ವಿಜಯಸಾಕ್ಷಿ ಸುದ್ದಿ, ಗದಗ:
ಬೆಟಗೇರಿ ಬಡಾವಣೆ, ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಶೀಟರ್ಗಳಿಗೆ ಪೊಲೀಸ್ ಪರೇಡ್ ನಡೆಸಲಾಯಿತು. ನಗರದ ಹೆಲ್ತ್ ಕ್ಯಾಂಪ್ ಬಳಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲಿ 40ಕ್ಕೂ ಹೆಚ್ಚು ರೌಡಿ ಶೀಟರ್ಗಳನ್ನು ಕರೆಯಿಸಿ, ಯಾವುದೇ ರೀತಿಯ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಕೊಳ್ಳದಂತೆ ಖಡಕ್ ಎಚ್ಚರಿಕೆ ನೀಡಲಾಯಿತು.
ಈಗಾಗಲೇ ಬೇರೆಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ಗಳಿಗೆ ಡಿವೈಎಸ್ಪಿ ವಿಜಯ ಬಿರಾದಾರ್, ಇನ್ನು ಮುಂದೆ ಇಂಥಹ ಕೀಳು ಮಟ್ಟದ ಕೆಲಸಗಳನನು ಬಿಟ್ಟು ಶಾಂತ, ಮರ್ಯಾದಸ್ಥ ಉದ್ಯೋಗ ಮಾಡಿ ರೌಡಿಗಳು ಎಂಬ ಹಣೆಪಟ್ಟಿಯನ್ನು ಕಳಚಿ ಜೀವನ ನಡೆಸಿ ಎಂದು ಬುದ್ಧಿವಾದ ಹೇಳಿದರು. ಮುಂದಿನ ದಿನಗಳಲ್ಲಿ ಇಂಥ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿ ಠಾಣೆಯ ಮೆಟ್ಟಿಲು ಹತ್ತುವಂತಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ರೌಡಿ ಶೀಟರ್ ಪರೇಡ್ ಸಮಯದಲ್ಲಿ ಬೆಟಗೇರಿಯ ಸಿಪಿಐ ಬಿ.ಜಿ.ಸುಬ್ಬಾಪೂರಮಠ, ಬಡಾವಣೆಯ ಪಿಎಸ್ಐ ಆರ್.ಆರ್.ಮುಂಡೆವಾಡಗಿ, ಬೆಟಗೇರಿಯ ಪಿಎಸ್ ಐ ಪ್ರಕಾಶ ಬಣಾಕಾರ, ಪಿಎಸ್ಐ(ಕ್ರೈಂ) ಎಚ್.ಎಚ್.ನೀಲಗುಂದ, ಎಎಸ್ಐ ಎಮ್.ಎಸ್.ಪಾಟೀಲ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.