ಭೀಕರ ರಸ್ತೆ ಅಪಘಾತ; ರೈತ ಸ್ಥಳದಲ್ಲಿಯೇ ಸಾವು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮೋಟಾರು ಸೈಕಲ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಸಮೀಪದ ಹೊಂಬಳ ರಸ್ತೆಯಲ್ಲಿ ಜರುಗಿದೆ.

ಪಶು ವಿಶ್ವವಿದ್ಯಾಲಯದ ಸಮೀಪ ನಡೆದ ಈ ದುರಂತದಲ್ಲಿ ಜಮೀನಿಗೆ ಬುತ್ತಿ ಕೊಡಲು ಟಿವಿಎಸ್ ಎಕ್ಸಲ್ ಮೋಟಾರು ಸೈಕಲ್‌ ಮೇಲೆ ಹೊರಟಿದ್ದ ಗದಗನ ಹಾಳದಿಬ್ಬ ನಿವಾಸಿ ಮಂಜುನಾಥ್ ಕಲಬಂಡಿ (27) ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು.

ಗದಗ ನಗರದಿಂದ ಹೊಂಬಳ ಕಡೆಗೆ ಹೊರಟಿದ್ದ ಕಾರು, ಮೋಟಾರು ಸೈಕಲ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸುಮಾರು 100ಮೀಟರ್ ನಷ್ಟು ದೂರಕ್ಕೆ ತಳ್ಳಿಕೊಂಡು ಹೋಗಿದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here