ ಹನಮಂತಪ್ಪ ಸಂಗಟಿ, ಹಮಾಲರ ಪ್ಲಾಟ್ ನ ಮರ್ದಾನಸಾಬ ಖಾದರಸಾಬ ಕಾತರಕಿ, ನಿಸರ್ಗ ಬಡಾವಣೆಯ ರಾಜು ಗವಿಸಿದ್ದಪ್ಪ ಹಂಸನೂರ ಹಾಗೂ ರಮೇಶ್ ಹಾಲಸಿದ್ದಪ್ಪ ಅಳಗುಂಡಿ ಎಂದು ಗುರುತಿಸಲಾಗಿದೆ.

ಬಂಧಿತರು ಹಾತಲಗೇರಿ ರಿಂಗ್ ರೋಡ್, ಪಿಪಿಜಿ ಕಾಲೇಜ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಬಡಾವಣೆ ಠಾಣೆಯ ಪಿಎಸ್ಐ ವಗ್ಗರ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಬಂಧಿತರಿಂದ ನಗದು 4800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂಬರ್-0055/2023 ಕರ್ನಾಟಕ ಪೊಲೀಸ್ ಆಕ್ಟ್‌ 1963(U/s-87) ಎನ್.ಸಿ ನಂ.14/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here