ಬಂಧಿತರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಚಾಲಕ, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಹಲವು ಗಣ್ಯರು ಇದ್ದಾರೆ ಎನ್ನಲಾಗಿದೆ.
ವಿಜಯಸಾಕ್ಷಿ ಸುದ್ದಿ, ರೋಣ
ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆಯ ಮೇಲೆ ದಾಳಿ ಮಾಡಿದ ರೋಣ ಪೊಲೀಸರು ದೊಡ್ಡ ದೊಡ್ಡ ಕುಳಗಳನ್ನೆ ಬಲೆಗೆ ಕೆಡವಿದ್ದಾರೆ.
ತಾಲೂಕಿನ ಮಲ್ಲಾಪೂರ ಗ್ರಾಮದ ರೋಣ-ನರಗುಂದ ರಸ್ತೆಯ ಸಾಯಿ ದಾಬಾದ ಮುಂದೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವಿಕ್ರಮ ಬಸವರಾಜ್ ಚನ್ನಪ್ಪಗೌಡರ, ಭೀಮಪ್ಪ ಬಸಪ್ಪ ವನ್ನೂರ, ಬಸವರಾಜ್ ಶಿವಪ್ಪ ಕುಂದರಗಿ, ಮುತ್ತಪ್ಪ ಶಿವಪ್ಪ ಗಾಜಿ, ಜಗದೀಶ್ ಶಿವಪ್ಪ ಗಾರವಾಡ, ಡೊಬಲೇಶ್ ದಾಸರ್, ಶರಣಪ್ಪ ಶೇಖರಪ್ಪ ಪರಡ್ಡಿ, ಶಂಕರಪ್ಪ ಬಸವರಾಜ್ ಗದಗಿ, ಆಂಜನೇಯ ಕಾಶಪ್ಪ ಪತ್ತಾರ, ಸುರೇಶ್ ಹನಮಂತ ಭಜಂತ್ರಿ, ಪಕ್ಕೀರಪ್ಪ ಅಲಿಯಾಸ್ ಪ್ರಕಾಶ್ ಪರಪ್ಪ ಹಾಲನ್ನವರ್, ಸುರೇಶ್ ವೀರಭದ್ರಪ್ಪ ಗುಡಿಸಾಗರ್, ಸಂತೋಷ ಯಲ್ಲಪ್ಪ ಚಕ್ರಸಾಲಿ, ಶಿವನಗೌಡ ಮಹಾಂತಗೌಡ ಹಾದಿಮನಿ, ವಸಂತ ತಿಪ್ಪಣ್ಣ ಚಲವಾದಿ, ಹನಮಂತ ದ್ಯಾಮಪ್ಪ ಚಲವಾದಿ, ಜಗದೀಶ್ವರಯ್ಯ ವೀರಭದ್ರಯ್ಯ ವಸ್ತ್ರದ, ಭೀಮಪ್ಪ ರಾಮಪ್ಪ ಡೊಳ್ಳಿನ, ಈಶ್ವರಗೌಡ ಬಾಪುಗೌಡ ಸೂರಪ್ಪಗೌಡ್ರ, ಹನಮಂತಪ್ಪ ಯಲ್ಲಪ್ಪ ಚಲವಾದಿ ಹಾಗೂ ಖಾದಿರಸಾಬ್ ಕಾಶೀಮಸಾಬ ಸಂಕನೂರು ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ನಗದು 50,200 ರೂ.ಗಳನ್ನು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಪಡೆದ ರೋಣ ಠಾಣೆಯ ಪಿಎಸ್ಐ ಚಂದ್ರಶೇಖರ ಹೆರಕಲ್ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು.
ಬಂಧಿತರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಚಾಲಕ, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಹಲವು ಗಣ್ಯರು ಇದ್ದಾರೆ ಎನ್ನಲಾಗಿದೆ.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ-231/2022 ಕಲಂ 87 ಕೆ.ಪಿ ಯ್ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.