ಎಪಿಎಮ್ ಸಿಯಲ್ಲಿ ಅಂದರ್-ಬಾಹರ್ ಜೂಜಾಟ; ಏಳು ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಏಳು ಜನರ ತಂಡವೊಂದು ಎಪಿಎಮ್ ಸಿ ಯಲ್ಲಿ‌ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ ಎಂಟು ಸಾವಿರ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ್ ಬಸಪ್ಪ ಜಾಬದಿ, ರವಿ ಗದಿಗೆಪ್ಪ ಸೊಪ್ಪಿನ, ನಿಂಗಪ್ಪ ಮಲ್ಲಪ್ಪ ಗೌಡನಾಯ್ಕರ್, ಅಮರೇಶ್ ಬಸವರಾಜ್ ಮಳ್ಳೆಪ್ಪನವರ್, ಅಭಿಷೇಕ ಪರಶುರಾಮ ಸಾತಪುತೆ, ಸಂಜೀವ್ ವೀರಭದ್ರಪ್ಪ ರಾಗಿ ಹಾಗೂ ಗೂಳಪ್ಪ ಚನ್ನಪ್ಪ ಕಳಾಸೂರು ಎಂಬುವರನ್ನು ಪೊಲೀಸರು ದಾಳಿ ಬಂಧಿಸಿದ್ದಾರೆ.

ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here