ಕಾರಿನಲ್ಲಿ ಸೇರಿದ್ದ ವಿಷಕಾರಿ ಹಾವು; ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಸ್ನೇಕ್ ಬುಡ್ಡಾ……..

0
Spread the love

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ಇಂಡಿಯನ್ ಕಾಮನ್ ಕ್ರೈಟ್ ಹಾವು.. …..

Advertisement

ವಿಜಯಸಾಕ್ಷಿ ಸುದ್ದಿ, ನರಗುಂದ

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ವಿಷಕಾರಿ ಹಾವು ಸೇರಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿ ಇರುವ ಹುಸೇನ್ ಅತ್ತಾರ್ ಎಂಬುವವರಿಗೆ ಸೇರಿದ ನ್ಯಾಷನಲ್ ಕಾರ್ ಮೋಟಾರ್ಸ್ ಗ್ಯಾರೇಜ್ ಗೆ ಇಂಡಿಕಾ ಕಾರೊಂದು ಸರ್ವಿಸ್ ಗೆ ಬಂದಿತ್ತು. ಅದರ ಬಾನೆಟ್ ನ ಕೆಳಗೆ ಕಟ್ಟಾವು ಅಂತ ಕರೆಯುವ ವಿಷಕಾರಿ ಹಾವು ಸೇರಿಕೊಂಡಿತ್ತು.

ಇದರಿಂದಾಗಿ ಗಾಬರಿಬಿದ್ದ ಮೆಕ್ಯಾನಿಕ್ ಉರಗ ತಜ್ಞ ಬುಡ್ನೆಸಾಬ ಸುರೇಬಾನ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಬುಡ್ನೆಸಾಬ, ಬಾನೆಟ್ ನಲ್ಲಿ ಇದ್ದ ಹಾವನ್ನು ಹೊರ ತೆಗೆದು ರಕ್ಷಣೆ ಮಾಡಿದರು.

ನಂತರ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುವ ಸ್ನೇಕ್ ಬುಡ್ನೆಸಾಬ, ಈ ವಿಷಕಾರಿ ಹಾವಿನ ಬಗ್ಗೆ ಮಾಹಿತಿ ನೀಡಿದ್ದು, ನಾಗರಹಾವುಗಿಂತಲೂ ಐದು ಪಟ್ಟು ಹೆಚ್ಚು ವಿಷಕಾರಿ ಹಾವು ಇದಾಗಿದ್ದು, ಯಾರಿಗಾದರೂ ಈ ಹಾವು ಕಚ್ಚಿದರೆ, ಕಚ್ಚಿದ ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here