ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬುಧವಾರ ಗದುಗಿನ ಶ್ರೀ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿಗಳಾದ ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ನಂತರ ಮಠಕ್ಕೆ ಆಗಮಿಸಿದ್ದ ಭಕ್ತರೊಡನೆ ಕೆಲಹೊತ್ತು ಮಾತುಕತೆ ನಡೆಸಿ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಿಮ್ಮ ಮತದಾನ ದೇಶದ ಭವಿಷ್ಯ ನಿರ್ಮಾಣಕ್ಕೆ ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕುಷ್ಟಗಿ ದೊಡ್ಡನಗೌಡರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಬಸವಣ್ಣೆಪ್ಪ ಚಿಂಚಲಿ, ಅಶೋಕ ಸಂಕಣ್ಣವರ, ಭದ್ರೇಶ ಕುಸಲಾಪುರ, ದ್ಯಾಮಣ್ಣ ನೀಲಗುಂದ, ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥಸ್ವಾಮಿ, ಫಕ್ಕಿರೇಶ್ವ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ರವಿಂದ್ರನಾಥ ದಂಡಿನ, ಕೆ.ಪಿ. ಕೋಟಿಗೌಡರ, ರಮೇಶ ಸಜ್ಜಾಗಾರ, ಅಮರನಾಥ ಬೆಟಗೇರಿ, ಅಮರನಾಥ ಗಡಗಿ, ಸುಧೀರ ಕಾಟಿಗಾರ, ವೆಂಕಟೇಶ ಹಬೀಬ, ಬಸವರಾಜ ಹಡಪದ, ಸಂತೋಷ ಮೇಲಗಿರಿ, ಗಂಗಾಧರ ಮೇಲಗಿರಿ, ಸುರೇಶ ಮರಳಪ್ಪನವರ, ಸುರೇಶ ಹೆಬಸೂರ, ಶಂಕರ, ಪಂಚಾಕ್ಷರಿ ಅಂಗಡಿ, ವಿನಾಯಕ ಹಬೀಬ, ಸಂತೋಷ ಅಕ್ಕಿ, ಟಿ.ಡಿ. ಪೂಜಾರ, ಬಾಗಪ್ಪ ವಗ್ಗರ, ಮಂಜುನಾಥ ಹಳ್ಳ್ಳೂರಮಠ, ವಿಠ್ಠಲ ತೋಟದ, ಶರಣಪ್ಪ ಚಿಂಚಲಿ, ಪರಮೇಶ ನಾಯಕ, ಭೋಜಪ್ಪ ಲಮಾಣಿ, ಕುಮಾರ ಕಟ್ಟಿಮನಿ, ಮಂಜು ವಡ್ಡರ, ಮುತ್ತು ಇಟಗಿಮಠ, ಗಣೇಶ ಗಂಟಿ, ಶರಣಪ್ಪ ಚಿಂಚಲಿ, ಸುರೇಶ ಚವ್ಹಾಣ, ರಾಜೇಂದ್ರಪ್ರಸಾದ ಹೊಂಗಲ್ ಸೇರಿದಂತೆ ಕಾರ್ಯಕರ್ತರು ಇದ್ದರು.