*ಬಿಜೆಪಿ ಕಾರ್ಯಕ್ರಮವಾದ ಲಸಿಕಾ ಉದ್ಘಾಟನಾ ಕಾರ್ಯಕ್ರಮ
*ಸಚಿವರನ್ನು ಹಿಂಬಾಲಿಸಿ ಬಂದ ನಗರಸಭೆ ನೂತನ ಚುನಾಯಿತ ಸದಸ್ಯರು
*ಪತ್ರಕರ್ತರಿಗೆ ಮಿಸಲಿದ್ದ ಜಾಗ ಅಕ್ರಮಿಸಿ ಬೇಜಾವಬ್ದಾರಿ ಮರೆತ ಕಮಲ ಸದಸ್ಯರು
ವಿಜಯಸಾಕ್ಷಿ ಸುದ್ದಿ, ಗದಗ:
ಇಲ್ಲಿನ ಆದರ್ಶ ಶಿಕ್ಷಣ ಸಮಿತಿಯ ದೇವದತ್ತ ಶಂಕರರಾವ್ ಕುರ್ತಕೋಟಿ ಮೆಮೊರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ 15-18 ವರ್ಷದ ಮಕ್ಕಳ ಕೋವಿಡ್ ಕೋವ್ಯಾಕ್ಸಿನ್ ಲಸಿಕಾಕರಣಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದು ಸರ್ಕಾರಿ ಕಾಲೇಜ ಇದ್ದರು ಜಿಲ್ಲಾಡಳಿತಕ್ಕೆ ಖಾಸಗಿ ಕಾಲೇಜುಗಳ ಮೇಲೆ ಮೋಹ ಹೆಚ್ಚಾದಂತೆ ಕಾಣಿಸುತ್ತಿದೆ. ಸರ್ಕಾರದ ಮಹತ್ತರ ಕೋವಿಡ್ ಲಸಿಕಾಕರಣ ಚಾಲನೆ ಕಾರ್ಯಕ್ರಮವನ್ನು ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಿ ಜಾಗೃತಿ ಮೂಡಿಸುವುದು ಬಿಟ್ಟು ಅವಳಿ ನಗರದ ಅನುದಾನಿತ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ವಿಪರ್ಯಾಸ.

ಇನ್ನು ಲಸಿಕಾ ಉದ್ಘಾಟನಾ ಕಾರ್ಯಕ್ರಮವು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಸಚಿವರನ್ನು ಹಿಂಬಾಲಿಸಿ ಬಂದ ಗದಗ-ಬೆಟಗೇರಿ ನಗರಸಭೆ ನೂತನ ಚುನಾಯಿತ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಮಿಸಲಿರಿದ್ದ ಫ್ರಂಟ್ ಲೈನ್ ಜಾಗವನ್ನು ಅಕ್ರಮಿಸಿ ಬೇಜಾವಬ್ದಾರಿತನ ಮರೆತರು.

ಸರ್ಕಾರದ ನಿರ್ದೇಶನದ ಪ್ರಕಾರ ಮಕ್ಕಳ ಪಾಲಕರು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ ಕಾಲೇಜುಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಸೋಮವಾರ ಲಸಿಕಾಕರಣ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದ್ದ ಕಾರಣ ಸರ್ಕಾರಿ ಕಾಲೇಜಿನಲ್ಲಿ ಇನ್ನೂವರೆಗೂ ಪಾಲಕರ ಒಪ್ಪಿಗೆ ಸೂಚಿಸದ ಕಾರಣದಿಂದಾಗಿ ಅನುದಾನಿತ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ತಿಳಿಸಿದರು. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ಪಾಲಕರು ಲಸಿಕೆಗೆ ಸೂಚಿಸಿಲ್ಲ ಎನ್ನುವುದು ಅತ್ಯಂತ ದುರಾದೃಷ್ಟಕರ ಸಂಗತಿ.

ಈ ಸಂದರ್ಭದಲ್ಲಿ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಸಿಇಒ ಭರತ್, ಎಸ್ಪಿ ಶಿವಪ್ರಕಾಶ್ ದೇವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಡಿಡಿಪಿಯು ಎಂ.ಎಂ.ಕಾಂಬಳೆ, ನಗರಸಭೆಯ ಸದಸ್ಯ ಸುರೇಶ ಕಟ್ಟಿಮನಿ, ಡಿಎಚ್ ಒ ಡಾ.ಸತೀಶಬಸರಿಗಿಡದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.