ಗದಗ ಪೊಲೀಸರ ಕಾರ್ಯಾಚರಣೆ; ನಕಲಿ ಐ.ಟಿ ಅಧಿಕಾರಿ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗ ನಗರದ ಬಂಗಾರದ ಅಂಗಡಿಯಲ್ಲಿ ಐ.ಟಿ ಅಧಿಕಾರಿ ಎಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಹಣ ಆರ ಟಿ ಜಿ ಎಸ್ ಮೂಲಕ ಮಾಡ್ತೀನಿ ಅಂತ ವಂಚನೆ ಮಾಡಿ ಪರಾರಿಯಾಗಿದ್ದ ಯುವಕನನ್ನು ಶಹರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ್, ಜುಲೈ 20 ರಂದು ಈ ಘಟನೆ ನಡೆದಿತ್ತು. ಪ್ರಕರಣ ದಾಖಲಾದ ನಂತರ ಎಸ್ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐಗಳಾದ ಶರಣಬಸಪ್ಪ ಸಂಗಳದ, ಬಿ.ಟಿ ತಳವಾರ, ಎಎಸ್ಐ ವಾಯ್ ಬಿ ಪಾಟೀಲ್, ಸಿಬ್ಬಂದಿಗಳಾದ ಎಸ್ ಎಸ್ ಮಾವಿನಕಾಯಿ,ಯು ಎನ್ ಸುಣಗಾರ, ಕೆ. ಡಿ ಜಮಾದಾರ, ಪಿ ಎಸ್ ಕಲ್ಲೂರ, ಶ್ರೀಮತಿ ಆರ್ ಎನ್ ಬಾಲರಡ್ಡಿ, ಯು. ಎಸ್ ಹೊಸಳ್ಳಿ ತಂಡ ರಚಿಸಲಾಗಿತ್ತು.

ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿ ಬೀದರದ ವಿಶಾಲ್ ತಂದೆ ರಾಜಕುಮಾರ ನೀಲಂ ಎಂಬಾತನನ್ನು ಬಂಧಿಸಿ, ಆತನಿಂದ ವಂಚನೆಗೈದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಆರೋಪಿ ವಿಶಾಲ್ ‌ನೀಲಂ ಇದೇ‌ ದಂಧೆಯನ್ನಾಗಿ ಹವ್ಯಾಸ ಮಾಡಿಕೊಂಡಿದ್ದು, ಓಡಿಸ್ಸಾದ ಬ್ರಹ್ಮಾಪೂರ, ಮಹಾರಾಷ್ಟ್ರದ ಲಾತೂರ್, ಛತ್ತೀಸ್ ಗಡ ಸೇರಿದಂತೆ ರಾಜ್ಯದ ರಾಯಚೂರು, ಬೆಂಗಳೂರನಲ್ಲೂ ಇಂತಹದ್ದೇ ವಂಚನೆ ಮಾಡಿದ್ದಾನೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದರು.

ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ಲೀಲಾ ಲೆಹರ್ ಗೋಲ್ಡ್ ಪ್ಯಾಲೇಸ್ ಆಭರಣದ ಅಂಗಡಿಯಲ್ಲಿ ಜುಲೈ 20 ರಂದು ಸಂಜೆ ವ್ಯಕ್ತಿಯೊಬ್ಬ, ನಾನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಧಾಯ ತೆರಿಗೆ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ಚೈನ್, ಕಪಲ್ ರಿಂಗ್ ಸೇರಿದಂತೆ ಒಟ್ಟು 1, 89,220 ರೂ. ಮೌಲ್ಯದ ಆಭರಣಗಳನ್ನು ಖರೀದಿಸಿ, ಹಣ ಆರ್ ಟಿ ಜಿ ಸ್ ಮೂಲಕ ಪಾವತಿ ಮಾಡುವುದಾಗಿ ಬ್ಯಾಂಕ್ ಖಾತೆ ವಿವರ ಪಡೆದು ಖಾತೆಗೆ ಹಣ ಹಾಕದೆ ಮೋಸ ಮಾಡಿದ್ದ ಬಗ್ಗೆ ಅರ್ಪಿತ್ ಜೈನ ಎಂಬುವವರು ದೂರು ನೀಡಿದ್ದರು.


Spread the love

LEAVE A REPLY

Please enter your comment!
Please enter your name here