ವಿಶ್ವ ಕಾರ್ಮಿಕರ ದಿನಾಚರಣೆ

0
vishwakarma
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಿಶ್ವಕರ್ಮ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

Advertisement

ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಡಿ. ಕಡ್ಲಿಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ಕಲ್ಯಾಣದಲ್ಲಿಯೇ ದೇಶದ ಕಲ್ಯಾಣ ಅಡಗಿದೆ ಎಂದರು. ಕಾರ್ಮಿಕರ ಸಂಘದ ಅಧ್ಯಕ್ಷ ವೀರಣ್ಣ ಹಲವಾಗಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ನಾಗರಾಜ್ ಕಮ್ಮಾರ್, ರಾಘವೇಂದ್ರ ಬಡಿಗೇರ್, ಸಂಘದ ಪದಾಧಿಕಾರಿಗಳಾದ ಶಂಕರಾಚಾರ್ಯ ಪತ್ತಾರ್, ಮಹೇಶ್ ಬಡಿಗೇರ್, ಪ್ರಕಾಶ್ ಬಡಿಗೇರ್, ಈರಣ್ಣ ಪತ್ತಾರ್, ಈಶ್ವರ್ ಪತ್ತಾರ್, ವಿಶ್ವನಾಥ್ ಬಡಿಗೇರ್, ಕುಮಾರ್ ಬಡಿಗೇರ್, ಚೇತನ್ ಹುಲಬಜಾರ್, ಮೌನೇಶ್ ಪತ್ತಾರ್, ಮೌನೇಶ್ ಬಡಿಗೇರ್, ಚಿನ್ನಪ್ಪ ಬಡಿಗೇರ್, ಯುವ ಪರಿಷತ್ ಅಧ್ಯಕ್ಷರಾದ ಮಹೇಶ್ ಕಮ್ಮಾರ್, ಮಹಾಸಭಾಧ್ಯಕ್ಷ ದೇವೇಂದ್ರಪ್ಪ ಬಡಿಗೇರ್ ಹಾಗೂ ಸಮಾಜದ ಯುವ ಮುಖಂಡರು, ಗ್ರಾಮಸ್ಥರು ಭಾಗಿಯಾಗಿದ್ದರು.


Spread the love

LEAVE A REPLY

Please enter your comment!
Please enter your name here