HomeCrime News11ರೂ ಕಾಣಿಕೆ ಸಲ್ಲಿಸಿ ಹನಮನ ಮೂರ್ತಿ ಕದ್ದೊಯ್ದ ಕಳ್ಳರು!

11ರೂ ಕಾಣಿಕೆ ಸಲ್ಲಿಸಿ ಹನಮನ ಮೂರ್ತಿ ಕದ್ದೊಯ್ದ ಕಳ್ಳರು!

Spread the love

ಮರಡಿ ಹನುಮಂತ ದೇವಸ್ಥಾನದಲ್ಲಿ ನಡೆದ ಪ್ರಕರಣ….ಹನುಮನ ಮೂರ್ತಿ ಕದ್ದೊಯ್ದ ಕಳ್ಳರು!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಸೂರಣಗಿ ಗ್ರಾಪಂ ವ್ಯಾಪ್ತಿಯ ದೊಡ್ಡೂರ-ಸುವರ್ಣಗಿರಿ ತಾಂಡಾ- ಯಲ್ಲಾಪುರ ಮಾರ್ಗದಲ್ಲಿ ಮರಡಿ ಹನಮಂತದೇವರ ದೇವಸ್ಥಾನದಲ್ಲಿನ ಹನಮಂತದೇವರ ಕಲ್ಲಿನ ದೊಡ್ಡದಾದ ಮೂರ್ತಿಯನ್ನೇ ಖದೀಮರು ಶನಿವಾರ ಕದ್ದೊಯ್ದಿದ್ದಾರೆ.

ಮೂರ್ತಿ ಕದ್ದೊಯುವ ಮೊದಲು ಅಲ್ಲಿ ಪೂಜೆ ಸಲ್ಲಿಸಿ. 11 ರೂ. ಕಾಣಿಕೆ ಮತ್ತು ಅಲ್ಲಲ್ಲಿ ಲಿಂಬೆಹಣ್ಣು ಇಟ್ಟು ಮೂರ್ತಿ ತೆಗೆದುಕೊಂಡು ಹೋಗಿದ್ದಾರೆ.

ಸುತ್ತಲಿನ ಗ್ರಾಮದ ದೇವರ ದರ್ಶನಕ್ಕೆ ಬೆಳ್ಳಬೆಳಿಗ್ಗೆ ಆಗಮಿಸಿದ್ದ ಭಕ್ತರು ಗುಡಿಯಲ್ಲಿ ದೇವರ ಮೂರ್ತಿ ಇಲ್ಲದ್ದನ್ನು ಕಂಡು ಗಾಬರಿಯಗಿದ್ದಾರೆ.

ಅತ್ಯಂತ ಪುರಾತನವಾದ ಈ ದೇವಸ್ಥಾನ ಇತ್ತೀಚೆಗೆ ಬಹಳಷ್ಟು ಪ್ರಸಿದ್ಧಿ ಮತ್ತು ಭಕ್ತರ ಗಮನ ಸೆಳೆದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಈ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದರು. ಹೊರವಲಯದಲ್ಲಿರುವ ಈ ದೇವಸ್ಥಾನದಲ್ಲಿನ ಸಣ್ಣ ಆಭರಣಗಳು, ಘಂಟೆಗಳ ಕಳ್ಳತನ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಖದೀಮರು ನಾಲ್ಕೈದು ಅಡಿ ಎತ್ತರದ ದೇವರ ಮೂರ್ತಿಯನ್ನೇ ಕದ್ದೊಯ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ ಒಂದೇ ವಾರದಲ್ಲಿ ನಾಲ್ಕು ಕಡೆ ದಾಳಿ; ಲಕ್ಷಾಂತರ ರೂ ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಶಂಕ್ರಪ್ಪ ಶೀರನಹಳ್ಳಿ, ಉಪಾಧ್ಯಕ್ಷ ಸಕ್ರಪ್ಪ ನಾಯಕ, ಪ್ರ.ಕಾರ್ಯದರ್ಶಿ ಶರಣಪ್ಪ ಇಚ್ಚಂಗಿ, ಶಶಿಕಾಂತ ಕಾರಭಾರಿ, ಆನಂದ ಪೂಜಾರ, ಚಂದ್ರಪ್ಪ ಮೂಲಿಮನಿ ಸೇರಿ ಗ್ರಾಮಸ್ಥರು ಮೂರ್ತಿ ಕಳ್ಳರ ಪತ್ತೆ ಮಾಡಿ ಮೂರ್ತಿ ಪುನರ್ ಪ್ರತಿಷ್ಠಾಪಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಲಕ್ಷ್ಮೇಶ್ವರ ಪಿಎಸ್ಐ ಪ್ರಕಾಶ್ ಡಿ, ಘಟನೆಯ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!